ಗೌರಿಕುಂಡ್ ಬಳಿ ಭೂಕುಸಿತ, 5 ಜನ ಸಾವು

ಡೆಹ್ರಾಡೂನ್‌: ಗುಪ್ತಕಾಶಿ ಗೌರಿಕುಂಡ್‌ ಹೆದ್ದಾರಿಯ ತರ್ಸಾಲಿ ಎಂಬಲ್ಲಿ ಭೀಕರ ಮಳೆಯಿಂದಾಗಿ ಭೂಕುಸಿತ ಉಂಟಾದ ಪರಿಣಾಮ ಕಾರಿನಲ್ಲಿದ್ದ ಐದು ಜನ ಯಾತ್ರಾರ್ಥಿಗಳು ಸ್ಥಳದಲ್ಲಿಯೇ ಮೃತಪಟ್ಟಿರುವ ಘಟನೆ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಕೇದರನಾಥಕ್ಕೆ ಹೊರಡುವ ಮಾರ್ಗ ಮಧ್ಯದಲ್ಲಿ ಈ ದುರಂತ ಸಂಭವಿಸಿದೆ.

ಇದನ್ನೂ ಓದಿ:ವಸಾಹತುಶಾಹಿ ‘ದೇಶದ್ರೋಹ ಕಾನೂನು’ ರದ್ದು; ಕಠಿಣ ಶಿಕ್ಷೆಯೊಂದಿಗೆ ಹೊಸ ರೂಪದಲ್ಲಿ ಪರಿಚಯ?

ಗುರುವಾರ ತಡರಾತ್ರಿ ಕಾರು ನಾಪತ್ತೆಯಾಗಿರುವ ಬಗ್ಗೆ ಮಾಹಿತಿ ಬಂದಿತ್ತು.ಆದರೆ ಹವಾಮಾನ ವೈಪರೀತ್ಯದಿಂದಾಗಿ ಶುಕ್ರವಾರದಂದು ರಕ್ಷಣಾ ಕಾರ್ಯಾಚರಣೆಯನ್ನು ಸ್ವಿಫ್ಟ್‌ ಡಿಜೈರ್‌ ಕಾರು ಹಾಗೂ ಮೃತದೇಹವನ್ನು ಹೊರ ತೆಗೆಯಲಾಯಿತು ಎಂದು ರುದ್ರಪ್ರಯಾಗ ಜಿಲ್ಲಾ ವಿಪತ್ತು ನಿರ್ವಹಣಾಧಿಕಾರಿ ನಂದನ್‌ ಸಿಂಗ್‌ ರಾಜ್ವಾರ್‌ ತಿಳಿಸಿದ್ದಾರೆ. ಮೃತರನ್ನು ಗುಜರಾತ್‌ ಮೂಲದವರು ಎಂದು ಗುರುತಿಸಲಾಗಿದೆ.

ಭೂಕುಸಿತದಿಂದ ಗುಪ್ತಕಾಶಿ ಗೌರಿಕುಂಡ್‌ ಹೆದ್ದಾರಿಯ 60 ಕಿ.ಮೀ ಉದ್ದದ ರಸ್ತೆ ಮಾರ್ಗ ಕಡಿತಗೊಂಡಿದೆ.ಫಟಾ ಮತ್ತು ಸೋನ್‌ಪ್ರಯಾಗ್‌ ನಡುವೆ ರಸ್ತೆ ಸಂಚಾರವೂ ಸ್ಥಗಿತಗೊಂಡಿದೆ.

Donate Janashakthi Media

Leave a Reply

Your email address will not be published. Required fields are marked *