ಕೆಪಿಎಸ್ಸಿ ಅಂಗೈ ಶುದ್ಧಗೊಳ್ಳೋದು ಯಾವಾಗ?!

ರಾಜ್ಯದಲ್ಲಿ ನೇಮಕಾತಿಗಳಿಗೆ, ಬಡ್ತಿಗಳಿಗೆ ಪರೀಕ್ಷೆ ನಡೆಸುವ  ಕರ್ನಾಟಕ ಲೋಕಸೇವಾ ಆಯೋಗ ಹಲವು ವರ್ಷಗಳಿಂದ ಬ್ರಷ್ಟಾಚಾರದಲ್ಲಿ ಮುಳಗಿ ಹೋಗಿದೆ. ಜಾರಿಯಾಗದೆ ಮರೆಯಾಗ್ತಾ ಇದೆಯಾ ಹೋಟಾ ಸಮಿತಿ ಶಿಫಾರಸ್ಸು. ಕೆ.ಪಿ.ಎಸ್.ಸಿ ಅಂಗೈ ಶುದ್ಧಗೊಳ್ಳೊದು ಯಾವಾಗ? ಎಂಬ ಸಾರ್ವಜನಿಕ ವಲಯದಲ್ಲಿ ಹಲವು ಪ್ರಶ್ನೆಗಳು ಉದ್ಭವಿಸುತ್ತಿದೆ.

ಕಳೆದ ವಾರ ನಡೆಯಬೇಕಿದ್ದ ಎಫ್.ಡಿ.ಎ ಪ್ರಶ್ನೆಪತ್ರಿಕೆ ಸೋರಿಕೆಯ ಕಾರಣದಿಂದ ರದ್ದಾಗಿದ್ದು ನಿಮಗೆಲ್ಲ ಗೊತ್ತಿರುವ ವಿಚಾರ.  ಕೆ.ಪಿ.ಎಸ್.ಸಿ ಇಲಾಖೆಯ ಇಬ್ಬರೂ ಸಿಬ್ಬಂದಿ ಸಿಸಿಬಿಯರ ಕೈಯಲ್ಲಿ ಸಿಕ್ಕಿಬಿದ್ದಿದ್ದಾರೆ. ಸಿಸಿಬಿ ಪೊಲೀಸರು ಅವರನ್ನು ವಿಚಾರಣೆ ಮಾಡುತ್ತಿದ್ದಾರೆ. ಪ್ರಕರಣದ ಜಾಲ ದೊಡ್ಡದಿದ್ದು ಸೋರಿಕೆಯ ಹಿಂದಿರುವ ಕೈಗಳನ್ನು ಪತ್ತೆ ಹತ್ತುವ ಸಾಧ್ಯತೆ ಇದೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ : ಪ್ರಶ್ನೆ ಪತ್ರಿಕೆ ಸೋರಿಕೆ ನಾಳೆ ನಡೆಯಬೇಕಿದ್ದ ಎಫ್ ಡಿಎ ಪರೀಕ್ಷೆ ಮುಂದೂಡಿಕೆ

ಆದರೆ ಸರಕಾರ ತನ್ನ ಜವಬ್ದಾರಿಯನ್ನು ಯಾಕೆ ನಿರ್ವಹಣೆ ಮಾಡುತ್ತಿಲ್ಲ ಎನ್ನುವ ಪ್ರಶ್ನೆಗಳು ಎದ್ದಿವೆ. ಯಾಕಂದರೆ ಲೋಕಸೇವಾ ಆಯೋಗದ ಅಂಗೈಯನ್ನು ಶುದ್ದಗೊಳಿಸುವ ಜವಬ್ದಾರಿ ಸರಕಾರದ್ದಾಗಿದೆ. ಕೆಪಿಎಸ್ಸಿ ಕರ್ಮಕಾಂಡ ಇವತ್ತು ನಿನ್ನೆಯದು ಅಲ್ಲ. ಹತ್ತಕ್ಕೂ ಹೆಚ್ಚು ವರ್ಷಗಳಿಂದ ಪ್ರಶ್ನೆ ಪತ್ರಿಕೆ ಸೋರಿಕೆ, ಅಕ್ರಮ ನೇಮಕಾತಿ, ಭ್ರಷ್ಟಾಚಾರದಂತಹ ಆರೋಪಗಳು ಕೇಳಿ ಬರುತ್ತೀವೆ.  ಸ್ವತಃ ಹೈಕೋರ್ಟ್  ಕ್ರಮವನ್ನು ಕೈಗೊಳ್ಳಬೇಕು ಅಂತಾ ಹೇಳಿದ್ದರೂ ಕೂಡಾ ಇಲ್ಲಿವಯರೆಗೆ ಕ್ರಮ ಜರುಗಿಸಿರುವ ಉದಾಹರಣೆಗಳಿಲ್ಲ, ಯಾಕೆ ಅಂದ್ರೆ ಈ ಕೂಪದಲ್ಲಿ ಪ್ರಭಾವಿ ರಾಜಕಾರಿಗಳು ಇರಬಹುದು ಎಂದು ಬಹಳಷ್ಟು ಜನ ಆರೋಪವನ್ನು ಮಾಡ್ತಾ ಇದ್ದಾರೆ.

1998, 1999, 2004ರ ಕೆಎಎಸ್ ಅಧಿಕಾರಿಗಳ ನೇಮಕಾತಿಗೆ ಸಂಬಂಧಿಸಿದಂತೆ ಭಾರೀ ಭ್ರಷ್ಟಾಚಾರ, ಅವ್ಯವಹಾರ ಮತ್ತು ಅಕ್ರಮಗಳು ಜರುಗಿರುವುದು ಸಿಐಡಿ ತನಿಖೆ ಮತ್ತು ಹೈಕೋರ್ಟ್ ನೇಮಿಸಿದ್ದ ಸತ್ಯಶೋಧನೆ ಸಮಿತಿಯ ವರದಿಗಳಿಂದ ಬಹಿರಂಗವಾಗಿದೆ. ಅನೇಕ ವರ್ಷಗಳಿಂದ ಆಯೋಗದ ಸದಸ್ಯರಾಗಿದ್ದ ಮತ್ತು 2001 ರಿಂದ 2007 ರವರೆಗೆ ಅಧ್ಯಕ್ಷರಾಗಿದ್ದ ಡಾ.ಎಚ್.ಎನ್.ಕೃಷ್ಣ ಈ ಎಲ್ಲಾ ಹಗರಣಗಳ ರೂವಾರಿಯಾಗಿದ್ದರು ಮತ್ತು ಅವರು ಎಸ್.ಎಂ.ಕೃಷ್ಣ ಮತ್ತು ಕುಮಾರಸ್ವಾಮಿಯವರಿಗೆ ಪರಮಾಪ್ತರೂ ಆಗಿದ್ದರು. ಇವು ಕೆಲವಿಷ್ಟು ಹೆಸರು ಮಾತ್ರ ಹೀಗೆ ಪಟ್ಟಿ ಬೆಳೆಯುತ್ತಲೆ ಹೋಗುತ್ತದೆ.  ಆದರೆ ತಪ್ಪು ಮಾಡಿದವರಿಗೆ ಶಿಕ್ಷೆ ಮಾತ್ರ ಆಗಿಲ್ಲ. 2011 ರಲ್ಲೂ ಕೆ.ಎ.ಎಸ್ ನೇಮಕ ಹಗರಣ ಸಾಕಷ್ಟು ಸದ್ದು ಮಾಡಿತ್ತು. ಕಳೆದ ಆರೇಳು ವರ್ಷದಿಂದ ನಿರಂತರವಾಗಿ ಪ್ರಶ್ನೆ ಪತ್ರಿಕೆಗಳು ಸೋರಿಕಾಯುಗುತ್ತಲೆ ಬಂದಿವೆ.  ಕೆಪಿಎಸ್ಸಿ ಅಕ್ರಮಗಳನ್ನು ತಡೆಯೋದಕ್ಕಾಗಿ ಯುಪಿಎಸ್.ಸಿ ನಿವೃತ್ತ ಅಧ್ಯಕ್ಷರಾಗಿದ್ದ ಪಿ.ಎಸ್. ಹೋಟಾ ಸಮಿತಿ ಕೆಲ ಶಿಫಾರಸ್ಸುಗಳನ್ನು ನೀಡಿತ್ತು, ಆ ಶಿಫಾರಸ್ಸುಗಳು ಇನ್ನೂ ಜಾರಿಯಾಗಿಲ್ಲ.

ಹೋಟಾ ಸಮಿತಿ ನೀಡಿದ್ದ ಪ್ರಮುಖ ಶಿಫಾರಸ್ಸುಗಳು  ಈ ರೀತಿ ಇವೆ.

ಪ್ರತಿ ಎರಡು ವರ್ಷಕ್ಕೋಮ್ಮೆ ಕೆಪಿಎಸ್ಸಿ ಸಿಬ್ಬಂದಿಯ ಬದಲಾವಣೆ ಆಗಬೇಕು. ಮುಖ್ಯ ಪರೀಕ್ಷೆಯ ಅಂಕಗಳನ್ನು ಅಭ್ಯರ್ಥಿಗಳಿಗೆ ಹೇಳಬಾರದು, ಸಂದರ್ಶನಕ್ಕೆ ಅರ್ಹರಾದವರ ಪಟ್ಟಿಯನ್ನು ಮೊದಲೆ ಬಿಡುಗಡೆ ಮಾಡಬೇಕು, ದಿನಕ್ಕೆ 9 ಜನರನ್ನು ಮಾತ್ರ ಸಂದರ್ಶನಕ್ಕೆ ಕರೆಯಬೇಕು. 30 ನಿಮಿಷಕ್ಕಿಂತ ಹೆಚ್ಚಿನ ಸಂದರ್ಶನ ಇರಬಾರದು ಎಂಬುದು ಸೇರಿದಂತೆ ಕೆ.ಪಿಎಸ್.ಸಿ ಯನ್ನು ಶುದ್ಧೀಕರಿಸಲು ಹೋಟಾ ಸಮಿತಿ ಶಿಫಾರಸ್ಸುಗಳನ್ನು ನೀಡಿತ್ತು.

ಇದನ್ನು ಓದಿ : ಎಫ್.ಡಿ.ಎ ಪ್ರಶ್ನೆ ಪತ್ರಿಕೆ ಸೋರಿಕೆ ಮಾಡಿದ್ದು ವಾಣಿಜ್ಯ ತೆರಿಗೆ ಇನ್ಸಪೆಕ್ಟರ್

ಲೋಕಸೇವಾ ಆಯೋಗದಲ್ಲಿನ ಭ್ರಷ್ಟಾಚಾರ, ಅಕ್ರಮಗಳನ್ನು ತಡೆಹಿಡಿಯುವುದಾಗಿ ಕಾಂಗ್ರೆಸ್, ಬಿಜೆಪಿ, ಜೆಡಿಎಸ್ ಪಕ್ಷಗಳು ಚುನಾವಣೆಯಲ್ಲಿ ಹೇಳುತ್ತಲೆ ಬಂದಿವೆ. ಆದರೆ ಇಲ್ಲಿಯವರೆಗೆ ತಪ್ಪು ಮಾಡಿದ ಅಧಿಕಾರಿಗಳಿಗೆ, ಸಿಬ್ಬಂದಿಗಳಿಗೆ ಶಿಕ್ಷೆಯನ್ನು ನೀಡಿಲ್ಲ.  ಮಾಜಿ ಅಧ್ಯಕ್ಷರಾದ ಹೆಚ್.ಎನ್. ಕೃಷ್ಣ, ಗೋನಾಳು ಭಿಮಪ್ಪರವರ ಮೇಲಿನ ವಿಚಾರಣೆಯನ್ನು ಇನ್ನೂ ಪೂರ್ಣಗೊಳಿಸಲಾಗಿಲ್ಲ.  ಪ್ರತಿವರ್ಷ ನಾವು ಅರ್ಜಿಹಾಕುತ್ತೇವೆ, ಅವರ ಪ್ರಶ್ನೆಪತ್ರಿಕೆ ಮಾರಾಟ ಮಾಡ್ತಾರೆ. ಶಿಕ್ಷಣವೂ ಮಾರಾಟ ಆಗಿದೆ, ಉದ್ಯೋಗವೂ ಮಾರಾಟ ಆಗುತ್ತಿದೆ. ನಮ್ಮಗೋಳು ಕೇಳೊರು ಯಾರು ಅಂತಾ ಪರೀಕ್ಷಾರ್ಥಿಗಳು ಸರಕಾರವನ್ನು ಪ್ರಶ್ನಿಸುತ್ತಿದ್ದಾರೆ.

ಕೆಪಿಎಸ್ಸಿ ತನ್ನ ಅಂಗೈನಲ್ಲಿ ದೊಡ್ಡಪ್ರಮಾಣದ ಭ್ರಷ್ಟಾಚಾರವನ್ನು ನಡೆಸಿ, ನೇಮಕಗೊಂಡ ವ್ಯಕ್ತಿಗಳನ್ನು ಅಂದಿನಿಂದಲೆ ಲಂಚ ಪಡೆಯುವಂತೆ ಮಾಡುತ್ತಿದೆ. ಯುಪಿಎಸ್‌ಸಿ ಮಾದರಿಯಲ್ಲಿ ಅಮೂಲಾಗ್ರ ಸುಧಾರಣೆ ಮಾಡುವ  ದೊಡ್ಡ ಜವಾಬ್ದಾರಿ ಸರಕಾರದ ಮೇಲೆ ಇದೆ. ಆ ನಿಟ್ಟಿನಲ್ಲಿ ಸರಕಾರ ಆಸಕ್ತಿಯನ್ನು ವಹಿಸಿ ಕೆಪಿಎಸ್ಸಿ ಅಂಗೈಯನ್ನು ಶುದ್ದಗೊಳಿಸಬೇಕಿದೆ.

ಕೆಪಿಎಸ್ಸಿ ಅಂಗೈ ಶುದ್ಧಗೊಳ್ಳೋದು ಯಾವಾಗ?!

 

 

Donate Janashakthi Media

Leave a Reply

Your email address will not be published. Required fields are marked *