ಅಸಮರ್ಥತೆ ಹಾಗೂ ಅಜ್ಞಾನಕ್ಕೆ ಪ್ರತೀಕವಾದ ʻʻಕೊರತೆ ಬಜೆಟ್‌ʼʼ : ಕಾಂಗ್ರೆಸ್‌ ಟೀಕೆ

ಬೆಂಗಳೂರು : ಈ ಬಾರಿಯ 2021-2022ರ ರಾಜ್ಯ ಬಜೆಟ್‌ ಬಿಜೆಪಿಯ ಅಸಮರ್ಥತೆ ಮತ್ತು ಅಜ್ಞಾನಕ್ಕೆ ಕನ್ನಡಿ ಹಿಡಿದಂತಿದೆ. ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಬಿಜೆಪಿ ಸರಕಾರದ ದುರಾಡಳಿತದಿಂದ ತತ್ತರಿಸಿರುವ ರಾಜ್ಯದ ಜನತೆಗೆ ಯಾವುದೇ ಭರವಸೆ ನೀಡದ 2021-2022ನೇ ಸಾಲಿನ ರಾಜ್ಯ ಬಜೆಟ್‌ ಇದಾಗಿದೆ ಎಂದು ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಸಮಿತಿ ಟ್ವೀಟ್‌ ಮಾಡಿದೆ.

ಸಾಲ ಮಾಡಿದರೂ ತುಪ್ಪ ತಿನ್ನಲಾಗದ ಈ ಬಜೆಟ್‌ ರೈತರು ಹಾಗೂ ಗೋಮಾತೆ ಇಬ್ಬರಿಗೂ ದ್ರೋಹ ವೆಸಗಿಸಿಗಿದೆ. ಜಾನುವಾರು ಹತ್ಯೆ ನಿಷೇಧ ಕಾಯ್ದೆಯಿಂದ ಅನುತ್ಪಾದಕ ಹಸುಗಳು ರೈತರಿಗೆ ಹೊರೆಯಾಗಿವೆ. ಜಾನುವಾರುಗಳು ಆಶ್ರಯ ಮತ್ತು ಆಹಾರವಿಲ್ಲದೆ ಅನಾಥವಾಗಿವೆ. ಈ ಅಸಮೋಲನವನ್ನು ಸರಿದೂಗಿಸಲು ಯೋಜನೆ ಅಥವಾ ಅನುದಾನ ಬಗ್ಗೆ ಬಜೆಟ್‌ ಗಮನ ನೀಡಿಲ್ಲ ಎಂದು ಟೀಕಿಸಿದೆ.

ಶಿಕ್ಷಣ ಕ್ಷೇತ್ರವನ್ನು ಪುನಶ್ಚೇತನಗೊಳಿಸಲು ಒತ್ತು ನೀಡದ ಬಜೆಟ್‌, ವಿದ್ಯಾರ್ಥಿಗಳ ಭವಿಷ್ಯವನ್ನು ಚಿವುಟಿ ಹಾಕಿದೆ ಎಂದು ಟ್ವೀಟ್‌ ಮಾಡಿರುವ ಕೆಪಿಸಿಸಿ ರಾಜ್ಯಕ್ಕೆ ಯಾವುದೇ ಕೊಡುಗೆ ನೀಡದ ಕೊರತೆ ಬಜೆಟ್‌ ಎಂದು ಹೇಳಿದೆ.

Donate Janashakthi Media

Leave a Reply

Your email address will not be published. Required fields are marked *