ಕಟ್ಟಡ ಕಾರ್ಮಿಕರ ಸಂಡೂರು ತಾಲೂಕು 2ನೇ ಸಮ್ಮೇಳನ ‌

ಸಂಡೂರು: ಸಿಐಟಿಯು ಸಂಯೋಜಿತ ಕಟ್ಟಡ ಮತ್ತುಇತರೆ ನಿರ್ಮಾಣ ಕಾರ್ಮಿಕರ 2ನೇ ತಾಲೂಕು ಸಮ್ಮೇಳನ ತಾಲ್ಲೂಕಿನ ವಿರಕ್ತ ಮಠದ ಶ್ರೀ ಗುರು ಪ್ರಭುದೇವರ ಮಠದ ಆವರಣದಲ್ಲಿ ನಡೆಯಿತು.

ಸಮ್ಮೇಳನದ ಉದ್ಘಾಟನೆಯನ್ನು ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಕರ ಫೆಡರೇಷನ್‌ (ಸಿಡಬ್ಲ್ಯೂಎಫ್‌ಐ) ರಾಜ್ಯ ಪ್ರಧಾನ ಕಾರ್ಯದರ್ಶಿ ಕೆ.ಮಹಾಂತೇಶ ಮಾಡಿದರು.

ಕಾರ್ಯಕ್ರಮದಲ್ಲಿ ಬಳ್ಳಾರಿ ಜಿಲ್ಲಾ ಸಿಐಟಿಯು ಜಿಲ್ಲಾ ಅಧ್ಯಕ್ಷ ಜೆ. ಸತ್ಯಬಾಬು, ವಕೀಲರು ಹಾಗೂ ಕೂಡ್ಲಿಗಿ ತಾಲೂಕು ಸಿಐಟಿಯು ಮುಖಂಡ ವೀರುಪಾಕ್ಷಪ್ಪ, ಸಂಡೂರು ತಾಲೂಕು‌ ಸಿಐಟಿಯು ಸಂಚಾಲಕ ಚೆನ್ನಬಸವಯ್ಯ, ಸಿಡಬ್ಲ್ಯೂಎಫ್‌ಐ ಜಿಲ್ಲಾ ಅಧ್ಯಕ್ಷ ಯಲ್ಲಾಲಿಂಗ, ದೇವದಾಸಿ‌ ಮಹಿಳಾ‌ವಿಮೋಚನಾ ಸಂಘದ ಸ್ವಾಮಿ, ಮುಖಂಡರಾದ ಮಲ್ಲಿಕಾರ್ಜುನ, ದೇವಣ್ಣ ಮೊದಲಾದವರು ಭಾಗವಹಿಸಿದ್ದರು.

ಸಮ್ಮೇಳನದಲ್ಲಿ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕ ಸಂಡೂರು ತಾಲ್ಲೂಕು ನೂತನ ಸಮಿತಿ ಆಯ್ಕೆ ಮಾಡಿದರು.

Donate Janashakthi Media

Leave a Reply

Your email address will not be published. Required fields are marked *