ಪಹಲ್ಗಾಮ್ ಉಗ್ರರ ದಾಳಿ: ದಿಕ್ಕು ತೋಚದೆ ಅಳುತ್ತಿದ್ದ ಬಾಲಕನ ಪ್ರಾಣ ಕಾಪಾಡಿದ ಕಾಶ್ಮೀರಿ ಯುವಕ

ಶ್ರೀನಗರ: ಏಪ್ರಿಲ್‌ 22 ಮಂಗಳವಾರದಂದು ಪಹಲ್ಗಾಮ್ ನಲ್ಲಿ ನಡೆದ ಉಗ್ರರ ದಾಳಿಯಲ್ಲಿ ಗಾಯಗೊಂಡು ದಿಕ್ಕು ತೋಚದೆ ಅಳುತ್ತಿದ್ದ ಬಾಲಕನಿಗೆ ಕಾಶ್ಮೀರಿ ಯುವಕನೊಬ್ಬ ದೇವರಂತೆ ಕೈ ಚಾಚಿದ್ದಾನೆ. ಗಾಯಗೊಂಡ ಬಾಲಕನನ್ನು ಹೆಗಲ ಮೇಲೆ ಹೊತ್ತುಕೊಂಡೇ ಕಿಲೋಮೀಟರ್‌ಗಳಷ್ಟು ದೂರ ಓಡಿ ಅವನ ಜೀವವನ್ನು ಉಳಿಸಿದ್ದಾನೆ. ದಿಕ್ಕು

ಉಗ್ರರ ಗುಂಡಿನ ದಾಳಿಯಿಂದ ತಪ್ಪಿಸಿಕೊಂಡು ಬಂದಿದ್ದ ಮೃತ ಮಂಜುನಾಥ್ ಪುತ್ರ ಅಭಿಜಯ್ ನನ್ನು ಸ್ಥಳೀಯ ವ್ಯಕ್ತಿಯೊಬ್ಬ ಬೆನ್ನ ಮೇಲೆ ಹೊತ್ತುಕೊಂಡು ಸುರಕ್ಷಿತ ಸ್ಥಳಕ್ಕೆ ಕರೆತಂದಿರುವ ವಿಡಿಯೋಗಳಿಗೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ಮೆಚ್ಚುಗೆ ವ್ಯಕ್ತವಾಗಿದೆ.

ಇದನ್ನೂ ಓದಿ: ಚಿಕ್ಕಬಳ್ಳಾಪುರದಲ್ಲಿ ರಸ್ತೆ ನಿರ್ಮಾಣದ ವೇಳೆ ಗಲಾಟೆ – ಗಣಿ ಮಾಲೀಕನಿಂದ ಗುಂಡೇಟು, ಒಬ್ಬರಿಗೆ ಗಾಯ

ಪಹಲ್ಗಾಮ್ ಉಗ್ರ ದಾಳಿಯಲ್ಲಿ ಗಾಯಗೊಂಡ ಯುವಕನನ್ನು ಸಮಯಕ್ಕೆ ಸರಿಯಾಗಿ ಕಾಶ್ಮೀರಿ ಯುವಕ ಆಸ್ಪತ್ರೆಗೆ ದಾಖಲಿಸುವ ಮೂಲಕ ಬಾಲಕನ ಪ್ರಾಣ ಉಳಿಸಿದ್ದಾನೆ. ಸದ್ಯ ಈ ವಿಡಿಯೋ ವೈರಲ್ ಆಗಿದೆ.

ಕಾಶ್ಮೀರದ ಯುವಕನೊಬ್ಬ ತನ್ನ ಪ್ರಾಣವನ್ನೇ ಪಣಕ್ಕಿಟ್ಟು ಮಗುವನ್ನು ಉಳಿಸಿದ ವಿಡಿಯೋ ಈಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ರಾಕ್ಷಸರ ಗುಂಪುಗಳು ಜನರ ಜೀವಗಳನ್ನು ತೆಗೆದುಕೊಳ್ಳುತ್ತಿದ್ದಾಗ, ಒಬ್ಬ ಭಾರತೀಯ ಯುವಕ ಅವರ ವಿರುದ್ಧ ನಿಂತು ಒಬ್ಬ ಹುಡುಗನ ಜೀವವನ್ನು ಉಳಿಸಿದನು. ಈ ಕ್ರಮದಲ್ಲಿ ಎಲ್ಲರೂ ಕಾಶ್ಮೀರಿ ಯುವಕನ ಕಾರ್ಯಕ್ಕೆ ಮೆಚ್ಚುಗೆ ಸೂಚಿಸಿದ್ದಾರೆ.

ಇದನ್ನೂ ನೋಡಿ: ಪಹಲ್ಗಾಮ್ ದಾಳಿ : ಸಂಜೆ ರಾಜ್ಯಕ್ಕೆ ಆಗಮಿಸಲಿದೆ ಮಂಜುನಾಥ್ ಮೃತದೇಹ Janashakthi Media

Donate Janashakthi Media

Leave a Reply

Your email address will not be published. Required fields are marked *