ಸತತ 6 ದಿನ ಹೈಕೋರ್ಟಿಗೆ ದಸರಾ ರಜೆ: ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ಅವಕಾಶ

ಬೆಂಗಳೂರು: ದಸರಾ ಹಬ್ಬದ ಆಚರಣೆ ಇರುವುದರಿಂದ ಅಕ್ಟೋಬರ್‌ 11ರಿಂದ 16ರ ವರೆಗೆ ಕರ್ನಾಟಕ ಹೈಕೋರ್ಟ್‌ಗೆ ರಜೆ ಇರಲಿದೆ. ತುರ್ತು ಪ್ರಕರಣಗಳ ವಿಚಾರಣೆ ಮಾತ್ರ ನಡೆಯಲಿದೆ.

ಹಂಗಾಮಿ ಮುಖ್ಯ ನ್ಯಾಯಮೂರ್ತಿ ಸತೀಶ್‌ ಚಂದ್ರ ಶರ್ಮಾ ಅವರು ಅಕ್ಟೋಬರ್‌ 12ರಂದು (ಮಂಗಳವಾರ) ತುರ್ತು ಪ್ರಕರಣಗಳ ವಿಚಾರಣೆ ನಡೆಸಲು ಪ್ರಧಾನ, ಧಾರವಾಡ ಮತ್ತು ಕಲಬುರ್ಗಿ ಪೀಠಕ್ಕೆ ರಜಾಕಾಲೀನ ನ್ಯಾಯಮೂರ್ತಿಗಳಾಗಿ ನೇಮಕ ಮಾಡಿದ್ದಾರೆ.

ತಡೆಯಾಜ್ಞೆ, ಮಧ್ಯಂತರ ನಿರ್ದೇಶನಗಳು ಮತ್ತು ತಾತ್ಕಾಲಿಕ ಪ್ರತಿಭಂದಕಾದೇಶಗಳಿಗೆ ಮಾತ್ರ ವಿಚಾರಣೆ ಸೀಮಿತವಾಗಿರಲಿದೆ. ಮೇಲ್ಮನವಿ, ಹೊಸ ಮನವಿ ಸಲ್ಲಿಕೆ ಸೇರಿದಂತೆ ಇತರೆ ಪ್ರಕರಣಗಳನ್ನು ಕೈಗೆತ್ತುಕೊಳ್ಳಲಾಗುವುದಿಲ್ಲ. ರಜಾ ಕಾಲದಲ್ಲಿ ಸೋಮವಾರ ಮತ್ತು ಬುಧವಾರ ಬೆಳಿಗ್ಗೆ 10ರಿಂದ 12.30ರವರೆಗೆ ನಿರ್ದಿಷ್ಟ ಕೌಂಟರ್‌ಗಳಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳಲ್ಲಿ ವಕಾಲತ್ತು, ಶುಲ್ಕ ಮತ್ತು ಮೊಮೊಗಳನ್ನು ಸ್ವೀಕರಿಸಲಾಗುವುದು ಎನ್ನಲಾಗಿದೆ.

Donate Janashakthi Media

Leave a Reply

Your email address will not be published. Required fields are marked *