ಕಾರ್ಮಿಕ ಮುಂದಾಳು ನಿಸಾರ್ ಅಹಮದ್ ನಿಧನ

ತುಮಕೂರು: ಬೀಡಿ ಕಾರ್ಮಿಕ ಚಳುವಳಿಯಲ್ಲಿ ಕಳೆದ ನಾಲ್ಕು ದಶಕಗಳಿಂದ ನಿರಂತರವಾಗಿ ದುಡಿಯುತ್ತಿದ್ದ, ಸಿಐಟಿಯುನ ಹಿರಿಯ ಉಪಾಧ್ಯಕ್ಷರು ಅದ ಕಮ್ಯುನಿಸ್ಟ್‌ ನೇತಾರ ಸಂಗಾತಿ ನಿಸಾರ್ ಅಹಮದ್ ಅವರು ಶಿರಾದ ಸರ್ಕಾರಿ ಅಸ್ಪತ್ರೆಯಲ್ಲಿ ಕೋವಿಡ್ ಸೋಂಕಿನಿಂದ ಅಸುನೀಗಿದ್ದಾರೆ.

ನಿಸಾರ್ ಅಹಮದ್ ಅವರ ಅಗಲಿಕೆಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಜಿಲ್ಲಾ ಸಮಿತಿ ಭಾವಪೂರ್ಣ ಶ್ರದ್ದಾಂಜಲಿಯನ್ನು ಅರ್ಪಿಸಿದೆ.

ರಾಷ್ಟ್ರದ  ಬೀಡಿ ಉದ್ದಮದಲ್ಲಿ ತನ್ನದೆ ವಿಶಿಷ್ಟ ಸ್ಥಾನ ಪಡೆದಿರು ಸುಮಾರು 400-500 ವಿವಿಧ ಮಾದರಿಯ ಸಂಸ್ಥೆಗಳ ಬೀಡಿಗೂ ಉತ್ಪಾದನೆಯಾಗುವ ತುಮಕೂರು ಜಿಲ್ಲೆಯ ಶಿರಾ ತಾಲ್ಲೂಕಿನಲ್ಲಿ ಬೀಡಿ ಕಾರ್ಮಿರ ಚಳವಳಿಯಲ್ಲಿ 70ರ ದಶಕದಿಂದ  ತೊಡಗಿಕೊಂಡಿದ್ದ ನಿಸಾರ್ ಅಹಮದ್ ಅವರು ಸಿಪಿಐ(ಎಂ) ಜಿಲ್ಲಾ ಸಮಿತಿಯ ಸದಸ್ಯರಾಗಿ ಸಹ ದುಡಿದ್ದಿದರು. ಅವರು ಎಲೆ ಮರಯ ಕಾಯಿಯಂತೆ ಸದ್ದಿಲ್ಲದೆ ದುಡಿಯುತ್ತಿದ್ದ ಅವರ ಅಗಲಿಗೆಯಿಂದ ಜಿಲ್ಲೆಯ ಕಾರ್ಮಿಕರ ಚಳುವಳಿಗೆ ಅಪಾರ ನಷ್ಟ  ಉಂಟಾಗಿದೆ ಎಂದು ತಿಳಿಸಿದ್ದಾರೆ.

ಅವರ ಅಗಲಿಕೆಯ ದುಖಃದಲ್ಲಿರುವ ಕುಟುಂಬ ವರ್ಗದವರ ಜೊತೆ ಸಿಪಿಐ(ಎಂ) ಜಿಲ್ಲಾ ಸಮಿತಿಗಳ ಭಾಗಿಯಾಗಲಿದೆ ಎಂದು ಜಿಲ್ಲಾ ಸಮಿತಿ ಕಾರ್ಯದರ್ಶಿ ಎನ್‌ ಕೆ ಸುಬ್ರಮಣ್ಯ, ರಾಜ್ಯ ಸಮಿತಿ ಸದಸ್ಯರಾದ ಸೈಯದ್‌ ಮುಜೀಬ್‌ ಮತ್ತು ಜಿಲ್ಲಾ ಮುಖಂಡರಾದ ಜಿ. ಕಮಲ ಹಾಗೂ ಬಿ. ಉಮೇಶ್‌ ಅವರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *