ಕಲ್ಯಾಣ ಕರ್ನಾಟಕ ಉದ್ಯೋಗ ಮೇಳ: ಉಮೇದಿನೊಂದಿಗೆ ಹರಿದು ಬಂದ ಯುವ ಜನರು

ಲಬುರಗಿ: ಏಪ್ರಿಲ್‌ 16 ಬುಧವಾರದಂದು ನಗರದ ರಿಂಗ್‌ ‌ರಸ್ತೆಯಲ್ಲಿರುವ ಖಮರ್ ಉಲ್‌ಇಸ್ಲಾಂ ಕಾಲೊನಿಯ ಕೆ.ಸಿ.ಟಿ ಕಾಲೇಜು ಆವರಣದಲ್ಲಿ ರಾಜ್ಯ ಸರ್ಕಾರದಿಂದ‌ ಆಯೋಜಿಸಿರುವ ಕಲ್ಯಾಣ ಕರ್ನಾಟಕ ಭಾಗದ ಉದ್ಯೋಗ ಮೇಳಕ್ಕೆ ಯುವ ಜನರು ಕೆಲಸ ಪಡೆಯುವ ಉಮೇದಿನೊಂದಿಗೆ ಹರಿದು ಬಂದರು.

ಬೀದರ್, ಕಲಬುರಗಿ, ಯಾದಗಿರಿ, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳ ಸಾವಿರಾರು ಯುವಜನರು ತಮ್ಮ ವಿದ್ಯಾರ್ಹತೆಗೆ ತಕ್ಕ ಉದ್ಯೋಗಕ್ಕಾಗಿ ಒಂದೇ ದಿನದಲ್ಲಿ ಹಲವು ಕಂಪನಿಗಳ ಸಂದರ್ಶನ‌ ಎದುರಿಸಿದರು.

ಇದನ್ನೂ ಓದಿ: ಕೃಷಿಕರಿಗೆ ಸಿಹಿ ಸುದ್ದಿ: ಸಾಮಾನ್ಯಕ್ಕಿಂತ ಹೆಚ್ಚಿನ ಮಳೆ ನಿರೀಕ್ಷೆ – ಐಎಂಡಿ

ಆನ್‌ಲೈನ್‌ನಲ್ಲಿ ನೋಂದಣಿ ‌ಮಾಡಿಕೊಳ್ಳದ ಯುವಜನರು ಸ್ಥಳದಲ್ಲೇ ಆಫ್‌ಲೈನ್‌ನಲ್ಲಿ ನೋಂದಣಿ‌ ಮಾಡಿಕೊಂಡು‌ ಸಂದರ್ಶ‌ನದಲ್ಲಿ ಪಾಲ್ಗೊಂಡರು. 200 ಹೆಚ್ಚು ಕಂಪನಿಗಳು ಉದ್ಯೋಗ ಮೇಳದಲ್ಲಿ ಪಾಲ್ಗೊಂಡಿದ್ದು, ಬೆಳಿಗ್ಗೆ 9ರಿಂದಲೇ ಅಭ್ಯರ್ಥಿಗಳ‌ ಸಂದರ್ಶನದಲ್ಲಿ ತೊಡಗಿದ್ದಾರೆ.

ಇದನ್ನೂ ನೋಡಿ: ಹಿಂದೂ ಕೋಡ್‌ ಬಿಲ್‌ ಮತ್ತು ಅಂಬೇಡ್ಕರ್‌ | ಡಾ. ರವಿಕುಮಾರ್‌ ಬಾಗಿ Janashakthi Media

Donate Janashakthi Media

Leave a Reply

Your email address will not be published. Required fields are marked *