ಕಾಳಸಂತೆಯಲ್ಲಿ ಮೆಣಸಿನಕಾಯಿ ಬೀಜ ಮಾರಾಟ: ಪ್ರಕರಣ ದಾಖಲು

ಬಳ್ಳಾರಿ: ತಾಲೂಕಿನ ಶ್ರೀಧರಗಡ್ಡೆ ಗ್ರಾಮದ ಶ್ರೀ ಮಂಜುನಾಥ ಆಗ್ರೋ ಏಜನ್ಸೀಸ್ ಇವರು ಸಿಂಜೆಂಟಾ ಕಂಪನಿಯ 5531 & 2043 ತಳಿಯ ಮೆಣಸಿನಕಾಯಿ ಬೀಜಗಳನ್ನು ಕಾಳಸಂತೆಯಲ್ಲಿ ಹೆಚ್ಚಿನ ದರಕ್ಕೆ ಮಾರಾಟ ಮಾಡುತ್ತಿರುವ ವಿಡಿಯೋ ಒಂದು ಇತ್ತೀಚಿಗೆ ಹರಿದಾಡುತ್ತಿತ್ತು.

ಇದರ ಬಗ್ಗೆ ಏಜೆನ್ಸಿಯ ಮಾಲೀಕರಾದ ಅಮೃತಪ್ಪನವರ ಸಿದ್ದರಾಮಪ್ಪ ತಂದೆ ಸಿದ್ದಬಸಪ್ಪ ಇವರ ವಿರುದ್ಧ ಬಳ್ಳಾರಿಯ ಜೆಎಂಎಫ್‌ಸಿ ನ್ಯಾಯಾಲಯಕ್ಕೆ ತೋಟಗಾರಿಕೆ ಇಲಾಖೆ ವತಿಯಿಂದ ಸ್ವಯಂ ಪ್ರೇರಿತವಾಗಿ ಪ್ರಕರಣ ದಾಖಲಿಸಲಾಗಿದೆ ಎಂದು ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ಈ ಸಂಬಂಧ ಪೋಲಿಸ್ ಠಾಣೆಯಲ್ಲಿ ದೂರು ನೀಡಲು ಸಹ ಅಗತ್ಯ ಕಾನೂನು ಸಲಹೆಯನ್ನು ಪಡೆಯಲಾಗುತ್ತಿದೆ ಎಂದು ಅವರು ತಿಳಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *