ಜಾನುವಾರು ಹತ್ಯೆ ನಿಷೇದ ಸುಗ್ರೀವಾಜ್ಞೆ ಜಾರಿಗೊಳಿಸುವ ದುರ್ನಡೆಯನ್ನು ನಿಲ್ಲಿಸಿ ! – KPRS ಒತ್ತಾಯ

ಬೆಂಗಳೂರು;ಜ,19 : ರಾಜ್ಯದ ಜನತೆಯ ತೀವ್ರ ವಿರೋಧದ ನಡುವೆಯೂ, ರಾಜ್ಯದ ಹಾಲಿ ಅಭಿವೃದ್ಧಿಯನ್ನು ಸರ್ವ ನಾಶ ಮಾಡುವ ಜಾನುವಾರು ಹತ್ಯಾ ನಿಷೇದ ಸುಗ್ರೀವಾಜ್ಞೆಯನ್ನು ಜಾರಿಗೊಳಿಸುವ ದುರ್ನಡೆಯನ್ನು ತಕ್ಷಣವೇ ನಿಲ್ಲಿಸಿ ಎಂದು ಕರ್ನಾಟಕ ಪ್ರಾಂತ ರೈತ ಸಂಘದ  ರಾಜ್ಯ ಸರಕಾರವನ್ನು ಒತ್ತಾಯಿಸಿದೆ.

ಇದು, ರಾಜ್ಯದಲ್ಲಿ ಈಗಾಗಲೆ ಬದುಕನ್ಮ ರೂಪಿಸಿಕೊಂಡಿರುವ ಕೋಟ್ಯಾಂತರ ಕುಟುಂಬಗಳ ಮೇಲಿನ ಗಧಾ ಪ್ರಹರವಾಗಿದೆ. ಹೈನುಗಾರಿಕೆ ಹೈನೋದ್ಯಮ ಮತ್ತು ಮಾಂಸೋದ್ಯಮ, ಚರ್ಮೋದ್ಯಮ , ಔಷಧಿಯ ಉದ್ಯಮದ ವಿರೋಧಿಯಾಗಿದೆ ಮಾತ್ರವಲ್ಲಾ ದಲಿತರ ಹಾಗೂ ಅಲ್ಪ ಸಂಖ್ಯಾತರ ವಿರೋಧಿ ನಡೆಯಾಗಿದೆ.

ಈ ಎಲ್ಲ ಉದ್ಯಮಗಳನ್ನು ಮತ್ತು ಹೈನೋದ್ಯಮದ ಸಹಕಾರ ಸಂಘಗಳ, ಹಾಗೂ ರಾಜ್ಯದ ಪ್ರತಿಷ್ಟಿತ ಕರ್ನಾಟಕ ಹಾಲು ಒಕ್ಕೂಟವನ್ನು ಸರ್ವನಾಶ ಮಾಡಲಿದೆ. ಈ ಎಲ್ಲ ಉದ್ಯಮಗಳಲ್ಲಿ ತೊಡಗಿಸಿಕೊಂಡ ದಶಲಕ್ಷಾಂತರ ಕಾರ್ಮಿಕರು, ಸಣ್ಣ ಉದ್ದಿಮೆದಾರರು, ಲಕ್ಷಾಂತರ ಈ ಉದ್ದಿಮೆಗಳ ಸಣ್ಣ, ಮದ್ಯಮ ವ್ಯಾಪಾರಸ್ಥರು ಬೀದಿ ಪಾಲಾಗಲಿದ್ದಾರೆ ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಅಧ್ಯಕ್ಷರಾದ ಜಿ.ಸಿ.ಬಯ್ಯಾರೆಡ್ಡಿ ಆತಂಕವನ್ನು ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ : ಗೋಹತ್ಯೆ ನಿಷೇಧ ತಿದ್ದುಪಡಿ ಕಾಯ್ದೆಗೆ ಸುಗ್ರೀವಾಜ್ಞೆ ಅಸಿಂಧು – ನ್ಯಾ. ವಿ.ಗೋಪಾಲಗೌಡ

ರೈತರ ಮುಖ್ಯ ಕಸುಬಾದ ಬೇಸಾಯದ ಮೇಲೆ ಅದಾಗಲೇ ಕಾರ್ಪೋರೇಟ್ ಕೃಷಿ ಕಾಯ್ದೆಗಳನ್ನು ಹೇರುವ ಮೂಲಕ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಬಲವಾದ ಪ್ರಹಾರಕ್ಕೆ ಮುಂದಾಗಿರುವಾಗಲೇ, ಮುಖ್ಯಮಂತ್ರಿ ಯಡಿಯೂರಪ್ಪ ರೈತರ ಉಪಕಸುಬಾದ ಹೈನುಗಾರಿಕೆಯು ಈಗಾಗಲೆ ಅದು ನಷ್ಠದಲ್ಲಿರುವಾಗ, 13 ವರ್ಷಗಳವರೆಗೆ ನಿರುಪಯುಕ್ತ ಜಾನುವಾರುಗಳನ್ನು ಸಾಕಲೇಬೇಕೆಂಬ ಮತ್ತಷ್ಟು ಹೊರೆಯನ್ನು ಹೇರುವ ಮೂಲಕ  ಅದರಮೇಲೆ ಅಂತಿಮ ಪ್ರಹಾರ ನಡೆಸಿದ್ದಾರೆ. ಇದರಿಂದ 50 ಲಕ್ಷಕ್ಕೂ ಅಧಿಕ ಹೈನುಗಾರ ಕುಟುಂಬಗಳು ಉದ್ಯೋಗ ಭದ್ರತೆಯನ್ನುಕಳೆದುಕೊಳ್ಳಲಿವೆ.

ಇದು ಜನತೆಯ ಆಹಾರದ ಹಾಗೂ ಉದ್ಯೋಗದ ಮತ್ತು ಬದುಕುವ ಪ್ರಜಾ ಸತ್ತಾತ್ಮಕ ಹಕ್ಕುಗಳ ಮೇಲಿನ ಗಂಭೀರ ಧಾಳಿಯಾಗಿದೆ. ಜನತೆಯ ಜಾತ್ಯಾತೀತ ಹಾಗೂ ಜನಪದ ಸಂಸ್ಕೃತಿಯ ಮೇಲಿನ ಧಾಳಿಯೂ ಇದಾಗಿದೆ. ಕೋಮು ಹಾಗೂ ಜಾತಿ ತಾರತಮ್ಯದ ವ್ಯಾದಿಯನ್ನು ಬಲಪಡಿಸಲಿದೆ ಎಂದು ಎಂದು ಕರ್ನಾಟಕ ಪ್ರಾಂತ ರೈತ ಸಂಘದ ಪ್ರಧಾನ ಕಾರ್ಯದರ್ಶಿಯು.ಬಸವರಾಜ ಆರೋಪವನ್ನು ಮಾಡಿದ್ದಾರೆ.

ಈ ಎಲ್ಲ ಉದ್ದಿಮೆಗಳನ್ನು ಹಾಗೂ ಹೈನುಗಾರಿಕೆಯನ್ನು, ಕಾರ್ಪೋರೇಟ್ ಕಂಪನಿಗಳಿಗೆ ವಹಿಸಿಕೊಡುವ ಮತ್ತು ಜನತೆಯನ್ನು ಒಡೆದಾಳುವ ಗುಲಾಮ ನೀತಿಯಿಂದ ಇದನ್ನು ಜಾರಿಗೊಳಿಸಲಾಗುತ್ತಿದೆಯೆಂದು ಕರ್ನಾಟಕ ಪ್ರಾಂತ ರೈತ ಸಂಘದ ರಾಜ್ಯ ಸಮಿತಿ  ಸರಕಾರದ ದುರ್ನಡೆಯನ್ನು ಬಲವಾಗಿ ಖಂಡಿಸುತ್ತದೆ ಮತ್ತು ಇದರಲ್ಲಿ ಜಾನುವಾರು ಸಂರಕ್ಷಣೆಯ ಯಾವುದೇ ಅಂಶಗಳಿಲ್ಲ, ಹಾಗೆ ಹೇಳುವುದು ಗೋಸುಂಬೆ ರಾಜಕಾರಣವಾಗಿದೆ ಎಂದಿದೆ.

ಇದನ್ನೂ ಓದಿ : ಗೋಹತ್ಯೆ ನಿಷೇಧದ ಮೂಲಕ ಆಹಾರ ಹಕ್ಕಿನ ಮೇಲೆ ದಾಳಿ, ಹಲವರ ಆಕ್ರೊಶ

ಮಾತ್ರವಲ್ಲಾ, ಕೂಡಲೇ ಆ ದುರ್ನಡೆಯನ್ನು ಕೈ ಬಿಡಬೇಕೆಂದು ಮರಳಿ ಬಲವಾಗಿ ಒತ್ತಾಯಿಸುತ್ತದೆ. ಈ ಸುಗ್ರೀವಾಜ್ಞೆಯು, ಅದು ಉಂಟು ಮಾಡುವ ತೀವ್ರ ಹಾನಿಯಿಂದ ಜನತೆಯನ್ನು ಮತ್ತು ಜನರ ಪ್ರಜಾಸತ್ತಾತ್ಮಕ ಹಾಗೂ ಸಂವಿಧಾನಾತ್ಮಕ ಹಕ್ಕುಗಳನ್ನು ಮತ್ತು ಸಂಸ್ಕೃತಿಯನ್ನು ರಕ್ಷಿಸುವ ಯಾವುದೇ ಅಂಶಗಳನ್ನು ಇದು ಪರಿಗಣಿಸಿಲ್ಲವೆಂದು ರೈತ ಸಂಘ ಕಠುವಾಗಿ ಟೀಕಿಸಿದೆ.

ಇದು ತಕ್ಷಣದಿಂದಲೇ ನಿರುಪಯುಕ್ತ ಜಾನುವಾರು ಮಾರಾಟ ಮಾಡುವ ಹೈನುಗಾರರ ಮೇಲೆ, ಖರೀದಿಸುವ ಖುರೇಷಿಗಳ ಮೇಲೆ ಗೋರಕ್ಷಣೆಯ ಹೆಸರಿನಲ್ಲಿ ಕ್ರಿಮಿನಲ್  ಧಾಳಿ ಎಸಗಲು ಅವಕಾಶ ನೀಡಲಿದೆ. ಇಂತಹ ಎಲ್ಲಾ ಹಾನಿಗಳಿಂದ ಜನತೆಯನ್ನು ಸಂರಕ್ಷಿಸುವ ಪರಿಹಾರೋಪಾಯಗಳನ್ನು ಮತ್ತು ನಿರುದ್ಯೋಗದ ಪುನರ್ವಸತಿ ಯೋಜನೆಗಳನ್ನು ಪೂರ್ವ ಭಾವಿಯಾಗಿ ಕೈಗೊಳ್ಳದೇ ಮತ್ತು ವ್ಯಾಪಕವಾಗಿ ಚರ್ಚೆಗೀಡುಮಾಡದೇ ಯಾವುದೇ ಕಾರಣಕ್ಕೆ ಇದನ್ನು ಜಾರಿಗೆ ತರಬಾರದು ಮತ್ತು ಅದರ ತುರ್ತು ಈಗ ಇಲ್ಲವೆಂದು KPRS ಒತ್ತಾಯಿಸುತ್ತದೆ.

ವಿಡಿಯೋ ನೋಡಲು ಕೆಳಗಿನ ಲಿಂಕ್ ಕ್ಲಿಕ್ ಮಾಡಿ

 

 

Donate Janashakthi Media

Leave a Reply

Your email address will not be published. Required fields are marked *