ಲೋನಿ ಎನ್ಕೌಂಟರ್: ಬೆದರಿಕೆ ನಿಲ್ಲಿಸಿ, ನಿಷ್ಪಕ್ಷಪಾತ ತನಿಖೆ ನಡೆಸಬೇಕು-ಸಿಪಿಐ(ಎಂ) ಪೊಲಿಟ್ ಬ್ಯುರೊ

ನವದೆಹಲಿ: ಘಾಝಿಯಾಬಾದ್‍ ನ ಲೋನಿಯಲ್ಲಿ ಇತ್ತೀಚೆಗೆ ಪೊಲೀಸ್ ಅತ್ಯಾಚಾರಕ್ಕೆ ತುತ್ತಾಗಿರುವವರ ಮನೆಗಳಿಗೆ ಭಾರತ ಕಮ್ಯೂನಿಸ್ಟ್‌ ಪಕ್ಷ (ಮಾರ್ಕ್ಸ್‌ವಾದಿ)-ಸಿಪಿಐ(ಎಂ) ಪೊಲಿಟ್‍ ಬ್ಯುರೊ ಸದಸ್ಯೆ ಬೃಂದಾ ಕಾರಟ್‍ ನೇತೃತ್ವದ ಪಕ್ಷದ ನಿಯೋಗ ಭೇಟಿ ನೀಡಿ ಬಂದ ಮೇಲೆ ಅಲ್ಲಿನ ಬಿಜೆಪಿ ಶಾಸಕ ʻʻಬೃಂದಾ ಕಾರಟ್‍ ಕೋಮು ಅಸಾಮರಸ್ಯವನ್ನು ಉಂಟುಮಾಡುತ್ತಿದ್ದಾರೆ”, ಅದಕ್ಕಾಗಿ “ಗೋವಧೆಯನ್ನು ಪ್ರೋತ್ಸಾಹಿಸುತ್ತಿದ್ದಾರೆ” ಎಂದೆಲ್ಲ ಅವರ ವಿರುದ್ಧ ಅತ್ಯಂತ ಸುಳ್ಳು ಮತ್ತು ದುರ್ಭಾವನೆ ಹರಡಿಸುವ ಆಪಾದನೆಗಳನ್ನು ಮಾಡುತ್ತಿದ್ದಾರೆ ಎಂದು ಸಿಪಿಐ(ಎಂ) ಪೊಲಿಟ್‍ ಬ್ಯುರೊ ಹೇಳಿದೆ, ಇದನ್ನು ಖಂಡಿಸುತ್ತ ಅದು ಈ ಆಪಾದನೆಗಳನ್ನು ತಿರಸ್ಕರಿಸಿದೆ.

ಲೋನಿಯಲ್ಲಿ ಪೊಲೀಸರು ಎನ್‍ಕೌಂಟರ್‍ ಎಂದು ಹೇಳಿರುವ ಒಂದು ಘಟನೆಯಲ್ಲಿ ಏಳು ಯುವಕರನ್ನು ಒಂದೇ ರೀತಿಯಲ್ಲಿ ಗಾಯಗೊಳಿಸಲಾಗಿದೆ ಮತ್ತು  ಇವರೆಲ್ಲರೂ ಮುಸ್ಲಿಮರು. ಇದಕ್ಕಾಗಿ ಪೊಲೀಸರ ಮೇಲೆ ಪ್ರಕರಣ ದಾಖಲಿಸುವ ಬದಲು ಈ ಏಳು ಯುವಕರನ್ನೇ ಲಾಕಪ್ಪಿನಲ್ಲಿ ಹಾಕಲಾಗಿದೆ. ಅತ್ಯಂತ ಕೋಮುವಾದಿ ಆಧಾರದಲ್ಲಿ ಪೊಲೀಸ್ ಕಾರ್ಯಾಚರಣೆಯನ್ನು ಬೆಂಬಲಿಸುವ ಕಾವಲುಕೋರ ಗುಂಪುಗಳಿಗೆ ನೇತೃತ್ವ ಕೊಡುತ್ತಿರುವ ಲೋನಿಯ ಶಾಸಕ ಈಗ ಸಂತ್ರಸ್ತರ ಪರವಾಗಿ ನಿಲ್ಲುವವವರನ್ನು ಹೆದರಿಸುವ, ಬೆದರಿಸುವ ಪ್ರಯತ್ನ ನಡೆಸಿದ್ದಾರೆ. ಈ ಘಟನೆಯ ಬಗ್ಗೆ ಒಂದು ನಿಷ್ಪಕ್ಷಪಾತ ತನಿಖೆ ನಡೆಸಬೇಕು ಎಂಬ ಸಿಪಿಐ(ಎಂ)ನ ಆಗ್ರಹವನ್ನು ಪುನರುಚ್ಚರಿಸಿರುವ ಸಿಪಿಐ(ಎಂ) ಪೊಲಿಟ್‍ ಬ್ಯುರೊ, ನ್ಯಾಯ ಸಿಗದಂತೆ ಮಾಡಲು ಕೆಲಸ ಮಾಡುತ್ತಿರುವ ಎಲ್ಲರ ಮೇಲೂ ಕ್ರಮಕೈಗೊಳ್ಳಬೇಕು ಎಂದು ಆಗ್ರಹಿಸಿದೆ.

Donate Janashakthi Media

Leave a Reply

Your email address will not be published. Required fields are marked *