ಯಡಿಯೂರಪ್ಪ ದೆಹಲಿಗೆ ಬರಿಗೈಯಲ್ಲಿ ಹೋಗಿಲ್ಲ-ಆರು ಬ್ಯಾಗ್​ ತೆಗೆದುಕೊಂಡು ಹೋಗಿದ್ದಾರೆ: ಹೆಚ್‌ಡಿಕೆ

ಬೆಂಗಳೂರು: ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಹಾಗೂ ಬಿ.ವೈ ವಿಜಯೇಂದ್ರ ದೆಹಲಿ ಭೇಟಿ ಸಾಕಷ್ಟು ಕುತೂಹಲ ಕೆರಳಿಸಿದೆ. ಈ ಬಗ್ಗೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದು, ಮುಖ್ಯಮಂತ್ರಿ ದೆಹಲಿಗೆ ಹೋಗುವುದರೊಂದಿಗೆ ವಿಮಾನದಲ್ಲಿ ಆರು ಬ್ಯಾಗ್ ತೆಗೆದುಕೊಂಡು ಹೋಗಿದ್ದಾರೆ ಎಂದು ಆರೋಪ ಮಾಡಿದ್ದಾರೆ.

ರಾಜ್ಯದಲ್ಲಿ ಕನ್ನಡಿಗರಿಂದ ಆಡಳಿತ ನಡೆಯಬೇಕೇ ಹೊರತು, ದೆಹಲಿಯ ಬಿಜೆಪಿ ಹೈಕಮಾಂಡ್​​ನಿಂದ ಅಲ್ಲ. ಅತ್ಯಂತ ತುರ್ತಾಗಿ ವಿಶೇಷ ವಿಮಾನದಲ್ಲಿ ಮುಖ್ಯಮಂತ್ರಿ ಹೋಗಿದ್ದಾರೆ. ಅವುಗಳು ಉಡುಗೊರೆಯೋ ಅಥವಾ ಬೇರೆ ಏನಾದರೂ ಇದೆಯೋ ಎನ್ನುವುದನ್ನು ಯಡಿಯೂರಪ್ಪ ಅವರೇ  ಹೇಳಬೇಕು. ಆದರೆ, ಅವರು ಬ್ಯಾಗ್​ ತೆಗೆದುಕೊಂಡು ಹೋಗಿರುವ ಮಾಹಿತಿ ನನಗೆ ಬಂದಿದೆ ಎಂದು ಹೇಳಿದ್ದಾರೆ.

ಇದನ್ನು ಓದಿ: ಯಡಿಯೂರಪ್ಪ ದೆಹಲಿ ಭೇಟಿ : ಹುಳಿಯೋ!! ಸಿಹಿಯೋ!!!

ಯಡಿಯೂರಪ್ಪ ಹಾಗೂ ಅವರ ಪುತ್ರ ವಿಜಯೇಂದ್ರ ದೆಹಲಿ ಪ್ರವಾಸದ ಸಂದರ್ಭದಲ್ಲಿ ಬ್ಯಾಗ್​ ತೆಗೆದುಕೊಂಡು ಹೋದ ವಿಷಯ ಕೆಲ ಮಾಧ್ಯಮಗಳಲ್ಲೂ ಬಂದಿದೆ. ನಾಯಕರಿಗೆ ಕೊಡಲು ದೊಡ್ಡ ದೊಡ್ಡ ಉಡುಗೊರೆಗಳನ್ನು ತೆಗೆದುಕೊಂಡು ಹೋಗಿದ್ದಾರೆ ಅಂತಾ ಕೆಲ ಮಾಧ್ಯಮಗಳಲ್ಲಿ ಬರುತ್ತಿದೆ. ಆ ಬ್ಯಾಗ್​ಗಳಲ್ಲಿ ನಿಜವಾಗಿಯೂ ಏನಿದೆ ಎನ್ನುವುದನ್ನು ಸ್ವತಃ ಮುಖ್ಯಮಂತ್ರಿಗಳೇ ಹೇಳಬೇಕು ಎಂದು ತಿಳಿಸಿದ್ದಾರೆ.

ಆ ಆರು ಬ್ಯಾಗ್​ಗಳಲ್ಲಿ ರಾಜ್ಯದ ಸಮಸ್ಯೆಗಳನ್ನು ತೆಗೆದುಕೊಂಡು ಹೋಗಿರುವರೋ ಅಥವಾ ಬೇರೆ ಏನಾದರೂ ತೆಗೆದುಕೊಂಡು ಬಿಜೆಪಿ ಹೈಕಮಾಂಡ್​ಗೆ ಕೊಡಲು ಹೋಗಿರುವರೋ ಎನ್ನುವುದನ್ನು ಹೇಳಬೇಕು. ಪ್ರಧಾನಿ ಮೋದಿಯನ್ನು ಯಡಿಯೂರಪ್ಪ ಒಬ್ಬರೇ ಹೋಗಿ ಭೇಟಿ ಮಾಡಿದರೋ ಅಥವಾ ಆರು ಬ್ಯಾಗ್​ಗಳೊಂದಿಗೆ ಭೇಟಿ ಮಾಡಿದರೋ ಎಂಬ ಬಗ್ಗೆ ಹೆಚ್​.ಡಿ.ಕುಮಾರಸ್ವಾಮಿ ತಿರುಗೇಟು ನೀಡಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *