ʻಮಂಡ್ಯ ಬಿಟ್ಟು ಹೋಗಿʼ ; ಬಿಜೆಪಿಗರಿಂದಲೇ ಸಚಿವ ಆರ್‌ ಅಶೋಕ್‌ ವಿರುದ್ಧ ಅಭಿಯಾನ

ಮಂಡ್ಯ: ಜಿಲ್ಲೆಯಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕನಿಷ್ಠ ನಾಲ್ಕೈದು ಕ್ಷೇತ್ರ ಗೆಲ್ಲಬೇಕೆಂದು ಹರಸಾಹಸ ಪಡುತ್ತಿರುವ ಬಿಜೆಪಿ ಪಕ್ಷ ಜಿಲ್ಲಾ ಉಸ್ತುವಾರಿಯನ್ನು ಕಂದಾಯ ಸಚಿವ ಆರ್‌. ಅಶೋಕ್‌ ಅವರಿಗೆ ವಹಿಸಿದ್ದು, ಜಿಲ್ಲಾ ಬಿಜೆಪಿ ನಾಯಕರಲ್ಲಿ ಅಸಮಾಧಾನ ಭುಗಿಲೆದ್ದಿದೆ. ಬಿಜೆಪಿ ಕಾರ್ಯಕರ್ತರು ʻಮಂಡ್ಯ ಬಿಟ್ಟು ತೊಲಗಿʼ ಎಂದು ಭಿತ್ತಿಚಿತ್ರಗಳನ್ನು ಅಂಟಿಸಲಾಗಿದೆ.

ಮಂಡ್ಯ ಜಿಲ್ಲೆಗೆ ಸಚಿವ ಗೋಪಾಲಯ್ಯ ಬದಲಿಗೆ ಸಚಿವ ಆರ್.ಅಶೋಕ್‍ ಅವರಿಗೆ ವಹಿಸಿರುವುದಕ್ಕೆ ಅಸಮಾಧಾನಗೊಂಡಿದ್ದಾರೆ ಎನ್ನಲಾಗಿದ್ದು, ಮಂಡ್ಯದಲ್ಲಿ ಬಿಜೆಪಿ ಗೆಲ್ಲಿಸುವಲ್ಲಿ ಅಶೋಕ್‌ ಅವರಿಂದ ಸಾಧ್ಯವಿಲ್ಲವೆಂದು ಮನಗಂಡ ಬಿಜೆಪಿ ನಾಯಕರು ಫೇಸ್‍ಬುಕ್ ಹಾಗೂ ರಸ್ತೆಯ ಗೋಡೆಯ ಮೇಲೆ ಆರ್‌ ಅಶೋಕ್‌ ಭಾವಚಿತ್ರದೊಂದಿಗೆ ಭಿತ್ತಿಚಿತ್ರ ಅಂಟಿಸಲಾಗಿದೆ.

ಇದನ್ನು ಓದಿ: 2024ರ ಲೋಕಸಭಾ ಚುನಾವಣೆ: ರಾಮನಾಗಿ ನಿತೀಶ್‌-ರಾವಣನಾಗಿ ಮೋದಿ ಬಿಹಾರದಲ್ಲಿ ಅಭಿಯಾನ

ಬಿಜೆಪಿ-ಜೆಡಿಎಸ್‌ ಹೊಂದಾಣಿಕೆ ಸಹಿಸುವುದಿಲ್ಲ. ನಾವು ಬಿಜೆಪಿ ಕಾರ್ಯಕರ್ತರು. ಮಂಡ್ಯಕ್ಕೆ ಸ್ವಾಭಿಮಾನಿ ಬಿಜೆಪಿ ಕಾರ್ಯಕರ್ತರೇ ಸಾಕು, ಬಿಜೆಪಿ ಅಭ್ಯರ್ಥಿಗಳನ್ನ ಗೆಲ್ಲಿಸಿಕೊಳ್ಳುತ್ತೇವೆ. ದಯವಿಟ್ಟು ನೀವು ವಾಪಸ್ ಹೋಗಿ ಎಂದು ಅಭಿಯಾನ ಹಮ್ಮಿಕೊಳ್ಳಲಾಗಿದೆ.

ಬಿಜೆಪಿ ಮುಖಂಡ ಡಾ.ಸಿದ್ದರಾಮಯ್ಯ ಅಸಮಾಧಾನಗೊಂಡಿರ ಬಗ್ಗೆ ವರದಿಯಾಗಿದ್ದು, ಮಂಡ್ಯ ಜಿಲ್ಲಾ ಉಸ್ತುವಾರಿ ಸಚಿವರ ಬದಲಾವಣೆ ಬೇಕಿರಲಿಲ್ಲ. ಅಶೋಕ್ ವಿರುದ್ಧ ಹೊಂದಾಣಿಕೆ ರಾಜಕಾರಣ ಮಾಡಿದ ಆರೋಪವಿದೆ. ಆದರೆ ಜಿಲ್ಲೆಯಲ್ಲಿ ಹೊಂದಾಣಿಕೆ ರಾಜಕೀಯ ಮಾಡುವುದು ಸರಿಯಲ್ಲ. ಹೊಂದಾಣಿಕೆ ರಾಜಕಾರಣ ಮಾಡಬಾರದೆಂದು ಅಮಿತ್ ಶಾ ತಿಳಿಸಲಾಗಿದೆ ಎಂದು ತಿಳಿಸಿದ್ದಾರೆ.

ಇದನ್ನು ಓದಿ: ಮೂರು ಚುನಾವಣೆಗಳಲ್ಲಿ ಎರಡರಲ್ಲಿ ಬಿಜೆಪಿಗೆ ಸೋಲು-ವಿರೋಧ ಪಕ್ಷಗಳು ಸರಿಯಾದ ಪಾಟ ಕಲಿಯಬೇಕು

ಗಣರಾಜ್ಯೋತ್ಸವ ನಿಮಿತ್ತ ಇಂದು(ಜನವರಿ 26) ಅಶೋಕ್ ಮಂಡ್ಯದಲ್ಲಿ ಧ್ವಜಾರೋಹಣ ನೆರವೇರಿಸಿದರು. ಈ ವೇಳೆಯೂ ಬಿಜೆಪಿಯ ಪ್ರಮುಖ ನಾಯಕರು ಕಾರ್ಯಕ್ರಮದಲ್ಲಿ ಕಾಣಿಕೊಳ್ಳದೇ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಅಶೋಕ್ ಅವರನ್ನು ಕೇಳಿದ್ರೆ ನಮ್ಮ ಪಕ್ಷದಲ್ಲಿ ಅಸಮಾಧಾನ ಇಲ್ಲ. ನಾನು ಯಾರೊಂದಿಗೂ ಸಹ ಹೊಂದಾಣಿಕೆ ಮಾಡಿಕೊಳ್ಳುವ ಪ್ರಶ್ನೆಯೇ ಇಲ್ಲ ಎಂದು ಹೇಳಿದ್ದಾರೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *