ಧಾರವಾಡ: ನಕಲಿ ಪೈಪ್ ನಾದಲ್ ಕೊಟ್ಟು ವಂಚಿಸಿರುವ ಘಟನೆ ಕಲಘಟಗಿ ತಾಲೂಕಿನ ದುಮ್ಮವಾಡ ರೈತ ಸಂಪರ್ಕ ಕೇಂದ್ರದಲ್ಲಿ ಬೆಳಕಿಗೆ ಬಂದಿದೆ. ಧಾರವಾಡ
ರೈತ ಸಂಪರ್ಕ ಕಚೇರಿಯಲ್ಲಿ ಶಿಗಿಗಟ್ಟಿ ಗ್ರಾಮದ ರೈತ ರಾಜು ಭೀಮಪ್ಪ ಲಮಾಣಿ ಎಂಬುವರು ವಿಘ್ನೇಶ್ವರ ಕಂಪನಿಯ ನಾದಲ್ ಪೈಪ್ ಗಾಗಿ ಆನ್ ಲೈನ್ ಮೂಲಕ ಅರ್ಜಿ ಹಾಕಿದ್ದರು.
ಇದನ್ನೂ ಓದಿ: ದೆಹಲಿ ರೈಲ್ವೆ ನಿಲ್ದಾಣದಲ್ಲಿ ಕಾಲ್ತುಳಿತ – ಪ್ರಕರಣದ ವಿಚಾರಣೆಗೆ ನಿರಾಕರಿಸಿದ ಸುಪ್ರೀಂ
ಆದರೆ ರೈತ ಸಂಪರ್ಕ ಕಚೇರಿಯಲ್ಲಿ ಕೆಲಸ ಮಾಡುವ ರೇವಣ್ಣ ಎಂಬುವರು ರೈತರಿಗೆ ವಿಘ್ನೇಶ್ವರ ಕಂಪನಿ ನಾದಲ್ ಪೈಪ್ ಕೊಡದೇ ಬೇರೆ ಕಂಪನಿ ಪೈಪ್ ನಾದಲ್ ಕೊಟ್ಟಿದ್ದಾರೆ.
ಇದು ರೈತರಿಗೆ ಗೊತ್ತಾಗಿ ನಮ್ಮ ಕಡೆ ವಿಘ್ನೇಶ್ವರ ಕಂಪನಿ ನಾದಲ್ ಪೈಪ್ ಕೊಡುತ್ತೇವೆ ಅಂತಾ ಹೇಳಿ ವಿಘ್ನೇಶ್ವರ ಕಂಪನಿ ಹಣ ವರ್ಗಾವಣೆ ಮಾಡಿಸಿಕೊಂಡು ಈಗ ಡೂಪ್ಲಿಕೇಟ್ ಪೈಪ್ ಕೊಟ್ಟಿದಿರಾ ಅಂತ ಪ್ರಶ್ನಿಸಿದ್ದಾರೆ. ಅಲ್ಲದೇ ಕೃಷಿ ಅಧಿಕಾರಿ ವಿರುದ್ದ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ನೋಡಿ: ಪುಸ್ತಕ : ಬದಲಾವಣೆಯನ್ನು ತರುವ ಪ್ರಮುಖ ಅಸ್ತ್ರ – ಜಿ.ಎನ್ ಮೋಹನ್ Janashakthi Media