ಮಾಜಿ ರಕ್ಷಣಾ ಸಚಿವ ಎಕೆ ಆಂಟನಿ ಪುತ್ರ ಅನಿಲ್ ಆಂಟನಿ ಬಿಜೆಪಿ ಸೇರ್ಪಡೆ

ವದೆಹಲಿ:  ವಿಧಾನಸಭೆ ಚುನಾವಣೆ ಸಮೀಪಿಸುತ್ತಿರುವ ಬೆನ್ನಲ್ಲೆ ಪಕ್ಷದಿಂದ ಪಕ್ಷಗಳಿಗೆ ಪಕ್ಷಾಂತರ ಪರ್ವ ಆರಂಭಗೊಂಡಿದ್ದು ಇಂದು ಕಾಂಗ್ರೆಸ್‌ನ ಹಿರಿಯ ನಾಯಕ ಎ.ಕೆ. ಆಯಂಟನಿ ಅವರ ಮಗ ಅನಿಲ್ .ಕೆ. ಆಯಂಟನಿ ಅವರು ಕೇಂದ್ರ ಸಚಿವರಾದ ಪೀಯೂಷ್ ಗೋಯಲ್, ವಿ. ಮುರಳಿಧರನ್ ಅವರ ನೇತೃತ್ವದಲ್ಲಿ ಬಿಜೆಪಿ ಸೇರಿದ್ದಾರೆ.

ಕೇರಳ ಪ್ರದೇಶ ಕಾಂಗ್ರೆಸ್ ಸಮಿತಿಯ ಸಾಮಾಜಿಕ ಮಾಧ್ಯಮ ವಿಭಾಗದ ಮುಖ್ಯಸ್ಥರಾಗಿದ್ದ ಅನಿಲ್, ಕಾಂಗ್ರೆಸ್ ಪಕ್ಷವು ದೇಶಕ್ಕಾಗಿ ಕೆಲಸ ಮಾಡುವುದನ್ನು ಬಿಟ್ಟು ಒಂದು ಕುಟುಂಬಕ್ಕೋಸ್ಕರ ಕೆಲಸ ಮಾಡುತ್ತಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

ಇದನ್ನೂ ಓದಿ : ಅರಕಲಗೂಡು ಜೆಡಿಎಸ್‌ ಮಾಜಿ ಶಾಸಕ ಎ.ಟಿ. ರಾಮಸ್ವಾಮಿ ಬಿಜೆಪಿ ಸೇರ್ಪಡೆ

ಪ್ರಧಾನಿ ನರೇಂದ್ರ ಮೋದಿ ಅವರ ಕುರಿತಾದ ಬಿಬಿಸಿಯ ವಿವಾದಿತ ಸಾಕ್ಷ್ಯಚಿತ್ರದ ಕುರಿತಂತೆ ಪಕ್ಷದ ನಿಲುವನ್ನು ಖಂಡಿಸಿ ಅವರು, ಕಾಂಗ್ರೆಸ್ ತೊರೆದಿದ್ದರು. ‘ಅನಿಲ್ ಆಯಂಟನಿ ಅವರನ್ನು ಸ್ವಾಗತಿಸಿದ ಗೋಯಲ್, ಅನಿಲ್ ಅತ್ಯಂತ ತಳಮಟ್ಟದ ರಾಜಕೀಯ ಕಾರ್ಯಕರ್ತ. ದೇಶದ ಜನರ ಒಳಿತಿನ ಬಗ್ಗೆ ಬಿಜೆಪಿಗೆ ಇರುವ ಕಾಳಜಿ ಮತ್ತು ಸುಸ್ಥಿರ ಅಭಿವೃದ್ಧಿಗೆ ಮೋದಿ ಅವರ ದೃಷ್ಟಿಕೋನದ ಬಗ್ಗೆ ಅವರಿಗೆ ಅರಿವಾಗಿದೆ’ಎಂದು ಹೇಳಿದ್ದಾರೆ.

‘ಇದು ವ್ಯಕ್ತಿತ್ವದ ವಿಚಾರ ಅಲ್ಲ. ಇದು ವಿಚಾರ ಭೇದಗಳು ಮತ್ತು ಅಭಿಪ್ರಾಯಗಳ ವಿಷಯವಾಗಿದೆ. ನಾನು ಸೂಕ್ತವಾದ ನಿರ್ಧಾರ ಕೈಗೊಂಡಿರುವುದಾಗಿ ಬಲವಾಗಿ ನಂಬುತ್ತೇನೆ. ನಮ್ಮ ತಂದೆ ಬಗೆಗಿನ ಗೌರವ ಇದ್ದೇ ಇರುತ್ತದೆ’ ಎಂದು ಅನಿಲ್ ಹೇಳಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *