ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷ ವಿಶೇಷ ಕಾರ್ಯಕ್ರಮ

ಹೊನ್ನಾವರ: ಪ್ರೀತಿಪದಗಳ ಸಹಯಾನಿ, ಸಂವಿಧಾನ ಓದು ಅಭಿಯಾನದ ರುವಾರಿ ಡಾ. ವಿಠ್ಠಲ ಭಂಡಾರಿಯವರ ನೆನಪಿನ ಮೂರನೇ ವರ್ಷದ ಕಾರ್ಯಕ್ರಮ ಮೇ19 ರಂದು ಹೊನ್ನಾವರದ ಕರೆಕೋಣದ ಸಹಯಾನದ ಅಂಗಳದಲ್ಲಿ ನಡೆಯಲಿದೆ.

ಸಮಾನತೆಯನ್ನು ಬಯಸುವುದು ಅಪರಾಧವೆ? ಈ ವಿಷಯದ ಕುರಿತು ವಿಶೇಷ ಉಪನ್ಯಾಸ, ಒಡನಾಟದ ನೆನಪು, ಗಾನಸುಧೆ ಕಾರ್ಯಕ್ರಮ ನಡೆಯಲಿದೆ. ನಾಡಿನ ಪ್ರಸಿದ್ಧ ಕತೆಗಾರರು ಕಾದಂಬರಿಕಾರರು, ವಿಶ್ವವಿದ್ಯಾಲಯದಲ್ಲಿ ಪ್ರಾಧ್ಯಾಪಕರೂ ಆಗಿದ್ದ ಡಾ. ಆರ್ ಸುನಂದಮ್ಮ ಉದ್ಘಾಟನೆ ಮಾಡಲಿದ್ದಾರೆ. ಸಂಸ್ಕೃತಿ ಚಿಂತಕ, ಸಾಹಿತಿ ಡಾ. ರಾಜಪ್ಪ ದಳವಾಯಿಯವರು “ಸಮಾನತೆಯನ್ನು ಬಯಸುವುದು ಅಪರಾಧವೆ?” ಎಂಬ ವಿಷಯದ ಬಗ್ಗೆ ವಿಠ್ಠಲ ನೆನಪಿನ ವಿಶೇಷ ಉಪನ್ಯಾಸ ನೀಡಲಿದ್ದಾರೆ.

ಇದನ್ನು ಓದಿ : ವಾರಸುದಾರಿಕೆ ತೆರಿಗೆ : ಪ್ರಧಾನ ಮಂತ್ರಿಗಳ ಬರಡು ದೂಷಣೆಗಳು-ಅರಿವಿನ ಕೊರತೆ

ರಂಗಸಂಘಟಕ ಬರಹಗಾರ ಟಿ. ಸುರಂದ್ರರಾವ್ ಅಧ್ಯಕ್ಷತೆ ವಹಿಸಲಿದ್ದಾರೆ. ಬಿ.ಜಿ. ಸುಮಿತ್ ಕುಮಾರ್ ಸಂಗಡಿಗರಿಂದ ಹಿಂದೂಸ್ತಾನಿ ಸಂಗೀತ ಹಾಡುಗಾರಿಕೆ ಇದೆ. ರಾಜ್ಯದ ಬೇರೆಬೇರೆ ಜಿಲ್ಲೆಗಳಿಂದ ಸಾಹಿತಿ ಬರಹಗಾರರು, ಪತ್ರಕರ್ತರು,  ಹೋರಾಟಗಾರರು ಒಡನಾಟದ ನೆನಪು ಹಂಚಿಕೊಳ್ಳಲಿದ್ದಾರೆ.

ಒಂದಿಡೀ ದಿನ ವಿಠ್ಠಲನ ನೆನಪಿನಲ್ಲಿ ವೈಚಾರಿಕ ಕರ್ತವ್ಯದೊಡನೆ ಸೇರೋಣ. ತಾವೂ ಆಗಮಿಸಿ. ನಿಮ್ಮ ನಿರೀಕ್ಷೆಯಲ್ಲಿ ಇದ್ದೇವೆ ಎಂದು ಸಹಯಾನ ಕೆರೆಕೋಣ ಟ್ರಸ್ಟ್ ಎಲ್ಲರನ್ನು ಆಹ್ವಾನಿಸಿದೆ.

ಇದನ್ನು ನೋಡಿ : ಪಂಜಾಬ್ ಲೋಕಸಭೆ : ” ದೆಲ್ಲಿ ದಾರಿ ಬಂದ್ ಮಾಡಿದ್ದ ಬಿಜೆಪಿಗೆ ಹಳ್ಳಿ ದಾರಿ ಬಂದ್ ” ವ್ಯಾಪಕಗೊಂಡ ಅನ್ನದಾತರ ಆಕ್ರೋಶ

Donate Janashakthi Media

Leave a Reply

Your email address will not be published. Required fields are marked *