ಉಡುಪಿ – ಮಂಗಳೂರು ರಸ್ತೆಯ ಅವ್ಯವಸ್ಥೆಯ ಬಗ್ಗೆ ಆಕ್ರೋಶ ಹೊರಹಾಕಿದ ಬಿಜೆಪಿಯ ಮಾಜಿ‌ ಸಚಿವರ ಮಗ

ಉಡುಪಿ : ಮಾಜಿ ಗೃಹ ಸಚಿವ ಹಾಗೂ ಬಿಜೆಪಿಯ ಹಿರಿಯ ನಾಯಕ ದಿವಂಗತ ವಿ.ಎಸ್.ಆಚಾರ್ಯ ಅವರ ಪುತ್ರ ಸಾಮಾಜಿಕ ಜಾಲತಾಣದಲ್ಲಿ ಹಾಕಿರುವ ಪೋಸ್ಟ್ ಒಂದು ಈಗ ಸಾಮಾಜಿಕ ಜಾಲತಾಣದಲ್ಲಿ ಚರ್ಚೆಗೆ ಕಾರಣವಾಗಿದೆ.

ಡಾ.ಕಿರಣ್ ಆಚಾರ್ಯ ರವಿವಾರ ತಮ್ಮ ಫೇಸ್‌ಬುಕ್ ಪೋಸ್ಟ್‌ನಲ್ಲಿ, ಉಡುಪಿ-ಮಂಗಳೂರು ನಡುವಿನ ರಾಷ್ಟ್ರೀಯ ಹೆದ್ದಾರಿ 66ರ ಶೋಚನೀಯ ಸ್ಥಿತಿಯ ಬಗ್ಗೆ ಬರೆದುಕೊಂಡಿದ್ದಾರೆ. ರಾಷ್ಟ್ರೀಯ ಹೆದ್ದಾರಿ 66 ರ ಅವ್ಯವಸ್ಥೆಯ ಬಗ್ಗೆ ಬೆಳಕು ಚೆಲ್ಲಿದ್ದಾರೆ. ಟೋಲ್‌ ಕಟ್ಟಿಯೇ ಹೋಗಬೇಕಾದ ಈ ಹೆದ್ದಾರಿಯಲ್ಲಿರುವ ಅಪಾಯಕಾರಿ ರಸ್ತೆ ಗುಂಡಿಗಳ ಚಿತ್ರಗಳನ್ನು ಹಂಚಿಕೊಂಡ ಅವರು, ಅವುಗಳಲ್ಲಿ ಕೆಲವು ದ್ವಿಚಕ್ರ ವಾಹನ ಸವಾರರಿಗೆ ಮಾರಣಾಂತಿಕವಾಗಬಹುದು ಎಂದು ಎಚ್ಚರಿಸಿದ್ದಾರೆ.

ʼನೀವು ಟೋಲ್‌ ಕಟ್ಟುವ ಪ್ರತಿ ಪೈಸೆಗೂ ಒಂದು ಗುಂಡಿ ಗ್ಯಾರಂಟಿʼ ಎಂದು ಇಂಗ್ಲೀಷ್ ನಲ್ಲಿ ಬರೆದಿರುವ ಪೋಸ್ಟರ್ ಒಂದನ್ನು ಆಚಾರ್ಯ ತಮ್ಮ ಪೋಸ್ಟ್ ನಲ್ಲಿ ಹಾಕಿದ್ದಾರೆ. ಸರಕಾರ ಜನರನ್ನು ಲಘುವಾಗಿ ತೆಗೆದುಕೊಂಡಿರುವುದರಿಂದ ಯಾವುದೇ ಅಧಿಕಾರಿ ಅಥವಾ ರಾಜಕಾರಣಿಯನ್ನು ಟ್ಯಾಗ್ ಮಾಡುವುದರಲ್ಲಿ ಯಾವುದೇ ಅರ್ಥವಿಲ್ಲ ಎಂದು ಆಚಾರ್ಯ ಅವರು ಕಿಡಿಕಾರಿದ್ದಾರೆ.

ಆಚಾರ್ಯ ಅವರ ಪೋಸ್ಟ್‌ ನೆಟ್ಟಿಗರ ಗಮನವನ್ನು ಸೆಳೆದಿದ್ದು, ಅವರು ಎತ್ತಿರುವ ವಿಷಯದ ಬಗ್ಗೆ ಚರ್ಚೆ ಪ್ರಾರಂಭವಾಗಿದೆ. ಪೋಸ್ಟ್ ನ ಕಮೆಂಟ್ ವಿಭಾಗದಲ್ಲಿ ಹಲವರು ಜನರ ಕುಂದುಕೊರತೆಗಳು ಹಾಗು ಅದಕ್ಕೆ ಸರಕಾರದ ಸ್ಪಂದನೆಯ ಕೊರತೆ ಬಗ್ಗೆ ದನಿಯೆತ್ತಿದ್ದಾರೆ.

 

ಗ್ಲಾಡ್ಸನ್ ಅಲ್ಮೇಡಾ ರವರು ಕಿರಣ್ ಆಚಾರ್ಯರವರ ಪೋಸ್ಟ್ ಶೇರ್ ಮಾಡಿ ಈ ಕೆಳಗಿನಂತೆ ಬರೆದುಕೊಂಡಿದ್ದಾರೆ. “ಇವರು ನಮ್ಮ ಮಾಜಿ ಗೃಹಮಂತ್ರಿ ದಿವಂಗತ ಡಾ.ವಿ ಎಸ್‍ ಆಚಾರ್ಯರ ಮಗ. ಎರಡ್ರುಪಾಯಿಗಾಗಿ ತಮ್ಮನ್ನು ಹಾವಿನಪುರದ ಹಾವಾಡಿಗರ ಬ್ಲಡಿ ಬ್ಯಾಂಕ್‍ನಲ್ಲಿ ಅಡವಿಟ್ಟಿರುವ ಸೀಳುನಾಯಿಗಳು ಶೀಘ್ರದಲ್ಲಿ ಇವರನ್ನೂ ದೇಶದ್ರೋಹಿಗಳ ಪಟ್ಟಿಗೆ ಸೇರಿಸಬಹುದು. ಯಾವ ಮಂತ್ರಿಗೆ ಟ್ಯಾಗ್ ಮಾಡಿದರೂ ಪ್ರಯೋಜನವಿಲ್ಲವೆಂದು ಮಾಜಿ ಗೃಹಮಂತ್ರಿಯ ಪುತ್ರರೇ ಹೇಳುತ್ತಿದ್ದಾರೆಂದರೆ ಸಾಮಾನ್ಯ ಜನರ ಗತಿಯೇನಾಗಬಹುದು? ಮಂಗಳೂರಿನ ಬೆಂಕಿ ಕುಮಾರ ಹಾಗೂ ಉಡುಪಿಯ ಕೂಗುಮಾರಿಗೆ ಹೆಣ ಬಿದ್ದರೆ ಟ್ಯಾಗ್ ಮಾಡಬಹುದೇ ವಿನ: ರಸ್ತೆ ಸರಿಯಿಲ್ಲ, ಚರಂಡಿ ಸರಿಯಿಲ್ಲ, ಶಾಲೆಯಿಲ್ಲ, ಸೇತುವೆ ಇಲ್ಲ, ಕೆಲಸ ಇಲ್ಲ, ಬೆಲೆ ಜಾಸ್ತಿಯಾಗಿದೆ, ತೆರಿಗೆ ಹೆಚ್ಚಾಗಿದೆಯೆಂದೆಲ್ಲಾ ಹೇಳುವಂತಿಲ್ಲ. ಮೈಮನವೆಲ್ಲಾ ಮುಸ್ಲೀಮ್ ದ್ವೇಷವನ್ನೇ ಉಸಿರಾಡುವ ಕರಾವಳಿಯ ಜನರು ಅನುಭವಿಸಬೇಕು. ಇಲ್ಲಾಂದರೆ ಬುದ್ದಿ ಬರಲ್ಲ.”

ಸರಕಾರದ ವಿರುದ್ಧ ಮಾಜಿ ಮಂತ್ರಿಯ ಮಗ ಕಿಡಿಕಾರದ ಮೇಲಾದರೂ ಸರಕಾರ, ಸಂಸದರು, ಶಾಸಕರು ಇತ್ತ ಗಮನ ಹರಿಸುತ್ತಾರಾ? ಎಂಬ ಪ್ರಶ್ನೆ ಎದ್ದಿದೆ.

Donate Janashakthi Media

Leave a Reply

Your email address will not be published. Required fields are marked *