ನೂತನ ಸಚಿವರಿಗೆ ತಾತ್ಕಾಲಿಕ ಉಸ್ತುವಾರಿ ಹಂಚಿಕೆ

ಬೆಂಗಳೂರು : ಸಚಿವ ಸಂಪುಟ ರಚನೆಯಾದ ಬೆನ್ನಲ್ಲೇ ಮುಖ್ಯಮಂತ್ರಿ ಬಸವರಾಜ್ ಬೊಮ್ಮಯಿ ಅವರು ನೂತನ ಸಚಿವರಿಗೆ ಕೊವಿಡ್ ಹಾಗೂ ಪ್ರವಾಹಪರಿಸ್ಥಿತಿ ನಿರ್ವಾಹಣೆಗಾಗಿ ಜಿಲ್ಲಾ ಉಸ್ತುವಾರಿ ಸಚಿವರನ್ನು ನೇಮಿಸಿದ್ದಾರೆ.

ಸಚಿವರಿಗೆ ಜಿಲ್ಲೆಗಳನ್ನು ಕೂಡ ತಾತ್ಕಲಿಕವಾಗಿ ಹಂಚಿಕೆ ಮಾಡಲಾಗಿದೆ. ಸಚಿವರು ಹಂಚಿಕೆಯಾದ ಜಿಲ್ಲೆಗಳಿಗೆ ತೆರಳಿ ಕೋವಿಡ್​ ನಿರ್ವಹಣೆ ಮತ್ತು ನೆರೆ ಹಾವಳಿ ಪರಿಹಾರ ಕೆಲಸಗಳನ್ನು ತ್ವರಿತವಾಗಿ ನಿರ್ವಹಿಸಲು ಸಚಿವರಿಗೆ ಸೂಚನೆ ನೀಡಲಾಗಿದೆ.

ಮುಂದಿನ ಆದೇಶದವರೆಗೆ ಸಚಿವರು ಹಂಚಿಕೆಯಾದ ಜಿಲ್ಲೆಗಳ ಉಸ್ತುವಾರಿ ವಹಿಸಿ ಕಾರ್ಯ ನಿರ್ವಹಣೆ ಮಾಡಬೇಕು ಎಂದು ತಿಳಿಸಲಾಗಿದೆ.ಸಚಿವರು ನಾಳೆಯಿಂದಲೇ ಈ ಜಿಲ್ಲೆಗಳಿಗೆ ತೆರಳಿ ಅಲ್ಲಿನ ಅಧಿಕಾರಿಗಳೊಂದಿಗೆ ಪರಿಸ್ಥಿತಿಯ ಕುರಿತು ಅವಲೋಕಿಸಬೇಕಿದೆ.

ಸಚಿವರಿಗೆ ಹಂಚಿಕೆಯಾದ ಜಿಲ್ಲೆಗಳು

  1. ಗೋವಿಂದ ಎಂ ಕಾರಜೋಳ -ಬೆಳಗಾವಿ
  2. ಕೆ ಎಸ್​ ಈಶ್ವರಪ್ಪ – ಶಿವಮೊಗ್ಗ
  3. ಆರ್​ ಅಶೋಕ್​ -ಬೆಂಗಳೂರು ನಗರ
  4. ಬಿ ಶ್ರೀರಾಮುಲು- ಚಿತ್ರದುರ್ಗ
  5. ವಿ ಸೋಮಣ್ಣ- ರಾಯಚೂರು
  6. ಉಮೇಶ್​ ವಿ ಕತ್ತಿ- ಬಾಗಲಕೋಟೆ
  7. ಎಸ್​ ಅಂಗಾರ- ದಕ್ಷಿಣ ಕನ್ನಡ
  8. ಜೆಸಿ ಮಾಧುಸ್ವಾಮಿ- ತುಮಕೂರು
  9. ಅರಗ ಜ್ಞಾನೇಂದ್ರ- ಚಿಕ್ಕಮಗಳೂರು
  10. ಸಿ ಎನ್​ ಅಶ್ವತ್ಥ್​ ನಾರಾಯಣ- ರಾಮನಗರ
  11. ಸಿ ಸಿ ಪಾಟೀಲ- ಗದಗ
  12. ಆನಂದ್​ ಸಿಂಗ್​ – ಬಳ್ಳಾರಿ ಮತ್ತು ವಿಜಯ ನಗರ
  13. ಕೋಟ ಶ್ರೀನಿವಾಸ ಪೂಜಾರಿ – ಕೊಡಗು
  14. ಪ್ರಭು ಚವ್ಹಾಣ್​- ಬೀದರ್​
  15. ಮುರುಗೇಶ್​ ರುದ್ರಪ್ಪ ನಿರಾಣಿ -ಕಲಬುರಗಿ
  16. ಅರೆಬೈಲ್​ ಹೆಬ್ಬಾರ್​ ಶಿವರಾಮ್​- ಉತ್ತರ ಕನ್ನಡ
  17. ಎಸ್​ ಟಿ ಸೋಮಶೇಖರ್​ -ಉತ್ತರ ಕನ್ನಡ
  18. ಬಿ ಸಿ ಪಾಟೀಲ್​​- ಹಾವೇರಿ
  19. ಬಿ ಎ ಬಸವರಾಜ್​- ದಾವಣಗೆರೆ
  20. ಡಾ ಕೆ ಸುಧಾಕರ್​- ಚಿಕ್ಕಬಳ್ಳಾಪುರ
  21. ಕೆ ಗೋಪಾಲಯ್ಯ- ಹಾಸನ
  22. ಶಶಿಕಲಾ ಜೊಲ್ಲೆ – ವಿಜಯಪುರ
  23. ಎಂಟಿಬಿ- ಬೆಂಗಳೂರು ಗ್ರಾಮಾಂತರ
  24. ಕೆ ಸಿ ನಾರಾಯಣ ಗೌಡ- ಮಂಡ್ಯ
  25. ಬಿ ಸಿ ನಾಗೇಶ್​- ಯಾದಗಿರಿ
  26. ಸುನೀಲ್​ ಕುಮಾರ್​- ಉಡುಪಿ
  27. ಆಚಾರ್​ ಹಾಲಪ್ಪ ಬಸಪ್ಪ- ಕೊಪ್ಪಳ
  28. ಶಂಕರ್​ ಬಿ ಪಾಟೀಲ್​ ಮುನೇನಕೊಪ್ಪ- ಧಾರವಾಡ
  29. ಮುನಿರತ್ನ – ಕೋಲಾರ 
Donate Janashakthi Media

Leave a Reply

Your email address will not be published. Required fields are marked *