ಬಿಹಾರ: ಮುಸ್ಲಿಂ ಯುವತಿ ಜೊತೆಗೆ ಪ್ರೀತಿಸಿದ ದಲಿತ ಯುವಕನಿಗೆ ಉಗುಳು ನೆಕ್ಕಿಸಿ ಹಲ್ಲೆ

ಸಮಸ್ತಿಪುರ (ಬಿಹಾರ): ಮುಸ್ಲಿಂ ಯುವತಿಯೊಬ್ಬಳನ್ನು ಪ್ರೀತಿಸಿದ ಕಾರಣಕ್ಕೆ ದಲಿತ ಯುವಕನ ಮೇಲೆ ಹಲ್ಲೆ ನಡೆದಿರುವ ಅಮಾನವೀಯತೆಯ ಘಟನೆಯೊಂದು ನಡೆದಿದ್ದು, ಯುವಕನನ್ನು ಥಳಿಸಿ, ಆತನಿಂದ ಬಲವಂತವಾಗಿ ಉಗುಳು ನೆಕ್ಕಿಸಿರುವ ಘಟನೆ ನಡೆದಿದೆ.

ಸಮಸ್ತಿಪುರ ಜಿಲ್ಲೆಯ ಉಜಿಯಾರ್‌ಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಹೇಶರಿ ಗ್ರಾಮದ ದಲಿತ ಯುವಕ ಪಾಸ್ವಾನ್ (22), ಮುಸ್ಲಿಂ ಯುವತಿಯನ್ನು ತನ್ನ ಬೈಕ್‌ನಲ್ಲಿ ಕೂರಿಸಿಕೊಂಡು ಆಕೆಯ ಗ್ರಾಮವಾದ ಚಖಾಬೀಬ್‌ಗೆ ಬಿಟ್ಟು ಹಿಂತಿರುಗುತ್ತಿದ್ದ. ಈ ವೇಳೆ ಅಲ್ಲಿದ್ದ ಜನರು ಆತನನ್ನು ಅಡ್ಡಗಟ್ಟಿ ಥಳಿಸಿದ್ದಾರೆ ಎಂದು ವರದಿಯಾಗಿದೆ.

ಪಾಸ್ವಾನ್‌ ನನ್ನು ಮೌಲಾನರ ಬಳಿಗೆ ಕರೆದೊಯ್ದು ಆತನ ಎದುರು ಮಂಡಿಯೂರಿ ಕುಳಿತುಕೊಳ್ಳುವಂತೆ ಹೇಳಿದ್ದಾರೆ. ಬಳಿಕ ಮೌಲಾನ ನೆಲಕ್ಕೆ ಉಗುಳಿ ಅದನ್ನು ಐದು ಬಾರಿ ನೆಕ್ಕುವಂತೆ ದಲಿತ ಯುವಕನಿಗೆ ಹೇಳಿದ್ದಾನೆ. ಯುವಕನಿಗೆ ಇನ್ನು ಮುಂದೆ ಗ್ರಾಮದಲ್ಲಿ ಕಾಣಿಸಿಕೊಳ್ಳದಂತೆ ಬೆದರಿಕೆ ಹಾಕಲಾಗಿದ್ದು, ನಂತರ ಆತನನ್ನು ಬಿಟ್ಟು ಕಳಿಸಲಾಗಿದೆ.

ಮಹೇಶರಿ ಗ್ರಾಮದ ಯುವಕ, ವಿಭೂತಿಪುರ ಪೊಲೀಸ್ ಠಾಣಾ ವ್ಯಾಪ್ತಿಯ ಚಖಾಬೀಬ್ ಗ್ರಾಮದ ಮುಸ್ಲಿಂ ಯುವತಿಯನ್ನು ಪ್ರೀತಿಸುತ್ತಿದ್ದ ಎಂದು ಹೇಳಲಾಗಿದೆ.

ಈ ವಿಡಿಯೋ ಸಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ವಿಭೂತಿಪುರ ಪೊಲೀಸ್ ಠಾಣೆಯ ಉಸ್ತುವಾರಿ ಸಂದೀಪ್ ಪಾಲ್, ವಿಡಿಯೋ ಆಧಾರದ ಮೇಲೆ ಆರೋಪಿಗಳನ್ನು ಗುರುತಿಸಲಾಗಿದೆ. ಆದರೆ, ಈವರೆಗೂ ಯಾರ ವಿರುದ್ಧ ಕ್ರಮ ಕೈಗೊಂಡಿಲ್ಲ ಎಂದು ತಿಳಿಸಿದ್ದಾರೆ.

ಚಖಾಬೀಬ್ ಗ್ರಾಮ ಪಂಚಾಯಿತಿ ಅಧ್ಯಕ್ಷ ರಾಮ್ ಸೇವಕ್ ಶಾ ಘಟನೆ ಕುರಿತು ಪ್ರತಿಕ್ರಿಯೆ ನೀಡಿದ್ದು, ಮುಸ್ಲಿಂ ಹುಡುಗಿಯನ್ನು ಆಕೆಯ ಗ್ರಾಮಕ್ಕೆ ಬಿಟ್ಟು ಬರಲು ಹೋಗಿದ್ದಾಗ ಈ ಘಟನೆ ನಡೆದಿದೆ. ಪಾಸ್ವಾನ್ ಎಂಬ ದಲಿತ ಯುವಕನಿಗೆ ಉಗುಳು ನೆಕ್ಕಿಸಲಾಗಿದೆ ಎಂದು ತಿಳಿಸಿದ್ದು, ಆರೋಪಿ ಮೌಲಾನನ ಹೆಸರು ಹೇಳಲು ನಿರಾಕರಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *