ಹೈಕೋರ್ಟ್ ಮಹತ್ವದ ತೀರ್ಪು| ಕಟ್ಟಡ ಕಾರ್ಮಿಕ ಮಕ್ಕಳಿಂದ ವಿಜಯೋತ್ಸವ

ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ‌ ಕಾರ್ಮಿಕ ಕಲ್ಯಾಣ‌ ಮಂಡಳಿಯು  ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳಿಗೂ 2021 ಅಧಿಸೂಚನೆ ಅನ್ವಯವೇ ಬಾಕಿ ಇರುವ ಮೂರು ವರ್ಷದ ಶೈಕ್ಷಣಿಕ ಧನಸಹಾಯ ವಿತರಿಸಲು ತ್ವರಿತಗತಿಯಲ್ಲಿ ಕ್ರಮವಹಿಸಬೇಕೆಂದು ಕರ್ನಾಟಕ ಹೈಕೋರ್ಟ್ ಮಹತ್ವದ ತೀರ್ಪು ಸ್ವಾಗತಿಸಿ ಇಂದು ರಾಜ್ಯಾದ್ಯಂತ ವಿಜಯೋತ್ಸವ ಆಚರಿಸಿ ತೀರ್ಪು ಜಾರಿಗೊಳಿಸಲು ಆಗ್ರಹಿಸಿದರು.

ಕರ್ನಾಟಕ ಕಟ್ಟಡ & ಇತರೆ ನಿರ್ಮಾಣ ಕಾರ್ಮಿಕರ ಕಲ್ಯಾಣ ಮಂಡಳಿಯು ಕಟ್ಟಡ ಕಾರ್ಮಿಕರ ಮಕ್ಕಳ ಶೈಕ್ಷಣಿಕ ಸಹಾಯಧನವನ್ನು 2023 ರಿಂದ ಶೇ 70 ರಿಂದ ಶೇ. 80 ರಷ್ಟು ಕಡಿತ ಮಾಡಿತ್ತು. ಕಲ್ಯಾಣ ಮಂಡಳಿಯ ಈ ನಿರ್ಧಾರವನ್ನು ಇದನ್ನು ಪ್ರಶ್ನಿಸಿ ಕರ್ನಾಟಕ ರಾಜ್ಯ ‌ಕಟ್ಟಡ ಮತ್ತು ಇತರೆ ನಿರ್ಮಾಣ‌ ಕಾರ್ಮಿಕರ ಫೆಡರೇಷನ್‌ (CWFI-CITU) ಸಂಘಟನೆಯು  ಹೈಕೋರ್ಟ್ ಮೊರೆ ಹೋಗಿತ್ತು.

ಈ  ರಿಟ್  ಅರ್ಜಿಯನ್ನು ಮಾನ್ಯ‌ಮಾಡಿದ್ದ ನ್ಯಾಯಮೂರ್ತಿ ಶ್ರೀ ನಾಗಪ್ರಸನ್ನ  ನೇತೃತ್ವದ ಏಕ‌ಸದಸ್ಯ ಪೀಠವು‌ ಮಾನ್ಯ ಮಾಡಿ 2023 ಏಪ್ರಿಲ್ ನಲ್ಲೇ ಮಧ್ಯಂತರ ಆದೇಶ ನೀಡಿ ಅರ್ಜಿ ಸಲ್ಲಿಸಿದ ಇಬ್ಬರು ವಿದ್ಯಾರ್ಥಿನಿಯರಿಗೆ ದಂಡ ಸಹಿತ ಶೈಕ್ಷಣಿಕ ‌ಧನ ಸಹಾಯ ಪಾವತಿಸಲು ಆದೇಶಿಸಿತ್ತು. ಇದೀಗ ಅಂತಿಮ ತೀರ್ಪು ಹೊರ ಬಂದಿದ್ದು, ಅದರ ಅನ್ವಯ 2020 – 21, 2021 – 22 ಹಾಗೂ 2022 – 23 ನೇ ಸಾಲಿನ ಶೈಕ್ಷಣಿಕ ಸಹಾಯಧನವನ್ನು 2021 ರ ಅಧಿಸೂಚನೆ ಅನ್ವಯವೇ ಬಿಡುಗಡೆ ಮಾಡುವಂತೆ  ಆದೇಶ ನೀಡಿದೆ ಮಾತ್ರವಲ್ಲ ಸದರಿ ಆದೇಶವನ್ನು  ಜಾರಿ ಮಾಡಲು ಅಗತ್ಯ ಕ್ರಮವಹಿಸಲು ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳಿಗೆ ನಿರ್ದೇಶಕ ನೀಡಿದೆ.ಅಲ್ಲದೆ 2023 ರ ಸರ್ಕಾರದ  ಅಧಿಸೂಚನೆಯನ್ನು ರದ್ದುಗೊಳಿಸಿ ಈ ಹಿಂದಿನ  2021 ರ ಅಧಿಸೂಚನೆ ಪ್ರಕಾರವೇ ವಿದ್ಯಾರ್ಥಿ ವೇತನ ವಿತರಿಸಲು ಜನವರಿ10 ರಂದು ಅಂತಿಮ‌ ತೀರ್ಪು ನೀಡಿತ್ತು.

Oplus_131072

ರಾಜ್ಯಾದ್ಯಂತ ವಿಜಯೋತ್ಸವ ಆಚರಣೆ

ಹೈಕೋರ್ಟ್ ತೀರ್ಪು ನ್ನು ಸ್ವಾಗತಿಸಿ ಇಂದು ರಾಜ್ಯದ ಎಲ್ಲಡೆ ವಿಜಯೋತ್ಸವ ಆಚರಣೆಗೆ ಫೆಡರೇಷನ್‌ ಕರೆ‌ ನೀಡಿತ್ತು. ಅದರ‌ಂತೆ  ರಾಯಚೂರು,ಕೊಪ್ಪಳ, ವಿಜಯನಗರ,ಉಡುಪಿ,ಬೆಳಗಾವಿ,ದಾವಣಗೆರೆ, ಬೆಂಗಳೂರು,ಗದಗ,ತುಮಕೂರು ಸೇರಿ ರಾಜ್ಯಾದ್ಯಂತ ವಿವಿಧ ತಾಲೂಕು ಹಾಗೂ ನಗರ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸೇರಿದ್ದ ವಿದ್ಯಾರ್ಥಿ ವೇತನಕ್ಕಾಗಿ ಅರ್ಜಿ ಸಲ್ಲಿಸಿದ ಮಕ್ಕಳು,ಕಾರ್ಮಿಕರು ಸಿಹಿ ಹಂಚಿ ವಿಜಯೋತ್ಸವ ಆಚರಿಸಿದರು ಹಾಗೂ ಹೈಕೋರ್ಟ್ ಆದೇಶ ಜಶರಿಗೊಳಿಸಲು ಆಗ್ರಹಿಸಿದರು.

ಬಡ ಕಟ್ಟಡ ಕಾರ್ಮಿಕರ ಶೈಕ್ಷಣಿಕ ಬದುಕನ್ನೇ ಕಿತ್ತು ಕೊಂಡಿದ್ದ 2023 ರ ರಾಜ್ಗ ಸರ್ಕಾರದ ಅಧಿಸೂಚನೆ ಯನ್ನು ರದ್ದುಗೊಳಿಸಿ ಲಕ್ಷಾಂತರ ವಿದ್ಯಾರ್ಥಿಗಳಿಗೆ ನ್ಯಾಯ ‌ನೀಡಿರುವ ಹೈಕೋರ್ಟ್ ಆದೇಶವನ್ನು ಸ್ವಾಗತಿಸಿರುವ ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ‌ಕಾರ್ಮಿಕರ ಫೆಡರೇಷನ್‌ (ರಿ)  ಕಲ್ಯಾಣ‌ ಮಂಡಲಿಯು‌ ಕೂಡಲೇ 2021 ಅಧಿಸೂಚನೆ ಅನ್ವಯವೇ ಅರ್ಜಿ ಸಲ್ಲಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಬಾಕಿ ಸಹಿತ ಶೈಕ್ಷಣಿಕ ಧನ‌ಸಹಾಯವನ್ನು ಅವರ ಖಾತೆಗೆ ವರ್ಗಾಹಿಸಲು ಅಗತ್ಯ ಕ್ರಮವಹಿಸಬೇಕೆಂದು ಸಂಘಟನೆಯ ಪ್ತಧಾನ ಕಾರ್ಯದರ್ಶಿ ಕೆ. ಮಹಾಂತೇಶ ಆಗ್ರಹಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *