ಪತ್ರಕರ್ತ ಆಶೀಸ್ ಯೆಚೂರಿ ಕೋವಿಡ್ನಿಂದ ನಿಧನ

ನವದೆಹಲಿ: ಸಿಪಿಐ (ಎಂ) ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯೆಚೂರಿಯವರ ಹಿರಿಯ ಮಗ ಆಶಿಶ್ ಕೋವಿಡ್‌ನಿಂದ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ.

ಈ ಕುರಿತು ಅಧಿಕೃತ ವಾಗಿ ಟ್ವೀಟ್ ಮಾಡಿರುವ ಸೀತಾರಾಮ್ ಯೆಚೂರಿ “ನನ್ನ ಹಿರಿಯ ಮಗ ಆಶಿಶ್ ಯೆಚೂರಿಯನ್ನು ಕೋವಿಡ್‌ನಿಂದ ಇಂದು ಬೆಳಿಗ್ಗೆ ಕಳೆದುಕೊಂಡೆ ಎಂದು ನಾನು ತಿಳಿಸಬೇಕಾಗಿರುವುದು ಬಹಳ ದುಃಖದ ಸಂಗತಿಯಾಗಿದೆ. ನಮಗೆ ಭರವಸೆ ಮತ್ತು ಅವನಿಗೆ ಉತ್ತಮ ಚಿಕಿತ್ಸೆ ನೀಡಿದ ವೈದ್ಯರು, ದಾದಿಯರು, ಮುಂಚೂಣಿ ಆರೋಗ್ಯ ಕಾರ್ಯಕರ್ತರು, ನೈರ್ಮಲ್ಯ ಕಾರ್ಮಿಕರು ಮತ್ತು ನಮ್ಮೊಂದಿಗೆ ನಿಂತ ಅಸಂಖ್ಯಾತ ಜನರಿಗೆ ಧನ್ಯವಾದಗಳನ್ನು ಅರ್ಪಿಸುತ್ತೇನೆ” ಎಂದು ಟ್ವೀಟ್ ಮೂಲಕ ತಿಳಿಸಿದ್ದಾರೆ.

ಜೂನ್ 9 ರಂದು 35 ನೇ ವರ್ಷಕ್ಕೆ ಕಾಲಿಡುತ್ತಿದ್ದ ಆಶಿಶ್, ಗುರ್‌ ಗಾಂವ್‌ನ ಮೆಡಂತಾ ಆಸ್ಪತ್ರೆಯಲ್ಲಿ ಕೋವಿಡ್‌ ಸೋಂಕಿಗೆ ಚಿಕಿತ್ಸೆ ಪಡೆಯುತ್ತಿದ್ದರು. ಕೊರೊನಾ ವಿರುದ್ಧದ ಎರಡು ವಾರಗಳ ಹೋರಾಟದ ಬಳಿಕ ಬೆಳಿಗ್ಗೆ 5.30 ಕ್ಕೆ ಅವರು ಹಠಾತ್ ನಿಧನರಾಗಿದ್ದಾರೆ. ಆಶಿಶ್ ತನಿಖಾ ಮಾಧ್ಯಮದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಅವರ ನಿಧನಕ್ಕೆ ಸಿಪಿಐಎಂ ಕೇಂದ್ರ ಸಮಿತಿ, ಪಕ್ಷದ ಮುಖಂಡರು, ಚಿಂತಕರು ಹಾಗೂ ಪತ್ರಕರ್ತರು ಕಂಬನಿ ಮಿಡಿದಿದ್ದಾರೆ.

Donate Janashakthi Media

One thought on “ಪತ್ರಕರ್ತ ಆಶೀಸ್ ಯೆಚೂರಿ ಕೋವಿಡ್ನಿಂದ ನಿಧನ

  1. ಆಶಿಸ್ ರವರ ಕುಟುಂಬಕ್ಕೆ ಭಗವಂತ ದುಃಖ ಸಹಿಸುವ ಶಕ್ತಿ ನೀಡಲಿ ಎಂದು ಪ್ರಾರ್ಥಿಸುತ್ತೇನೆ. ಓಂ ಶಾಂತಿ

Leave a Reply

Your email address will not be published. Required fields are marked *