ಕಾಂಗ್ರೆಸ್‌ ಗೆಲ್ಲುವುದೆಂದು ಒಬ್ಬರು ಜಮೀನು, ಮತ್ತೊಬ್ಬರು ಟ್ರ್ಯಾಕ್ಟರ್‌ ಪಣಕ್ಕಿಟ್ಟರು!

ಹಾವೇರಿ: ಹಾನಗಲ್‌ ವಿಧಾನಸಭೆಯ ಉಪಚುನಾವಣಾ ಮತ ಏಣಿಕೆ ನಡುವೆಯೇ ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದೆಗೆಲ್ಲುವರೆಂದು ಬಾಜಿ ಕಟ್ಟಿದ ಪ್ರಸಂಗವೊಂದು ನಡೆದಿದೆ.

ಕಾಂಗ್ರೆಸ್‌ ಅಭ್ಯರ್ಥಿ ಶ್ರೀನಿವಾಸ್ ಮಾನೆ ಗೆಲುವು ಸಾಧಿಸುತ್ತಾರೆ ಎಂಬ ನಂಬಿಕೆಯಿಂದ ಮಾರನಬೀಡ ಗ್ರಾಮದ ಹನುಮಂತಪ್ಪ ಎಂಬಾತ ತಮ್ಮ ಒಂದು ಎಕರೆ ಜಮೀನು ಪಣಕ್ಕಿಟ್ಟಿದ್ದಾನೆ. ಕೇವಲ ಜಮೀನು ಮಾತ್ರವಲ್ಲ ಪ್ರತ್ಯೇಕವಾಗಿ 15 ಸಾವಿರ ರೂಪಾಯಿ ನಗದು ಕೂಡ ನಿಗದಿಪಡಿಸಿದ್ದಾನೆ.

ಇದನ್ನು ಓದಿ: ಸಿಂದಗಿಯಲ್ಲಿ ಅರಳಿದ ಕಮಲ, ನಡೆಯದ ʻಕೈʼ ಕಸರತ್ತು, ಬಾಡಿದ ತೆನೆ

ಕಾಂಗ್ರೆಸ್ ಅಭ್ಯರ್ಥಿ ಶ್ರೀನಿವಾಸ ಮಾನೆ ಗೆದ್ದೇಗೆಲ್ಲುವರೆಂದು ಅವರ ಮತ್ತೊಬ್ಬ ಅಭಿಮಾನಿ ಒಂದು ಟ್ರಾಕ್ಟರ್ ಅನ್ನು ಬಾಜಿ ಕಟ್ಟಿದ್ದಾನೆ. ಈ ಬಗ್ಗೆ ಮಾತನಾಡಿದ ಆತ ಬಿಜೆಪಿಯವರು ಒಂದು ಮತಕ್ಕೆ 2,500 ರೂಪಾಯಿ ಕೊಟ್ಟಿದ್ದಾರೆ. ಕಾಂಗ್ರೆಸ್ ಪ್ರಾಮಾಣಿಕವಾಗಿ ಗೆಲ್ಲುತ್ತದೆ ಎಂದು ಮಾಧ್ಯಮಗಳ ಮೂಲಕ ವಿಶ್ವಾಸ ವ್ಯಕ್ತಪಡಿಸಿದ್ದಾನೆ.

ಹಾನಗಲ್ ಹಾಗೂ ಸಿಂದಗಿ ವಿಧಾನಸಭೆ ಕ್ಷೇತ್ರಗಳಿಗೆ ಉಪಚುನಾವಣೆ ಅಕ್ಟೋಬರ್ 30 ರಂದು ಉಪಚುನಾವಣೆ ನಡೆದಿದೆ. ಇಂದು ಚುನಾವಣಾ ಫಲಿತಾಂಶ ಪ್ರಕಟಗೊಂಡಿದ್ದು, ಹಾನಗಲ್​ನಲ್ಲಿ ಕಾಂಗ್ರೆಸ್​ ಅಭ್ಯರ್ಥಿ ಅಭ್ಯರ್ಥಿ ಹಾಗೂ ಸಿಂದಗಿಯಲ್ಲಿ ಬಿಜೆಪಿ ಅಭ್ಯರ್ಥಿ ಗೆಲುವು ಸಾಧಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *