ಸಿಎಂ ಸುತ್ತ ಒಂದಷ್ಟು ಬ್ಯಾಂಡ್‌ ಸೆಟ್‌ ಗಳು

ಬೆಂಗಳೂರು: ರಾಜ್ಯದಲ್ಲಿ ಯಾರೇ ಅಧಿಕಾರಕ್ಕೆ ಬಂದರೂ ಮುಖ್ಯಮಂತ್ರಿಗಳ ಸುತ್ತ ಒಂದಷ್ಟು ಜನ ತಮ್ಮ ಕೆಲಸಕ್ಕಾಗಿ ಅವರನ್ನು ಪುಸಲಾಯಿಸುವ ಕೆಲಸ ಮಾಡುತ್ತಿರುತ್ತಾರೆ. ಅವರನ್ನು ಬ್ಯಾಂಡ್‌ ಸೆಟ್‌ ಅಂತ ಕರೆಯುತ್ತಾರೆ ಎಂದು ರಮೇಶ್‌ ಕುಮಾರ್‌ ಆರೋಪಿಸಿದರು.

ವಿಧಾನಸಭೆಯ ಅಧಿವೇಶನದ ಸಂದರ್ಭದಲ್ಲಿ ಮಾತನಾಡಿದ ಅವರು, ಇಂಥ ಬ್ಯಾಂಡ್‌ ಸೆಟ್‌ ರವರಿಂದ ಈಗಾಗಲೇ ಹಲವು ನಾಯಕರು ಬಲಿಯಾಗಿದ್ದಾರೆ. ನೀವು ಹುಷಾರಾಗಿರಿ ಎಂದು ಮುಖ್ಯಮಂತ್ರಿ ಯಡಿಯೂರಪ್ಪನವರನ್ನು ಕಾಲೆಳೆದರು.

ಅಧಿಕಾರ ನಿರ್ವಹಿಸುವ ನಾಯಕ ಮಾಡಬೇಕಾದ ನಿಜವಾದ ಕೆಲಸವನ್ನೇ ಮರೆತುಬಿಡುತ್ತಾನೆ. ಹಿಂದೆ ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗಲೂ ಇದೇ ಮಾತನ್ನು ಹೇಳಿದ್ದೆ. ಈಗಲೂ ಮುಖ್ಯಮಂತ್ರಿ ಯಡಿಯೂರಪ್ಪನವರ ಸುತ್ತಲೂ ಇದ್ದಾರೆ ಎಂದು ವಿವರಿಸಿದರು.

Donate Janashakthi Media

Leave a Reply

Your email address will not be published. Required fields are marked *