ಚಂದ್ರು ಸಾವಿನ ಪ್ರಕರಣ; ಗೌರಿಗದ್ದೆ ಆಶ್ರಮದ ವಿನಯ್‌ ಗುರೂಜಿ ಕುರಿತ ಹಳೇ ವಿಡಿಯೋ ವೈರಲ್‌

ಬೆಂಗಳೂರು : ಗೌರಿಗದ್ದೆ ಆಶ್ರಮ ಸಲಿಂಗ ಕಾಮದ ಅಡ್ಡೆಯಾಗಿದ್ಯಾ, ವಿನಯ್​ ಗುರೂಜಿ ಸ್ವಂತ ಸಂಬಂಧಿಕನನ್ನೇ ಬಳಸಿಕೊಳ್ಳಲು ಹೋಗಿದ್ರಾ, ಗಂಡಸರೊಂದಿಗೆ ಅಸಭ್ಯವಾಗಿ ವರ್ತಿಸ್ತಾರಾ ವಿನಯ್​ ಗುರೂಜಿ, ಹೀಗೆ ಆಶ್ರಮಕ್ಕೆ ಸಂಬಂಧಿಸಿದ ರಹಸ್ಯ ವಿಚಾರದ ಬಗ್ಗೆ ವಿಡಿಯೋವೊಂದು ಬಹಿರಂಗಗೊಂಡಿದೆ. ಸ್ವತಃ ವಿನಯ್‌ ಗುರೂಜಿ ಸ್ನೇಹಿತನೇ ಈ ರಹಸ್ಯವನ್ನು ಬಿಟ್ಟಿದ್ದಾನೆ.

ಹೊನ್ನಾಳಿ ಶಾಸಕ ರೇಣುಕಾಚಾರ್ಯ ಅವರ ತಮ್ಮನ ಮಗ ಎಂ.ಆರ್. ಚಂದ್ರಶೇಖರ್ ಸಾವಿಗೆ ಗೌರಿಗದ್ದೆ ಆಶ್ರಮದ ಸಂಪರ್ಕದ ಬಗ್ಗೆ ತನಿಖೆಯ ನಡೆಯುತ್ತಿದ್ದು, ಇದೀಗ ಹಳೆ ವಿಡಿಯೋ ವೈರಲ್​​​ ಆಗಿದ್ದು, ವಿನಯ್​ ಗುರೂಜಿ ಬಗ್ಗೆ ಆಪ್ತ ಸ್ನೇಹಿತನ ಸ್ಫೋಟಕ ಮಾಹಿತಿ ಹರಿಬಿಟ್ಟಿದ್ದಾನೆ. ಆ ಸ್ನೇಹಿತ ಬಾಲ್ಯದಿಂದಲೂ ವಿನಯ್​​ ಗುರೂಜಿ ಜೊತೆಗಿದ್ದನು. ವಿನಯ್​​​ ಗುರೂಜಿ ಮೂಲ ಏನು..? ಆಶ್ರಮ ಮಾಡಿದ್ದು ಯಾಕೆ..? ಆಶ್ರಮ ಮಾಡಿದ ಮೇಲೆ ಏನೇನಾಯ್ತು..? ಈ ಎಲ್ಲಾ ಮಾಹಿತಿಗಳನ್ನು ಸ್ನೇಹಿತ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿದೆ.

ವಿನಯ್​​ ಗುರೂಜಿ ದಿಢೀರ್​​ ಸನ್ಯಾಸಿ ಆಗಿದ್ದೇಗೆ, ಪ್ರೊಫೆಸರ್​ ಆಗಿದ್ದವರು ರಾಮ. ಕೃಷ್ಣನ ಕಥೆ ಹೇಳಲು ಶುರು ಮಾಡಿದ್ದು..? ಗಾಂಧಿ ತತ್ವ ಹೇಳಿಕೊಂಡು ಮಾಡ್ತಿರೋದೆಲ್ಲಾ ಆ ಕೆಲಸಾನಾ..? ವಿನಯ್​ ಗುರೂಜಿ ಲೀಲೆಯನ್ನು ಸ್ನೇಹಿತ ವಿನೋದ್ ಶೆಟ್ಟಿ ಬಿಚ್ಚಿಟ್ಟಿದ್ದಾರೆ.

ವಿನಯ್‌ ಮದುವೆಯಾಗದೇ ಸುಖ ಪಡೆಯೋದನ್ನು ಹೇಳಿಕೊಡ್ತಾರೆ. ದುಡ್ಡಿದ್ರೆ ಎಂತೆಂಥಾ ಹೆಣ್ಣು ಮಕ್ಕಳೂ ಬಲೆಗೆ ಬೀಳ್ತಾರೆ..? ಮಹಿಳೆಯರ ಬಗ್ಗೆ ಇಷ್ಟೊಂದು ಕೀಳಾಗಿ ಮಾತಾಡಿದ್ರಾ ವಿನಯ್​ ಗುರೂಜಿ..? ಚಂದ್ರಶೇಖರ್​​​​ ಸಾವಿನ ಬೆನ್ನಲ್ಲೇ ಆಶ್ರಮಕ್ಕೆ ಪೊಲೀಸರು ಭೇಟಿ ಕೊಟ್ಟಿದ್ದೇಕೆ..? ಚಂದ್ರು ಜತೆಗಿದ್ದ ಸ್ನೇಹಿತರೆಲ್ಲಾ ಅದೇ ಕೆಟಗರಿಗೆ ಸೇರಿದ್ರಾ..?ಸ್ನೇಹಿತ ಕಿರಣ್​​​ ಜತೆ ಆಶ್ರಮಕ್ಕೆ ಹೋದ ಹೊತ್ತಲ್ಲೇ ಆಯಕ್ಸಿಡೆಂಟ್​ ಆಗಿದ್ಯಾಕೆ..? ವಿನಯ್​​ ಗುರೂಜಿ ಗೆಳೆಯನ ಮಾತಿಗೂ ಚಂದ್ರು ಸಾವಿಗೂ ಏನಾದರೂ ಸಂಬಂಧವಿದೆಯೇ ಎಂದು ಪತ್ತೆ ಮಾಡಬೇಕಾಗಿದೆ.

ಪೊಲೀಸರಿಂದ ಆಶ್ರಮದಲ್ಲಿ ಮಾಹಿತಿ ಸಂಗ್ರಹ

ಚಂದ್ರಶೇಖರ್‌ ಸಾವಿನ ಪ್ರಕರಣದ ತನಿಖೆ ನಡೆಸುತ್ತಿರುವ ಪೊಲೀಸರು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಗೌರಿಗದ್ದೆಗೆ ಭಾನುವಾರ ಭೇಟಿ ನೀಡಿ ವಿನಯ್‌ ಗುರೂಜಿ ಆಶ್ರಮದಲ್ಲಿ ಮಾಹಿತಿ ಕಲೆ ಹಾಕಿದ್ದಾರೆ. ಚನ್ನಗಿರಿ ಠಾಣೆ ಪೊಲೀಸರು ಚಂದ್ರಶೇಖರ್ ಗೌರಿಗದ್ದೆಗೆ ಬಂದುಹೋಗಿದ್ದ ಕುರಿತು ವಿವರ ಪಡೆದಿದ್ದಾರೆ. ಸಿ.ಸಿ. ಟಿವಿ ಕ್ಯಾಮೆರಾ ದಾಖಲೆಗಳನ್ನು ಸಂಗ್ರಹಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *