ಫೆಬ್ರವರಿ 24 ರಂದು ರಾಜ್ಯದ ಎಲ್ಲಾ ಶಾಸಕರ ಮನೆ ಮುಂದೆ ಪ್ರತಿಭಟಿನೆ: ರೈತ ಕೂಲಿಕಾರರ ನಿರ್ಧಾರ

ಬೆಂಗಳೂರು: ಕಳೆದ ಎರಡು ದಿನಗಳಿಂದ ಬೆಂಗಳೂರಿನ ಸ್ವತಂತ್ರ ಉದ್ಯಾನವನದಲ್ಲಿ ಕರ್ನಾಟಕ ಪ್ರಾಂತ ರೈತ ಸಂಘ ಮತ್ತು ಕರ್ನಾಟಕ ಪ್ರಾಂತ ಕೃಷಿ ಕೂಲಿಕಾರರ…

ಕಟ್ಟಡ ಕಾಮಗಾರಿ ವೇಳೆ ಗೋಡೆ ಕುಸಿತ – ಓರ್ವ ಕಾರ್ಮಿಕನಿಗೆ ಗಂಭೀರ ಗಾಯ

ಕಟ್ಟಡ ನಿರ್ಮಾಣದ ವೇಳೆ ಗೋಡೆ ಅಗೆಯುತ್ತಿರುವಾಗ ಗೋಡೆ ಕುಸಿದ ಕಟ್ಟಡ ಕಾರ್ಮಿಕನೋರ್ವ ಗಾಯಗೊಂಡಿರುವ ಘಟನೆ ನಡೆದಿದೆ. ಕಟ್ಟಡ ನೆಟ್ಕಲ್ಲಪ್ಪ ವೃತ್ತದ ಮಲ್ಲಿಕಾರ್ಜುನ…

ವೇದವ್ಯಾಸರು 13 ಕಡೆ ಗುದ್ದಲಿ ಪೂಜೆ ನಡೆಸಿದ ಕಾಮಗಾರಿ ಕಥೆ ಏನಾಗಿದೆ ಎಂದು ಉತ್ತರಿಸಲಿ? -ಸಂತೋಷ್ ಬಜಾಲ್ 

ಮಂಗಳೂರು: ನಗರ ಪಾಲಿಕೆಯ ಸಾವಿರಾರೂ ಕೋಟಿ ರೂಪಾಯಿ‌ ಅನುದಾನಗಳಲ್ಲಿ ಬಜಾಲ್ ವಾರ್ಡಿನ ಅಭಿವೃದ್ಧಿಗೆ ಬೀಡಿಗಾಸೂ ಈವರೆಗೂ ಮೀಸಲಿಟ್ಟಿಲ್ಲ. ಶಾಸಕ ವೇದವ್ಯಾಸರು ಈ…

ಬಡವರಿಂದ ಮತ ಪಡೆದ ಸರ್ಕಾರಗಳು ಶ್ರೀಮಂತರ ಪರ ನೀತಿಗಳನ್ನು ಜಾರಿ ಮಾಡುತ್ತಿವೆ – ವಿಜೂ ಕೃಷ್ಣನ್‌

ಬೆಂಗಳೂರು: ನಾವು ಚುನಾಯಿಸದ ಸರ್ಕಾರಗಳು ನಮ್ಮನ್ನು ನಿರ್ಲ್ಯಕ್ಷಿಸಿ, ಶ್ರೀಮಂತರಪರ ನಿಲುವು ಜಾರಿ ಮಾಡುತ್ತಿವೆ ಎಂದು ಅಖಿಲ ಭಾರತ ಕಿಸಾನ್‌ ಸಭಾದ ಅಖಿಲ…

ಬಿಸಿಎಮ್ ಇಲಾಖೆ ಯಡವಟ್ಟು, ವಿದ್ಯಾರ್ಥಿ ಜೀವನಕ್ಕೆ ಕೊಡಲಿ ಪೆಟ್ಟು: ವಿದ್ಯಾರ್ಥಿ ನಿಲಯವು ಇಲ್ಲ, ವಿದ್ಯಾರ್ಥಿ ವೇತನವು ಇಲ್ಲ

ರಾಣೇಬೆನ್ನೂರ: ತಾಲ್ಲೂಕಿನ ಸೋಮಲಾಪುರ ಗ್ರಾಮದ ಪ್ರಶಾಂತ ಚಂದ್ರಪ್ಪ ಬಾತಪ್ಪನವರ ಎಂಬ ವಿದ್ಯಾರ್ಥಿ ರಾಣೇಬೆನ್ನೂರ ನಗರದಲ್ಲಿರುವ ದೇವಿಕಾ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ವಿಜ್ಞಾನ…

ಜಸ್ಟೀಸ್‌ ದಾಸ್‌ ಸಮಿತಿ ಶೀಘ್ರ ವರದಿ ನೀಡಲಿ – ಒಳ ಮೀಸಲಾತಿ ಹೋರಾಟಗಾರರ ಆಗ್ರಹ

ಬೆಂಗಳೂರು: ಒಳ ಮೀಸಲಾತಿ ಕುರಿತು ಜಸ್ಟೀಸ್‌ ನಾಗಮೋಹನದಾಸ್‌ ಸಮಿತಿಯ ವರದಿ ಶೀಘ್ರವಾಗಿ ನೀಡಬೇಕು ಎಂದು ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ…

ದಯಾನಂದ ಸಾಗರ್ ವಿವಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ : ಕಾರಣವಾದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಪತ್ರ

ರಾಮನಗರ: ದಯಾನಂದ ಸಾಗರ್ ವಿವಿ ನರ್ಸಿಂಗ್ ವಿದ್ಯಾರ್ಥಿನಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾರಣವಾದವರ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ಎಂದು ಭಾರತ ವಿದ್ಯಾರ್ಥಿ…

ದ.ಕ. ಜಿಲ್ಲೆಯ ಹೆದ್ದಾರಿ ಸಮಸ್ಯೆಗಳ ಪರಿಹಾರಕ್ಕೆ ಒತ್ತಾಯಿಸಿ ಸಾಮೂಹಿಕ ಧರಣಿ

–ಹಲವು ಸಂಘಟನೆಗಳು ಭಾಗಿ, ವ್ಯಾಪಕ ಬೆಂಬಲ ದಕ್ಷಿಣ ಕನ್ನಡ ಜಿಲ್ಲೆಯನ್ನು ಹಾದುಹೋಗುವ ನಾಲ್ಕು ಹೆದ್ದಾರಿಗಳು ಸಮಸ್ಯೆಯ ಆಗರವಾಗಿದ್ದು, ಶೀಘ್ರವೇ ಸಮಸ್ಯೆಗಳನ್ನು ಪರಿಹರಿಸಬೇಕು,…

ಬಲವಂತದ ಭೂ ಸ್ವಾಧೀನ ವಿರೋಧಿಸಿ ಫೆ.10 ರಿಂದ ರೈತ-ಕೃಷಿಕೂಲಿಕಾರರ ಬೃಹತ್ ವಿಧಾನ ಸೌಧ ಚಲೋ-ಅನಿರ್ದಿಷ್ಟಾವಧಿ ಧರಣಿ

ಬೆಂಗಳೂರು: ರೈತ-ಕೃಷಿಕೂಲಿಕಾರರ ಭೂಮಿ ಹಕ್ಕಿಗಾಗಿ, ಬಲವಂತದ ಭೂ ಸ್ವಾಧೀನ ವಿರೋಧಿಸಿ ಫೆಬ್ರವರಿ 10, 2025 ರಿಂದ ಸಹಸ್ರಾರು ರೈತ-ಕೃಷಿಕೂಲಿಕಾರರ ಬೃಹತ್ ವಿಧಾನ…

ಶ್ರಮ ದೊಚುವ ವ್ಯವಸ್ಥೆಯನ್ನು ಬದಲಿಸುವುದೇ ಕಮ್ಯುನಿಸ್ಟ್ ಚಳುವಳಿ

ತುಮಕೂರು : ಶ್ರಮದೊಚುವ ವ್ಯವಸ್ಥೆಯನ್ನು ಬದಲಿಸುವುದೆ ಕಮ್ಯುನಿಸ್ಟ್ ಚಳುವಳಿ ಇಂದು ನಾವು ನಮ್ಮ ಕರ್ಮಗಳ ಫಲದಿಂದ ಹೀಗೆ ಇದ್ದೇವೆ ಎಂಬ ಸಿದ್ಧಾಂತ…

ಪಟ್ಟಾ ಜಮೀನು ಹೊಂದಿರುವವರ ಅರಣ್ಯ ಹಕ್ಕು ಅರ್ಜಿ ಪರಿಶೀಲನೆಗೆ ಖಂಡ್ರೆ ಸೂಚನೆ

ಬೆಂಗಳೂರು  : ಅರಣ್ಯ ಹಕ್ಕು ಕಾಯಿದೆ ಅಡಿ ಸೌಲಭ್ಯಕ್ಕಾಗಿ ಪಟ್ಟಾ ಜಮೀನು ಹೊಂದಿರುವವರೂ ಅರ್ಜಿ ಹಾಕಿದ್ದರೆ ಪರಿಶೀಲಿಸಿ ಕೈಬಿಡುವಂತೆ ಅರಣ್ಯ, ಜೀವಿಶಾಸ್ತ್ರ…

ಸಾರ್ವಜನಿಕ ಶಿಕ್ಷಣ ಕ್ಷೇತ್ರವನ್ನು ಕಡೆಗಣಿಸಿರುವ ವಿದ್ಯಾರ್ಥಿ- ಯುವಜನರ ವಿರೋಧಿ ಬಜೆಟ್ – ಎಸ್‌ಎಫ್‌ಐ

ಬೆಂಗಳೂರು: 2025-26 ನೇ ಸಾಲಿನ ಕೇಂದ್ರ ಬಜೆಟ್ ದಿನಾಂಕ 1-02-2025 ರಂದು ಕೇಂದ್ರ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಮಂಡನೆ ಮಾಡಿದ್ದಾರೆ.…

ಹೈಕೋರ್ಟ್ ಮಹತ್ವದ ತೀರ್ಪು| ಕಟ್ಟಡ ಕಾರ್ಮಿಕ ಮಕ್ಕಳಿಂದ ವಿಜಯೋತ್ಸವ

ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ‌ ಕಾರ್ಮಿಕ ಕಲ್ಯಾಣ‌ ಮಂಡಳಿಯು  ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳಿಗೂ 2021 ಅಧಿಸೂಚನೆ…

ಕರಡು ಕೃಷಿ ಮಾರುಕಟ್ಟೆ ನೀತಿಯನ್ನು ವಿರೋಧಿಸಿ ರಾಜ್ಯ ರಾಜಧಾನಿಗಳಲ್ಲಿ ಪ್ರತಿಭಟನೆ:ಎಸ್‌ಕೆಎಂ

ಫೆ. 8- 9 ರಂದು ಎಂಪಿಗಳ ಮನೆಗಳ ಮುಂದೆ ಪ್ರತಿಭಟನೆ; ಮಾರ್ಚ್ 5ರಿಂದ ಸತತ ಪ್ರತಿಭಟನೆ ದಿಲ್ಲಿಯ ಹರ್ಕಿಶನ್ ಸಿಂಗ್ ಸುರ್ಜೀತ್ ಭವನದಲ್ಲಿ ಜನವರಿ 24ರಂದು ನಡೆದ ಸಭೆಯ ನಂತರ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಮಾರುಕಟ್ಟೆ, ಕನಿಷ್ಠ ಬೆಂಬಲ ಬೆಲೆ ಕುರಿತ ಕರಡು ರಾಷ್ಟ್ರೀಯ ನೀತಿ ಚೌಕಟ್ಟನ್ನು (ಎನ್‌ಪಿಎಫ್‌ಎಎಂ) ರದ್ದುಗೊಳಿಸಬೇಕು ಮತ್ತು ಒಂದು ಬಾರಿಯ ಸಾಲ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಸತತ ಚಳುವಳಿಗಳನ್ನು ನಡೆಸಲು ನಿರ್ಧರಿಸಿದೆ. ಸಭೆಯಲ್ಲಿ 12 ರಾಜ್ಯಗಳ 73 ರೈತ ಸಂಘಟನೆಗಳ 165 ಪ್ರತಿನಿಧಿಗಳು ಭಾಗವಹಿಸಿದ್ದರು. ಹನ್ನನ್ ಮೊಲ್ಲಾ, ಜೋಗಿಂದರ್ ಸಿಂಗ್ ಉಗ್ರಹಾನ್, ರಾಕೇಶ್ ಟಿಕಾಯತ್, ರೇವುಲಾ ವೆಂಕಯ್ಯ, ಸತ್ಯವಾನ್ ಮತ್ತು ಡಾ. ಸುನೀಲಮ್‌ರವರಿದ್ದ ಅಧ್ಯಕ್ಷ ಮಂಡಳಿಯು ಸಭೆಯನ್ನು ನಿರ್ವಹಿಸಿತು. ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಹೊಸ ಚೌಕಟ್ಟು ಕೃಷಿ ಮಾರುಕಟ್ಟೆಗಳ ಮೇಲೆ ಕಾನೂನುಗಳನ್ನು ಜಾರಿಗೆ ತರುವ ರಾಜ್ಯ ಶಾಸನಸಭೆಗಳ ಅಧಿಕಾರವನ್ನು ಮೀರಿ ಹೋಗುತ್ತದೆ ಎಂಬ ತಮ್ಮ ಟೀಕೆಯನ್ನು ಪುನರುಚ್ಛರಿಸಿದರು. ಹೊಸ ಕರಡು ಚೌಕಟ್ಟು ರದ್ದಾದ ಮೂರು ಕೃಷಿ ಕಾನೂನುಗಳನ್ನು ಮಾರುವೇಷದಲ್ಲಿ ಮರಳಿ ತರುತ್ತಿದೆ ಎಂದು ರೈತ ಸಂಘಟನೆಗಳು ಹೇಳಿವೆ. ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಉಪಾಧ್ಯಕ್ಷ ಹನ್ನನ್ ಮೊಲ್ಲಾ, ರೈತ ಸಂಘಗಳು ಫೆಬ್ರವರಿ 8 ಮತ್ತು 9 ರಂದು ಸಂಸತ್ ಸದಸ್ಯರ ಮನೆಗಳ ಮುಂದೆ ಪ್ರತಿಭಟನೆಗಳನ್ನು ನಡೆಸಿ ಹೊಸ ಚೌಕಟ್ಟಿನ ಅನುಷ್ಠಾನವನ್ನು ಸ್ಥಗಿತಗೊಳಿಸುವಂತೆ ಸರ್ಕಾರವನ್ನು ಕೇಳುವ ಜ್ಞಾಪಕ ಪತ್ರವನ್ನು ಸಲ್ಲಿಸಲಿವೆ ಎಂದು ಹೇಳಿದರು. “ಸರ್ಕಾರ ನಮ್ಮ ಬೇಡಿಕೆಗಳಿಗೆ ಕಿವಿಗೊಡದಿದ್ದರೆ, ಮಾರ್ಚ್ 5 ರಿಂದ ರಾಜ್ಯ ರಾಜಧಾನಿಗಳು, ಜಿಲ್ಲೆಗಳು ಮತ್ತು ಉಪವಿಭಾಗಗಳ ಮಟ್ಟದಲ್ಲಿ ಶಾಶ್ವತ ಆಂದೋಲನಗಳನ್ನು ಸ್ಥಾಪಿಸುತ್ತೇವೆ ಮತ್ತು ರಾಜ್ಯ ವಿಧಾನಸಭೆಗಳು ಚೌಕಟ್ಟಿನ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಬೇಕೆAದು ಮತ್ತು ಅದನ್ನು ಜಾರಿಗೆ ತರದಂತೆ ಕೇಂದ್ರವನ್ನು ಕೇಳಬೇಕೆಂದು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು. ಎಂಎಸ್‌ಪಿ, ಘೋಷಣೆ, ಸರ್ಕಾರಿ ಖರೀದಿ, ಆಹಾರ ದಾಸ್ತಾನಿನ ಪ್ರಸ್ತಾಪವೇ ಇಲ್ಲ ಈ ನೀತಿಯನ್ನು ಸರ್ಕಾರಿ ಮಂಡಿಗಳ ಮೇಲಿನ ಒಂದು ದಾಳಿ ಎಂದು ರೈತ ಮುಖಂಡರು ೊಕ್ಕೊರಲಿನಿಂದ ಖಂಡಿಸಿರುವುದಾಗಿ ಎಸ್‌ಕೆಎಂ ಹೇಳಿಕೆ ತಿಳಿಸಿದೆ. ಕೃಷಿ ಚಿಲ್ಲರೆ ವ್ಯಾಪಾರ ಮತ್ತು ಕೃಷಿ ಸಂಸ್ಕರಣಾ ಕಾರ್ಪೊರೇಟ್ ಉದ್ಯಮದಲ್ಲಿ ಬಹುರಾಷ್ಟಿçÃಯ ಕಂಪನಿಗಳು ಮತ್ತು ಕಾರ್ಪೊರೇಟ್ ಬೆಳವಣಿಗೆಗೆ ಸಹಾಯ ಮಾಡಲು ಅವುಗಳನ್ನು ಖಾಸಗೀಕರಣಗೊಳಿಸಲು ಈ ದಾಳಿ ನಡೆಸಲಾಗುತ್ತಿದೆ. ಕೃಷಿಕ ಉತ್ಪನ್ನ ಸಂಘಟನೆ(ಎಫ್‌ಪಿಒ)ಗಳು ಮತ್ತು ಇಲೆಕ್ಟಾçನಿಕ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ(ಇ-ನಾಮ್)ಗಳ ಮೂಲಕ ಸ್ಥಳೀಯ ಗ್ರಾಮೀಣ ಮಂಡಿಗಳಿಗೆ ಲಗ್ಗೆ ಹಾಕುತ್ತದೆ ಮತ್ತು ಎಫ್‌ಪಿಒಗಳು, ಸಹಕಾರಿಗಳು ಮತ್ತು ಸ್ವಸಹಾಯ ಗುಂಪು(ಎಸ್‌ಹೆಚ್‌ಜಿ)ಗಳ ಮೂಲಕ ಕಾಂಟ್ರಾಕ್ಟ್ ಕೃಷಿಯನ್ನು ಜಾರಿಗೊಳಿಸುತ್ತದೆ, ಈ ಮೂಲಕ ಆಹಾರ ಸಂಸ್ಕರಣಾ ಮೌಲ್ಯವರ್ಧಿತ ಸರಪಳಿಗಳಿಗೆ ಅಗ್ಗದ ಆಹಾರ ಪೂರೈಕೆಯನ್ನು ಖಚಿತಪಡಿಸುತ್ತದೆ ಮತ್ತು ಕೃಷಿಯನ್ನು ಫ್ಯೂಚರ್ ಟ್ರೇಡ್ ಮತ್ತು ಷೇರು ಮಾರುಕಟ್ಟೆಯೊಂದಿಗೆ ಜೋಡಿಸುತ್ತದೆ. ಇವೆಲ್ಲವನ್ನು ಡಬ್ಲ್ಯುಟಿಒ ಮತ್ತು ವಿಶ್ವಬ್ಯಾಂಕ್ ಹೇಳಿದ ಪ್ರಕಾರ ಮಾಡಲಾಗುತ್ತಿದೆ. ಈ ಕರಡು ರಾಷ್ಟ್ರೀಯ ನೀತಿ ಚೌಕಟ್ಟು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಣೆಗೆ ಯಾವುದೇ ಅವಕಾಶವನ್ನು ಹೊಂದಿಲ್ಲ, ಸರ್ಕಾರಿ ಸಂಗ್ರಹಣೆಗೆ ಯಾವುದೇ ಅವಕಾಶವನ್ನು ಹೊಂದಿಲ್ಲ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್)ಗೆ ಆಹಾರ ದಾಸ್ತಾನು ಬಗ್ಗೆ ಕುರಿತೂ ಇದರಲ್ಲಿ ಏನೂ ಉಲ್ಲೇಖವಿಲ್ಲ ಎಂಬ ಸಂಗತಿಯತ್ತ ಎಸ್‌ಕೆಎಂ ಹೇಳಿಕೆ ಗಮನ ಸೆಳೆದಿದೆ. ಈ ಕರಡು ನೀತಿ ಚೌಕಟ್ಟು ಮುಖ್ಯವಾಗಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವುದು, ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು ಮತ್ತು ಸಾಲ ಸೌಲಭ್ಯಗಳನ್ನು ಸುಧಾರಿಸುವುದು ಮುಂತಾದ ರೈತರ ಪ್ರಮುಖ ಬೇಡಿಕೆಗಳನ್ನು ನಿರ್ಲಕ್ಷಿಸಿದೆ, ಬದಲಾಗಿ, ಇದು ರಾಜ್ಯ ಬೆಂಬಲಿತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಎಪಿಎಂಸಿ) ಕಿತ್ತುಹಾಕುವುದರ ಮೇಲೆಯೇ ಗಮನ ಕೇಂದ್ರೀಕರಿಸುತ್ತದೆ, ಇದರಿಂದಾಗಿ ಸಣ್ಣ ಮತ್ತು ಮಧ್ಯಮ ರೈತರನ್ನು ಖಾಸಗಿ ವ್ಯಾಪಾರೀ ದುಷ್ಟಕೂಟಗಳ ಶೋಷಣೆಗೆ ಗುರಿ ಮಾಡುತ್ತದೆ ಎಂಬ ಕಾರಣಗಳಿಗಾಗಿ ರೈತರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸುಧಾರಣೆಗಳು ಎಂಬುದು ಕಾರ್ಪೊರೇಟ್-ಸ್ನೇಹೀ ಕ್ರಮಗಳು, ಇದರಿಂದ ಗಮನಾರ್ಹ ಪ್ರಯೋಜನವಾಗುವುದು ಈಗಾಗಲೇ ಮೂಲಸೌಕರ್ಯದಲ್ಲಿ ಭಾರೀ ಹೂಡಿಕೆ ಮಾಡಿರುವ ರಿಲಯನ್ಸ್ ಮತ್ತು ಅದಾನಿಯಂತಹ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಆಹಾರ ಭದ್ರತೆಗೆ ಅಪಾಯ ರೈತರಿಗೆ ನ್ಯಾಯಯುತ ಪ್ರತಿಫಲವನ್ನು ಖಚಿತಪಡಿಸಲು ಕರಡಿನಲ್ಲಿ ನಿಯಂತ್ರಕ ಸುರಕ್ಷತಾ ಕ್ರಮಗಳ ಕೊರತೆಯಿದೆ ಇದರಿಂದಾಗಿ ಕಾರ್ಪೊರೇಟ್ ಶೋಷಣೆ ಹೆಚ್ಚುತ್ತದೆ ಮತ್ತು ರೈತರ ಸಾಲ ಮತ್ತು ಆತ್ಮಹತ್ಯೆಗಳ ಸಮಸ್ಯೆ ಮತ್ತಷ್ಟು ಹದಗೆಡುತ್ತದೆ. ಕೃಷಿಕ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒಗಳ) ಮೂಲಕ ಕಾರ್ಪೊರೇಟೀಕರಣ ಮತ್ತು ಷೇರು ಮಾರುಕಟ್ಟೆಗಳಿಗೆ ಲಗತ್ತಿಸುವುದಕ್ಕೆ ಒತ್ತು ನೀಡುವುದರಿಂದ ಕಾರ್ಪೊರೇಟ್ ನಿಯಂತ್ರಣ ಮತ್ತಷ್ಟು ಬಲಗೊಳ್ಳುತ್ತದೆ, ಇದು ಆಹಾರ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂದೂ ರೈತ ಮುಖಂಡರು ಆತಂಕ ವ್ಯಕ್ತಪಡಿಸಿದರು. ಇದಲ್ಲದೆ, ಏಕರೂಪದ ಸುಧಾರಣೆಗಳನ್ನು ಜಾರಿಗೆ ತರಲು “ಸಬಲೀಕೃತ ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿ”ಯ ಹೆಸರಿನಲ್ಲಿ ಈ ಕರಡು ಅಧಿಕಾರದ ಕೇಂದ್ರೀಕರಣ ಮಾಡುತ್ತದೆ, ಇದು ರಾಜ್ಯಗಳ ಸ್ವಾಯತ್ತತೆಯನ್ನು ಮತ್ತು ಸಹಕಾರಿ ಒಕ್ಕೂಟ ತತ್ವವನ್ನು ದುರ್ಬಲಗೊಳಿಸುತ್ತದೆ ಎಂದೂ ಅವರು ಹೇಳಿದ್ದಾರೆ.…

ವಿಮಾನ ನಿಲ್ದಾಣದ ಒತ್ತುವರಿ ಕಾರ್ಯಚರಣೆಗೆ ಗ್ರಾಮಸ್ಥರ ವಿರೋಧ

ಪೊಲೀಸ್ ಬಂದೊಬಸ್ತ್ ಮೂಲಕ ತೆರವು ಕಾರ್ಯಚರಣೆ: ಗ್ರಾಮಸ್ಥರ ಪ್ರತಿಭಟನೆ ಹಾಸನ: ವಿಮಾನ ನಿಲ್ದಾಣ ಕಾಪೌಂಡ್ ಕಾಮಗಾರಿ ವಿರೋಧಿಸಿ ಸ್ಥಳೀಯ ಗ್ರಾಮಸ್ಥರು ಒಂದು…

ಮೈಕ್ರೋ ಫೈನಾನ್ಸ್ ವಿರುದ್ದ ಪ್ರತಿಭಟನೆ: ಆತ್ಮಹತ್ಯೆ ಮಾಡಿಕೊಂಡ ಮಹಿಳೆಯ ಸಾಲ ಮನ್ನ

ಮಂಡ್ಯ: ಮೈಕ್ರೋ ಫೈನಾನ್ಸ್ ಕಿರುಕುಳದಿಂದ ಆತ್ಮಹತ್ಯೆ ಮಾಡಿಕೊಂಡ ಮಳವಳ್ಳಿ ತಾಲೂಕು ಕೊನ್ನಾಪುರದ ಪ್ರೇಮಾ ರ ಸಾಲವನ್ನುಪ್ರಗತಿಪರ ಸಂಘಟನೆಗಳ ಹೋರಾಟಕ್ಕೆ ಮಣಿದ ಉಜ್ಜೀವನ್…

ಮೈಸೂರು| ಮೈಕ್ರೋ ಫೈನಾನ್ಸ್ ಕಿರುಕುಳ: ಕಚೇರಿಗೆ ನುಗ್ಗಿ ಪ್ರತಿಭಟಿಸಿದ ಆಟೋ ಚಾಲಕರು

ಮೈಸೂರು: ಮೈಕ್ರೋ ಫೈನಾನ್ಸ್ ಕಂಪನಿಗಳು ನೀಡುತ್ತಿರುವ ಕಿರುಕುಳಗಳು ಮಿತಿ ಮೀರಿದ್ದು, ಮಹೇಂದ್ರ ಫೈನಾನ್ಸ್ ಕಚೇರಿಗೆ ಆಟೋ ಚಾಲಕರು ನುಗ್ಗಿರುವ ಘಟನೆ ನಗರದಲ್ಲಿ…

ಕೆಪಿಎಸ್ಸಿ ಹಾಗೂ ಸಿಪಿಸಿ ಒಂದೇ ದಿನ ಪರೀಕ್ಷೆ: ಸಿಪಿಸಿ ಕಾನೂನು ಪದವಿ ಪರೀಕ್ಷೆಗಳನ್ನ ಮುಂದೂಡಲು ಎಸ್ಎಫ್ಐ ಮನವಿ

ರಾಣೇಬೆನ್ನೂರ: ಕರ್ನಾಟಕ ಲೋಕಸೇವಾ ಆಯೋಗ (ಕೆಪಿಎಸ್ಸಿ) ವಿವಿಧ ಇಲಾಖೆಗಳ ಗ್ರೂಪ್ ‘ಬಿ’ ವೃಂದದ ಹುದ್ದೆಗಳ ನೇಮಕಾತಿ ಪರೀಕ್ಷೆ ಹಾಗೂ ಕಾನೂನು ಪದವಿ…

ಕೊತ್ತಲ ಬಸವೇಶ್ವರ ಭಾರತೀಯ ಸಂಸ್ಕೃತಿ ಉತ್ಸವ’ಕ್ಕೆ ರೋವರ್ ಮತ್ತು ರೇಂಜರ್ಸ್‌ ವಿದ್ಯಾರ್ಥಿಗಳನ್ನು ನಿಯೋಜನೆ – ಎಸ್‌ಎಫ್‌ಐ ಆಕ್ರೋಶ

ಬೆಂಗಳೂರು : ಜನವರಿ 28 ರಿಂದ ಫೆಬ್ರವರಿ 07  ರವರೆಗೆ 11 ದಿನಗಳ ಕಾಲ ನಡೆಯುವ ‘ಕೊತ್ತಲ ಬಸವೇಶ್ವರ ಭಾರತೀಯ ಸಂಸ್ಕೃತಿ…

ವಾರಕ್ಕೆ 90 ಗಂಟೆಗಳ ಕೆಲಸ ಅವೈಜ್ಞಾನಿಕ ಹಾಗೂ ಅಮಾನವೀಯ – ಸೈಯ್ಯದ್ ಮುಜೀಬ್

ಮಂಗಳೂರು :  ಇತ್ತೀಚಿಗೆ ಎಲ್ ಅಂಡ್ ಟಿ ಯ ಅಧ್ಯಕ್ಷರು ವಾರದಲ್ಲಿ 90 ಗಂಟೆಯ ಕೆಲಸ ಮಾಡಬೇಕೆಂದು ಹೊರಡಿಸಿರುವ ಫಾರ್ಮಾನು ಅವೈಜ್ಞಾನಿಕ,…