“ನಿಮ್ಮ ಮನೆ ಎಲ್ಲಿದೆ ಎಂದು ನನಗೆ ಗೊತ್ತು…”: ಮತದಾರರಿಗೆ ಬುಲ್ಡೋಜ್‌ರ್‌ ಬೆದರಿಕೆ ಹಾಕಿದ ಅಸ್ಸಾಂ ಬಿಜೆಪಿ ಶಾಸಕ

ಅಸ್ಸಾಂ: ಭಾರತೀಯ ಜನತಾ ಪಕ್ಷದ (ಬಿಜೆಪಿ) ರತಾಬರಿ ಕ್ಷೇತ್ರೆದ ಶಾಸಕ ಬಿಜೋಯ್ ಮಾಲಾಕರ್, ಅಸ್ಸಾಂನ ಕರೀಂಗಂಜ್ ಜಿಲ್ಲೆಯ ಮತದಾರರಿಗೆ ಹಿಂದೂತ್ವ ಪಕ್ಷವನ್ನು ಬೆಂಬಲಿಸಬೇಕು. ಇಲ್ಲದಿದ್ದರೆ ನಿಮ್ಮನಿಮ್ಮ ಮನೆಗಳನ್ನು ಬುಲ್ಡೋಜರ್‌ಗಳಿಂದ ನೆಲಸಮ ಮಾಡುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ಆರೋಪಿಸಲಾಗಿದೆ. ಬುಲ್ಡೋಜ್‌

ವಿಡೀಯೋವೊಂದರಲ್ಲಿ, ಮಾಲಾಕರ್‌ “ನೀವು ಎಲ್ಲಿಂದ ಬಂದಿದ್ದೀರಿ? ನಿಮ್ಮ ಮನೆ ಎಲ್ಲಿದೆ ?ಎಂದು ನನಗೆ ತಿಳಿದಿದೆ. ಜೂನ್‌ಗೆ ಚುನಾವಣಾ ಫಲಿತಾಂಶ ಬರುತ್ತದೆ. ಇಲ್ಲ ಇಲ್ಲ ಜೂನ್ 4 ಅದರ ನಂತರ ಜೆಸಿಬಿ ನಿಮ್ಮ ಮನೆಗೆ ಬರದಂತೆ ನೋಡಿಕೊಳ್ಳಿ ಎಂದು ಬೆದರಿಕೆ ಹಾಕಿರುವುದು ಕಂಡುಬಂದಿದೆ. ಬುಲ್ಡೋಜ್‌

ಇದನ್ನು ಓದಿ : ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಿಸುವ ಹೋರಾಟ ಇಂದಿನಿಂದ ಪ್ರಾರಂಭವೆಂದ ಮಲ್ಲಿಕಾರ್ಜುನ ಖರ್ಗೆ

ಇನು ರತಾಬರಿ ಶಾಸಕರ ಭಾಷಣಕ್ಕಾಗಿ ಕಾಂಗ್ರೆಸ್ ಬದರ್‌ಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದೆಯಾದರೂ ಪೊಲೀಸರು ಇನ್ನೂ ಪ್ರಕರಣ ದಾಖಲಿಸಿಲ್ಲ.ಅಲ್ಲದೇ ಶಾಸಕರ ವಿರುದ್ಧ ಚುನಾವಣಾಧಿಕಾರಿಗಳಿಗೂ ದೂರು ನೀಡಲಾಗಿದೆ.

ಬಿಜೆಪಿ ಶಾಸಕರು ಮಂಗಳವಾರ, ಏಪ್ರಿಲ್ 16 ರಂದು ಸಾರ್ವಜನಿಕ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದಾಗ ತಮ್ಮ 46 ನಿಮಿಷಗಳ ಭಾಷಣವನ್ನು ಕಾಂಗ್ರೆಸ್ ತಿರುಚಿದೆ ಎಂದು ಮಾಲಾಕರ್ ಆರೋಪಿಸಿದ್ದಾರೆ.

ಇದನ್ನು ನೋಡಿ : ಜನತಂತ್ರ, ಸಂವಿಧಾನಕ್ಕೆ ಗಂಡಾಂತರ : ಸಂರಕ್ಷಣೆ ಈ ದೇಶದ ಜನರ ಹೊಣೆJanashakthi Media

Donate Janashakthi Media

Leave a Reply

Your email address will not be published. Required fields are marked *