ಕಷ್ಟ ಹೇಳೋಕೆ ಫೋನ್ ಮಾಡಿದ್ರೆ, ನಾಲಾಯಕ್ ಫೋನ್ ಕಟ್ ಮಾಡು ಶಾಸಕ ಸಿದ್ದು ಸವದಿ ಉಡಾಫೆ ಉತ್ತರ

ಬಾಗಲಕೋಟೆ:ಆಕ್ಸಿಜನ್ ಬೆಡ್ ಸಿಗದಿರುವುದರಿಂದ ಅಣ್ಣನನ್ನು ಕಳೆದುಕೊಂಡ ವ್ಯಕ್ತಿಯೊಬ್ಬ ಶಾಸಕರಿಗೆ ಕರೆ ಮಾಡಿದರೆ ಅವರಿಗೆ ಸಮಾಧಾನ ಹೇಳುವ ಬದಲು “ಏ ನಾಲಾಯಕ್ ಫೋನ್ ಇಡು,ದೊಡ್ಡ ಕಿಸಾಮತಿ ಮಾಡತಿ” ಫೋನ್ ಇಡು ಎಂದು ಉಡಾಫೆಯ ಉತ್ತರ ಕೊಟ್ಟ ಶಾಸಕ ಸಿದ್ದು ಸವದಿ ಆಡಿಯೊ ಈಗ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.

ಅಶೋಕ ದೊಂಡಿಬಾಗ ಗಾಯಕವಾಡ ಎಂಬುವವರ ಸಹೋದರ ಕೋವಿಡ್ ಗೆ ಬಲಿಯಾಗಿದ್ದಾರೆ. ನಿಗದಿತ ಸಮಯಕ್ಕೆ ಸರಿಯಾಗಿ ಆಕ್ಸಿಜನ್ ಸಿಗದೆ ಅಣ್ಣನನ್ನು ಕಳೆದುಕೊಂಡ ದುಃಖದಲ್ಲಿರುವ ಕುಟುಂಬಕ್ಕೆ ಸಾಂತ್ವನ ಹೇಳಬೇಕಿದ್ದ ಶಾಸಕ ನಾಲಾಯಕ್ ಎಂದು ಬೈಯ್ಯುವ ಮೂಲಕ ಅನಾಗರಿಕತೆಯನ್ನು ಪ್ರದರ್ಶಿಸಿದ್ದಾರೆ.

ಇದನ್ನೂ ಓದಿ : ಮಡಿಕೇರಿ ಕೋವಿಡ್ ಆಸ್ಪತ್ರೆಯಲ್ಲಿ ಸೋಂಕಿತರಿಗೆ ಹಳಸಿದ ಅನ್ನ ವಿತರಣೆ

ಅಣ್ಣನನ್ನು ಕಳೆದುಕೊಂಡ ಸಹೋದರ ತೇರದಾಳ ಶಾಸಕ ಸಿದ್ದು ಸವದಿ ಅವರಿಗೆ ಕರೆ ಮಾಡಿದ ಅಶೋಕ ಸರ್ ನೀವು ಶಾಸಕರ ಇದ್ದೀರಿ ಆಕ್ಸಿಜನ್ ವ್ಯವಸ್ಥೆ ಮಾಡಬೇಕು ಸರ್ಕಾರಿ ದವಾಖಾನೆ ಮುಂದೆ ಕೂರಬೇಕು ಮನೆಯಲ್ಲಿ ಕೂರಲಿಕ್ಕೆ ನಿಮ್ಮನ್ನು ಆರಿಸಿ ಕಳಿಸಿಲ್ಲ ಎನ್ನುತ್ತಿದ್ದಂತೆ ಗರಂ ಆದ ಶಾಸಕರು “ಏ ನಾಲಾಯಕ್ ಫೋನ್ ಕಟ್ ಮಾಡು” ಎಂದು ಉತ್ತರಿಸಿರುವುದಕ್ಕೆ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಶಾಸಕರಾದವರ ಕ್ಷೇತ್ರದ ಜನರ ಕಷ್ಟ ನಷ್ಟಗಳಿಗೆ ಬರಬೇಕು. ಕೋವಿಡ್ ರೋಗವನ್ನು ಜನ ಬೇಕೆಂದೆ ಹಚ್ಚಿಸಿಕೊಳ್ಳುವುದಿಲ್ಲ. ಇದೊಂದು ಸಾಂಕ್ತಾಮಿಕ ರೋಗ. ಇದನ್ನು ಅರಿಯದೆ ಹಾಗೂ ತಮ್ಮ ಕರ್ತವ್ಯವನ್ನು ಮರೆತು ಶಾಸಕರು ಈ ರೀತಿ ವರ್ತಿಸಿದ್ದು ಸರಿಯಲ್ಲ ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿ ಬರುತ್ತಿವೆ.

ಇದನ್ನು ಓದಿ: ಭಾರತೀಯರು ಕೊರೊನಾದಿಂದಷ್ಟೆ ಸಾಯುತ್ತಿಲ್ಲ – WHO ವಿಜ್ಞಾನಿ ಸೌಮ್ಯ ಸ್ವಾಮಿನಾಥನ್

Donate Janashakthi Media

Leave a Reply

Your email address will not be published. Required fields are marked *