ಬಿಜೆಪಿ ಜೈ ಶ್ರೀರಾಮ್‌ ಘೋಷಣೆ ಮೂಲಕ ಕೋಪ-ಭಯ ಕೆರಳಿಸುತ್ತಿದೆ: ಅಶೋಕ್‌ ಗೆಹ್ಲೋಟ್‌

ಜೈಪುರ: ಬಿಜೆಪಿ ದೇಶದಲ್ಲಿ ಒಡೆದಾಳುವ ನೀತಿಗಳನ್ನು ಅನುಸರಿಸುತ್ತಿದೆ. ಜನರು ಅದೀಗ ಅರ್ಥ ಮಾಡಿಕೊಂಡಿದ್ದು, ಬಿಜೆಪಿಯ ನಿಜಬಣ್ಣ ಬಯಲಾಗುತ್ತಿವೆ. ಜೈ ಶ್ರೀ ರಾಮ್’ ಘೋಷಣೆ ಮಾಡುವ ಮೂಲಕ ಕೋಪ ಮತ್ತು ಭಯವನ್ನು ಕೆರಳಿಸಲು ಬಿಜೆಪಿ ಪ್ರಯತ್ನಿಸುತ್ತಿದೆ. ರಾಹುಲ್ ಗಾಂಧಿ ಮಹಾತ್ಮ ಗಾಂಧಿಯವರ ಆದರ್ಶಗಳನ್ನು ಅನುಸರಿಸುತ್ತಾರೆ, ಅವರು ಪ್ರೀತಿಯ ಮೂಲಕ ಭಯವನ್ನು ಜಯಿಸುತ್ತಾರೆ ಎಂದು ರಾಜಸ್ಥಾನ ಮುಖ್ಯಮಂತ್ರಿ ಅಶೋಕ್ ಗೆಹ್ಲೋಟ್ ಹೇಳಿದರು.

‘ಭಾರತಾ ಐಕ್ಯತಾ ಯಾತ್ರೆಯಲ್ಲಿ ‘ಜೈ ಸೀತಾರಾಮ್’ ಘೋಷಣೆಗೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಅಶೋಕ್ ಗೆಹ್ಲೋಟ್ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಬಿಜೆಪಿ ಮತ್ತು ಆರ್‌ಎಸ್‌ಎಸ್ ಅನುಸರಿಸುತ್ತಿರುವ ನೀತಿಯನ್ನು ವಿರೋಧಿಸಿದ ಅಶೋಕ್ ಗೆಹ್ಲೋಟ್, “ಅವರು ಸೀತೆಯನ್ನು ರಾಮನಿಂದ ಬೇರ್ಪಡಿಸಿದ್ದಾರೆ. ಅದಕ್ಕಾಗಿಯೇ ನಾವು ‘ಜೈ ಸೀತಾರಾಮ್ ಹೇಳಿ’ ಎಂದು ಹೇಳುತ್ತೇವೆ. ನಾವು ‘ಜೈ ಸೀತಾರಾಮ್’ ಎಂದು ಹೇಳಿದಾಗ ನಮಗೆ ಜನರಿಂದ ಅಗಾಧ ಪ್ರತಿಕ್ರಿಯೆಗಳು ಬರುತ್ತವೆ” ಎಂದು ಹೇಳಿದರು.

ಇಂದು ಜೈಪುರದಲ್ಲಿ 167 ಹೊಸದಾದ  ಆಂಬ್ಯುಲೆನ್ಸ್ ಸೇವೆ-108 ಅನ್ನು ಪ್ರಾರಂಭಿಸಿದರು. ಕಾರ್ಯಕ್ರಮದಲ್ಲಿ ವೈದ್ಯಕೀಯ ಮತ್ತು ಆರೋಗ್ಯ ಸಚಿವ ಪರ್ಸಾದಿ ಲಾಲ್ ಮೀನಾ, ನೀರು ಸರಬರಾಜು ಸಚಿವ ಡಾ ಮಹೇಶ್ ಜೋಶಿ ಮತ್ತು ತಾಂತ್ರಿಕ ಶಿಕ್ಷಣ ಸಚಿವ ಡಾ ಸುಭಾಷ್ ಗರ್ಗ್ ಸೇರಿದಂತೆ ಅನೇಕ ಅಧಿಕಾರಿಗಳು ಮತ್ತು ಸಾರ್ವಜನಿಕ ಪ್ರತಿನಿಧಿಗಳು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *