ಪ್ರೀತಿ ಹೆಸರಲ್ಲಿ ವಂಚನೆ – ಶಾಸಕನ ವಿರುದ್ಧ ದೂರು ದಾಖಲು

ಜಗತ್‌ಸಿಂಗ್‌ಪುರ :  ಜಗತ್‌ಸಿಂಗ್‌ಪುರ ಜಿಲ್ಲೆಯ ತೀರ್ಥೋಲ್‌ ಶಾಸಕ ಹಾಗೂ ಬಿಜೆಪಿ ಮುಖಂಡ ವಿಜಯಶಂಕರ್‌ ದಾಸ್‌ ಅವರು ಪ್ರೀತಿಯ ಹೆಸರಿನಲ್ಲಿ ವಂಚಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ. ಶಾಸಕರ ಗೆಳತಿ ಎಂದು ಹೇಳಿಕೊಂಡಿದ್ದ ಸೋಮಲಿಕಾ ದಾಸ್ (29) ಜಗತ್‌ಸಿಂಗ್‌ಪುರ ಪೊಲೀಸ್ ಠಾಣೆಯಲ್ಲಿ ಲಿಖಿತ ದೂರು ನೀಡಿದ್ದಾರೆ.

ಮಹಿಳೆಯ ದೂರಿನ ಮೇರೆಗೆ ಶಾಸಕ ದಾಸ್ ವಿರುದ್ಧ ವಿವಿಧ ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಎಂದು ಜಗತ್‌ಸಿಂಗ್‌ಪುರ ಸದರ್ ಪೊಲೀಸ್ ಠಾಣೆ ಪ್ರಭಾರಿ ಇನ್ಸ್‌ಪೆಕ್ಟರ್ ಪ್ರವಾಸ್ ಸಾಹು ತಿಳಿಸಿದ್ದಾರೆ.

ನಮ್ಮ ವಾಟ್ಸಪ್ ಗ್ರುಪ್ ಗೆ ಸೇರಲು ಲಿಂಕ್ ಬಳಸಿ

ಮೂಲಗಳ ಪ್ರಕಾರ, ಮಹಿಳೆ ಮತ್ತು ಶಾಸಕ ದಾಸ್ ವಿವಾಹ ನೋಂದಣಿ ಕಚೇರಿಯಲ್ಲಿ ಮೇ 17 ರಂದು ಮದುವೆಗೆ ಅರ್ಜಿ ಸಲ್ಲಿಸಿದ್ದರು. ನಿಗದಿತ ದಿನಾಂಕದಂದು ಮಹಿಳೆ ತನ್ನ ಕುಟುಂಬದೊಂದಿಗೆ ಮದುವೆ ನೋಂದಣಿ ಕಚೇರಿಗೆ ಬಂದಳು. ಆದರೆ ಶಾಸಕ ವಿಜಯಶಂಕರ್ ದಾಸ್ ಅಲ್ಲಿಗೆ ಬಂದಿರಲಿಲ್ಲ. ಕಳೆದ ಮೂರು ವರ್ಷಗಳಿಂದ ನಾವು  ಪ್ರೀತಿಸುತ್ತಿದ್ದೇವೆ ಎಂದು ಮಹಿಳೆ ಹೇಳಿಕೊಂಡಿದ್ದಾರೆ. ಇದೇ ದಿನಾಂಕದಂದು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಆದರೆ ಅವರು ಬರಲಿಲ್ಲ. ಅವರ ಸಹೋದರ ಮತ್ತು ಅವರ ಕುಟುಂಬದ ಇತರ ಸದಸ್ಯರಿಂದ ನನಗೆ ಈಗ ಬೆದರಿಕೆಗಳು ಬರುತ್ತಿವೆ. ವಿಜಯ್‌ ಶಂಕರ್‌ಗೆ ಫೋನ್‌ ಮಾಡಿ ವಿಚಾರಿಸೋಣ ಎಂದರೆ ಅವರು ನನ್ನ ಫೋನ್ ಅನ್ನು ಸಹ ತೆಗೆದುಕೊಳ್ಳುತ್ತಿಲ್ಲ ಎಂದು ಎಫ್‌ಐಆರ್‌ ನಲ್ಲಿ ದೂರಿದ್ದಾರೆ.

ಶಾಸಕ ದಾಸ್ ಮತ್ತು ಮಹಿಳೆಯ ಕೆಲವು ಫೋಟೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಇದೀಗ ಈ ಪ್ರಕರಣ ರಾಜಕೀಯ ತಿರುವು ಪಡೆದುಕೊಡಿದೆ.  ವಿಪಕ್ಷಗಳು ಶಾಸಕರನ್ನು ಬಂಧಿಸಬೇಕು ಹಾಗೂ ರಾಜೀನಾಮೆ ನೀಡಬೇಕು ಎಂದು ಒತ್ತಾಯಿಸುತ್ತಿವೆ. ನಮ್ಮ ಮಗಳಿಗೆ ನ್ಯಾಯ ಸಿಗಬೇಕು, ನ್ಯಾಯ ಕೊಡಿಸುವುದಾಗಿ ಪೊಲೀಸರು ಹೇಳುತ್ತಿದ್ದಾರೆ. ನ್ಯಾಯ ಸಿಗದೆ ಹೋದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.

ಇದನ್ನೋ ಓದಿಮದುವೆಯಾಗುವುದಾಗಿ ನಂಬಿಸಿ ಅಧಿಕಾರಿಗೆ ವಂಚಿಸಿದ್ರಾ ಬಿಜೆಪಿ ಶಾಸಕ?

Donate Janashakthi Media

Leave a Reply

Your email address will not be published. Required fields are marked *