ಸುಂದರ ಮಲೆಕುಡಿಯ ಕೈ ಕಡಿದ ಪ್ರಕರಣ; ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸಿದ ನ್ಯಾಯಾಲಯ

ಬೆಳ್ತಂಗಡಿ: ಸುಮಾರು ಹತ್ತು ವರ್ಷಗಳ ಹಿಂದೆ ಧರ್ಮಸ್ಥಳ ಪೊಲೀಸ್ ಠಾಣಾ ವ್ಯಾಪ್ತಿಯ ನೆರಿಯ ಗ್ರಾಮದ ಕಾಟಾಜೆ ಎಂಬಲ್ಲಿ ನಡೆದ ಕೊಲೆಯತ್ನ ಪ್ರಕರಣಕ್ಕೆ…

ಊರೊಂದು ಬಸ್ ನಿಲ್ದಾಣ ಮೂರು

  ಗುರುರಾಜ ದೇಸಾಯಿ ಹುಬ್ಬಳ್ಳಿ ಬಂತು ಇಳೀರಿ.. ಎಂದು ಕಂಡಕ್ಟರ್ ಹೇಳಿದಾಕ್ಷಣ ಸರ್… ಈ ಬಸ್ ಗೋಕುಲ್ ಬಸ್ ಸ್ಟ್ಯಾಂಡ್ ಗೆ…

ಹಾಲಕ್ಕಿ ಹಾಡುಗಳ ಕೋಗಿಲೆ, ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ ನಿಧನ

ಅಂಕೋಲಾ :ಹಾಲಕ್ಕಿ ಹಾಡುಗಳ ಕೋಗಿಲೆ ಎಂದೆ ಪ್ರಸಿದ್ಧಿ ಪಡೆದಿದ್ದ ಹಾಗೂ ಪದ್ಮಶ್ರೀ ಪುರಸ್ಕೃತ ಸುಕ್ರಿ ಬೊಮ್ಮಗೌಡ ಅವರು ಇಂದು ನಿಧಾನರಾಗಿದ್ದಾರೆ. ಉತ್ತರ…

ಕಟ್ಟಡ ಕಾಮಗಾರಿ ವೇಳೆ ಗೋಡೆ ಕುಸಿತ – ಓರ್ವ ಕಾರ್ಮಿಕನಿಗೆ ಗಂಭೀರ ಗಾಯ

ಕಟ್ಟಡ ನಿರ್ಮಾಣದ ವೇಳೆ ಗೋಡೆ ಅಗೆಯುತ್ತಿರುವಾಗ ಗೋಡೆ ಕುಸಿದ ಕಟ್ಟಡ ಕಾರ್ಮಿಕನೋರ್ವ ಗಾಯಗೊಂಡಿರುವ ಘಟನೆ ನಡೆದಿದೆ. ಕಟ್ಟಡ ನೆಟ್ಕಲ್ಲಪ್ಪ ವೃತ್ತದ ಮಲ್ಲಿಕಾರ್ಜುನ…

ಮಣಿಪುರ: ಮುಖ್ಯಮಂತ್ರಿ ಸ್ಥಾನಕ್ಕೆ ಎನ್ ಬಿರೇನ್ ಸಿಂಗ್ ದಿಢೀರ್ ರಾಜೀನಾಮೆ!

ಇಪಾಲ್: ಭಾರಿ ಹಿಂಸಾಚಾರದ ಮೂಲಕ ವಿಶ್ವದಲ್ಲಿ ಸುದ್ದಿಯಾಗಿದ್ದ ಮಣಿಪುರ ಇದೀಗ ರಾಜಕೀಯ ಕ್ಷಿಪ್ರ ಕ್ರಾಂತಿಯಿಂದ ಮತ್ತೆ ಸುದ್ದಿಯಾಗಿದೆ. ಮಣಿಪುರ ಮುಖ್ಯಮಂತ್ರಿ ಬಿರೆನ್…

‘ಉಪ್ಪಿಟ್ಟು ಬೇಡ.. ಬಿರಿಯಾನಿ, ಚಿಕನ್ ಫ್ರೈ ಬೇಕು’: ಅಂಗನವಾಡಿ ಬಾಲಕನ ಬೇಡಿಕೆಗೆ ಸ್ಪಂದಿಸಿದ ಎಡರಂಗ ಸರ್ಕಾರ

ತಿರುವನಂತಪುರಂ : ಅಂಗನವಾಡಿಯಲ್ಲಿ ಉಪ್ಪಿಟ್ಟಿನ ಬದಲು ಬಿರಿಯಾನಿ ಮತ್ತು ಚಿಕನ್ ಫ್ರೈ ನೀಡುವಂತೆ ಕೇರಳದಲ್ಲಿ ಮಗುವೊಂದು ಮನವಿ ಮಾಡಿದ್ದ ವಿಡಿಯೋ ಸಾಮಾಜಿಕ…

ಬೆಂಗಳೂರು ವಿವಿ ಹಾಸ್ಟೆಲ್‌ನಲ್ಲಿ ಸ್ನಾತಕೋತ್ತರ ವಿದ್ಯಾರ್ಥಿನಿ ಆತ್ಮಹತ್ಯೆ

ಬೆಂಗಳೂರು :ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ದ್ವಿತೀಯ ವರ್ಷದ ಸ್ನಾತಕೋತ್ತರ ವಿದ್ಯಾಭ್ಯಾಸ ಮಾಡುತ್ತಿದ್ದ ವಿದ್ಯಾರ್ಥಿನಿ ಅನುಮಾನಾಸ್ಪದವಾಗಿ ಸಾವು ಕಂಡಿದ್ದಾರೆ. ರಾಮಭಾಯಿ ಹಾಸ್ಟೆಲ್‌ನಲ್ಲಿ ಘಟನೆ ನಡೆದಿದ್ದು…

ಅನುದಾನದ ನೆಪ: ವಿಕಲಚೇತನರನ್ನು ಹೊರಗಟ್ಟಲು ಮುಂದಾದ ಸಂಸ್ಥೆ. ಶಾಶ್ವತ ಪರಿಹಾರಕ್ಕಾಗಿ ಎಸ್ಎಫ್ಐ ಆಗ್ರಹ

ಹಾವೇರಿ: ನಗರದ ಬಸವೇಶ್ವರ ನಗರದಲ್ಲಿರುವ ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯವರ ಅನುದಾನದ ಶ್ರೀ ಕಲ್ಮೇಶ್ವರ ಗ್ರಾಮೀಣ ವಿದ್ಯಾಸಂಸ್ಥೆಯ ಶ್ರೀ…

“ಏಕೀಕೃತ ಪಿಂಚಣಿ ಯೋಜನೆ”  ಇನ್ನೊಂದು ಮೋಸ ಎಂದು ಸಾಬೀತು- ಸಿಐಟಿಯು ಖಂಡನೆ

ಭಾರತ ಸರ್ಕಾರದ ಹಣಕಾಸು ಸಚಿವಾಲಯದ ಹಣಕಾಸು ಸೇವೆಗಳ ಇಲಾಖೆ ಜನವರಿ 24ರಂದು ರಂದು ಮೊಟಕುಗೊಳಿಸಿದ ‘ಏಕೀಕೃತ ಪಿಂಚಣಿ ಯೋಜನೆ ‘(ಯುಪಿಎಸ್) ಎಂಬುದರ…

ಯುಜಿಸಿ ಕರಡು ನಿಯಮ ತಿದ್ದುಪಡಿ ತಿರಸ್ಕರಿಸಿ : ಜಾಗೃತ ನಾಗರಿಕರು ಕರ್ನಾಟಕದಿಂದ ನಿರ್ಣಯ

ಬೆಂಗಳೂರು : ಯುಜಿಸಿ ಕರಡು ನಿಯಮಗಳನ್ನು ಸಾರಾಸಗಟಾಗಿ ತಿರಸ್ಕರಿಸುವ ಬಗ್ಗೆ ಜಾಗೃತ ನಾಗರಿಕರು ಕರ್ನಾಟಕ ವೇದಿಕೆ ನಿರ್ಣಯವನ್ನು ಅಂಗೀಕರಿಸಿತು. ಇಂದು ಗಾಂಧಿ…

ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ಸಂತ್ರಸ್ತ ರೈತರಿಂದ ಪ್ರತಿಭಟನೆ

ರೈತರಿಗೆ ಸ್ಪಂದಿಸುವಂತೆ ಜಿಲ್ಲಾಡಳಿತಕ್ಕೆ ಮನವಿ ಹಾಸನ : ವಿಮಾನ ನಿಲ್ದಾಣಕ್ಕೆ ಭೂಮಿ ಕಳೆದುಕೊಂಡ ಸುತ್ತಮುತ್ತಲಿನ ಗ್ರಾಮಗಳಿಗೆ ಸಂಪರ್ಕ ರಸ್ತೆ ಮತ್ತು ಭೂಮಿ…

ಹೈಕೋರ್ಟ್ ಮಹತ್ವದ ತೀರ್ಪು| ಕಟ್ಟಡ ಕಾರ್ಮಿಕ ಮಕ್ಕಳಿಂದ ವಿಜಯೋತ್ಸವ

ಬೆಂಗಳೂರು : ಕರ್ನಾಟಕ ಕಟ್ಟಡ ಮತ್ತು ಇತರೆ ನಿರ್ಮಾಣ‌ ಕಾರ್ಮಿಕ ಕಲ್ಯಾಣ‌ ಮಂಡಳಿಯು  ಅರ್ಜಿ ಸಲ್ಲಿಸಿದ ಎಲ್ಲ ಮಕ್ಕಳಿಗೂ 2021 ಅಧಿಸೂಚನೆ…

ಕೇಂದ್ರ ಬಜೆಟ್ ರಾಜ್ಯಕ್ಕೆ ನಿರಾಶೆ ಮೂಡಿಸಿದೆ, ಕರ್ನಾಟಕಕ್ಕೆ ಖಾಲಿ ಚೊಂಬು: ಸಿಎಂ ಸಿದ್ದರಾಮಯ್ಯ ಕಿಡಿ

ಮೈಸೂರು : ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಮಂಡಿಸಿದ 2025-26ನೇ ಸಾಲಿನ ಬಜೆಟ್ ರಾಜ್ಯ ಮತ್ತು ದೇಶದ…

ಕೇಂದ್ರ ಬಜೆಟ್ 2025-26: ಭಾರತೀಯ ಜನತೆಗೆ ಮಾಡಿರುವ ಕ್ರೂರ ವಿಶ್ವಾಸದ್ರೋಹ

ವಿಫಲ ಆರ್ಥಿಕ ನೀತಿಯ ಇತ್ತೀಚಿನ ಕಂತು -ಸಿಪಿಐ(ಎಂ) ಪೊಲಿಟ್‍ಬ್ಯುರೊ ಕಟು ಟೀಕೆ ನವದೆಹಲಿ : 2025 – 26ರ ಕೇಂದ್ರ ಬಜೆಟ್ ಭಾರತದ ಜನರ ಅವಶ್ಯಕತೆಗಳಿಗೆ ಮಾಡಿದ ಕ್ರೂರ ವಿಶ್ವಾಸ ದ್ರೋಹವಾಗಿದೆ ಎಂದು ಸಿಪಿಐ(ಎಂ)…

ಕರಡು ಕೃಷಿ ಮಾರುಕಟ್ಟೆ ನೀತಿಯನ್ನು ವಿರೋಧಿಸಿ ರಾಜ್ಯ ರಾಜಧಾನಿಗಳಲ್ಲಿ ಪ್ರತಿಭಟನೆ:ಎಸ್‌ಕೆಎಂ

ಫೆ. 8- 9 ರಂದು ಎಂಪಿಗಳ ಮನೆಗಳ ಮುಂದೆ ಪ್ರತಿಭಟನೆ; ಮಾರ್ಚ್ 5ರಿಂದ ಸತತ ಪ್ರತಿಭಟನೆ ದಿಲ್ಲಿಯ ಹರ್ಕಿಶನ್ ಸಿಂಗ್ ಸುರ್ಜೀತ್ ಭವನದಲ್ಲಿ ಜನವರಿ 24ರಂದು ನಡೆದ ಸಭೆಯ ನಂತರ, ಸಂಯುಕ್ತ ಕಿಸಾನ್ ಮೋರ್ಚಾ (ಎಸ್‌ಕೆಎಂ) ಕೃಷಿ ಮಾರುಕಟ್ಟೆ, ಕನಿಷ್ಠ ಬೆಂಬಲ ಬೆಲೆ ಕುರಿತ ಕರಡು ರಾಷ್ಟ್ರೀಯ ನೀತಿ ಚೌಕಟ್ಟನ್ನು (ಎನ್‌ಪಿಎಫ್‌ಎಎಂ) ರದ್ದುಗೊಳಿಸಬೇಕು ಮತ್ತು ಒಂದು ಬಾರಿಯ ಸಾಲ ಪರಿಹಾರ ನೀಡಬೇಕು ಎಂದು ಆಗ್ರಹಿಸಿ ಜಿಲ್ಲಾಧಿಕಾರಿಗಳ ಕಚೇರಿಗಳ ಮುಂದೆ ಸತತ ಚಳುವಳಿಗಳನ್ನು ನಡೆಸಲು ನಿರ್ಧರಿಸಿದೆ. ಸಭೆಯಲ್ಲಿ 12 ರಾಜ್ಯಗಳ 73 ರೈತ ಸಂಘಟನೆಗಳ 165 ಪ್ರತಿನಿಧಿಗಳು ಭಾಗವಹಿಸಿದ್ದರು. ಹನ್ನನ್ ಮೊಲ್ಲಾ, ಜೋಗಿಂದರ್ ಸಿಂಗ್ ಉಗ್ರಹಾನ್, ರಾಕೇಶ್ ಟಿಕಾಯತ್, ರೇವುಲಾ ವೆಂಕಯ್ಯ, ಸತ್ಯವಾನ್ ಮತ್ತು ಡಾ. ಸುನೀಲಮ್‌ರವರಿದ್ದ ಅಧ್ಯಕ್ಷ ಮಂಡಳಿಯು ಸಭೆಯನ್ನು ನಿರ್ವಹಿಸಿತು. ಸಭೆಯ ನಂತರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ರೈತ ಮುಖಂಡರು, ಹೊಸ ಚೌಕಟ್ಟು ಕೃಷಿ ಮಾರುಕಟ್ಟೆಗಳ ಮೇಲೆ ಕಾನೂನುಗಳನ್ನು ಜಾರಿಗೆ ತರುವ ರಾಜ್ಯ ಶಾಸನಸಭೆಗಳ ಅಧಿಕಾರವನ್ನು ಮೀರಿ ಹೋಗುತ್ತದೆ ಎಂಬ ತಮ್ಮ ಟೀಕೆಯನ್ನು ಪುನರುಚ್ಛರಿಸಿದರು. ಹೊಸ ಕರಡು ಚೌಕಟ್ಟು ರದ್ದಾದ ಮೂರು ಕೃಷಿ ಕಾನೂನುಗಳನ್ನು ಮಾರುವೇಷದಲ್ಲಿ ಮರಳಿ ತರುತ್ತಿದೆ ಎಂದು ರೈತ ಸಂಘಟನೆಗಳು ಹೇಳಿವೆ. ಅಖಿಲ ಭಾರತ ಕಿಸಾನ್ ಸಭಾ (ಎಐಕೆಎಸ್) ಉಪಾಧ್ಯಕ್ಷ ಹನ್ನನ್ ಮೊಲ್ಲಾ, ರೈತ ಸಂಘಗಳು ಫೆಬ್ರವರಿ 8 ಮತ್ತು 9 ರಂದು ಸಂಸತ್ ಸದಸ್ಯರ ಮನೆಗಳ ಮುಂದೆ ಪ್ರತಿಭಟನೆಗಳನ್ನು ನಡೆಸಿ ಹೊಸ ಚೌಕಟ್ಟಿನ ಅನುಷ್ಠಾನವನ್ನು ಸ್ಥಗಿತಗೊಳಿಸುವಂತೆ ಸರ್ಕಾರವನ್ನು ಕೇಳುವ ಜ್ಞಾಪಕ ಪತ್ರವನ್ನು ಸಲ್ಲಿಸಲಿವೆ ಎಂದು ಹೇಳಿದರು. “ಸರ್ಕಾರ ನಮ್ಮ ಬೇಡಿಕೆಗಳಿಗೆ ಕಿವಿಗೊಡದಿದ್ದರೆ, ಮಾರ್ಚ್ 5 ರಿಂದ ರಾಜ್ಯ ರಾಜಧಾನಿಗಳು, ಜಿಲ್ಲೆಗಳು ಮತ್ತು ಉಪವಿಭಾಗಗಳ ಮಟ್ಟದಲ್ಲಿ ಶಾಶ್ವತ ಆಂದೋಲನಗಳನ್ನು ಸ್ಥಾಪಿಸುತ್ತೇವೆ ಮತ್ತು ರಾಜ್ಯ ವಿಧಾನಸಭೆಗಳು ಚೌಕಟ್ಟಿನ ವಿರುದ್ಧ ನಿರ್ಣಯಗಳನ್ನು ಅಂಗೀಕರಿಸಬೇಕೆAದು ಮತ್ತು ಅದನ್ನು ಜಾರಿಗೆ ತರದಂತೆ ಕೇಂದ್ರವನ್ನು ಕೇಳಬೇಕೆಂದು ಒತ್ತಾಯಿಸುತ್ತೇವೆ” ಎಂದು ಅವರು ಹೇಳಿದರು. ಎಂಎಸ್‌ಪಿ, ಘೋಷಣೆ, ಸರ್ಕಾರಿ ಖರೀದಿ, ಆಹಾರ ದಾಸ್ತಾನಿನ ಪ್ರಸ್ತಾಪವೇ ಇಲ್ಲ ಈ ನೀತಿಯನ್ನು ಸರ್ಕಾರಿ ಮಂಡಿಗಳ ಮೇಲಿನ ಒಂದು ದಾಳಿ ಎಂದು ರೈತ ಮುಖಂಡರು ೊಕ್ಕೊರಲಿನಿಂದ ಖಂಡಿಸಿರುವುದಾಗಿ ಎಸ್‌ಕೆಎಂ ಹೇಳಿಕೆ ತಿಳಿಸಿದೆ. ಕೃಷಿ ಚಿಲ್ಲರೆ ವ್ಯಾಪಾರ ಮತ್ತು ಕೃಷಿ ಸಂಸ್ಕರಣಾ ಕಾರ್ಪೊರೇಟ್ ಉದ್ಯಮದಲ್ಲಿ ಬಹುರಾಷ್ಟಿçÃಯ ಕಂಪನಿಗಳು ಮತ್ತು ಕಾರ್ಪೊರೇಟ್ ಬೆಳವಣಿಗೆಗೆ ಸಹಾಯ ಮಾಡಲು ಅವುಗಳನ್ನು ಖಾಸಗೀಕರಣಗೊಳಿಸಲು ಈ ದಾಳಿ ನಡೆಸಲಾಗುತ್ತಿದೆ. ಕೃಷಿಕ ಉತ್ಪನ್ನ ಸಂಘಟನೆ(ಎಫ್‌ಪಿಒ)ಗಳು ಮತ್ತು ಇಲೆಕ್ಟಾçನಿಕ್ ರಾಷ್ಟ್ರೀಯ ಕೃಷಿ ಮಾರುಕಟ್ಟೆ(ಇ-ನಾಮ್)ಗಳ ಮೂಲಕ ಸ್ಥಳೀಯ ಗ್ರಾಮೀಣ ಮಂಡಿಗಳಿಗೆ ಲಗ್ಗೆ ಹಾಕುತ್ತದೆ ಮತ್ತು ಎಫ್‌ಪಿಒಗಳು, ಸಹಕಾರಿಗಳು ಮತ್ತು ಸ್ವಸಹಾಯ ಗುಂಪು(ಎಸ್‌ಹೆಚ್‌ಜಿ)ಗಳ ಮೂಲಕ ಕಾಂಟ್ರಾಕ್ಟ್ ಕೃಷಿಯನ್ನು ಜಾರಿಗೊಳಿಸುತ್ತದೆ, ಈ ಮೂಲಕ ಆಹಾರ ಸಂಸ್ಕರಣಾ ಮೌಲ್ಯವರ್ಧಿತ ಸರಪಳಿಗಳಿಗೆ ಅಗ್ಗದ ಆಹಾರ ಪೂರೈಕೆಯನ್ನು ಖಚಿತಪಡಿಸುತ್ತದೆ ಮತ್ತು ಕೃಷಿಯನ್ನು ಫ್ಯೂಚರ್ ಟ್ರೇಡ್ ಮತ್ತು ಷೇರು ಮಾರುಕಟ್ಟೆಯೊಂದಿಗೆ ಜೋಡಿಸುತ್ತದೆ. ಇವೆಲ್ಲವನ್ನು ಡಬ್ಲ್ಯುಟಿಒ ಮತ್ತು ವಿಶ್ವಬ್ಯಾಂಕ್ ಹೇಳಿದ ಪ್ರಕಾರ ಮಾಡಲಾಗುತ್ತಿದೆ. ಈ ಕರಡು ರಾಷ್ಟ್ರೀಯ ನೀತಿ ಚೌಕಟ್ಟು ಕನಿಷ್ಟ ಬೆಂಬಲ ಬೆಲೆ (ಎಂಎಸ್‌ಪಿ) ಘೋಷಣೆಗೆ ಯಾವುದೇ ಅವಕಾಶವನ್ನು ಹೊಂದಿಲ್ಲ, ಸರ್ಕಾರಿ ಸಂಗ್ರಹಣೆಗೆ ಯಾವುದೇ ಅವಕಾಶವನ್ನು ಹೊಂದಿಲ್ಲ ಮತ್ತು ಸಾರ್ವಜನಿಕ ವಿತರಣಾ ವ್ಯವಸ್ಥೆ(ಪಿಡಿಎಸ್)ಗೆ ಆಹಾರ ದಾಸ್ತಾನು ಬಗ್ಗೆ ಕುರಿತೂ ಇದರಲ್ಲಿ ಏನೂ ಉಲ್ಲೇಖವಿಲ್ಲ ಎಂಬ ಸಂಗತಿಯತ್ತ ಎಸ್‌ಕೆಎಂ ಹೇಳಿಕೆ ಗಮನ ಸೆಳೆದಿದೆ. ಈ ಕರಡು ನೀತಿ ಚೌಕಟ್ಟು ಮುಖ್ಯವಾಗಿ ರೈತರಿಗೆ ಕನಿಷ್ಠ ಬೆಂಬಲ ಬೆಲೆಯನ್ನು ಕಾನೂನುಬದ್ಧಗೊಳಿಸುವುದು, ಸಾರ್ವಜನಿಕ ಹೂಡಿಕೆಯನ್ನು ಹೆಚ್ಚಿಸುವುದು ಮತ್ತು ಸಾಲ ಸೌಲಭ್ಯಗಳನ್ನು ಸುಧಾರಿಸುವುದು ಮುಂತಾದ ರೈತರ ಪ್ರಮುಖ ಬೇಡಿಕೆಗಳನ್ನು ನಿರ್ಲಕ್ಷಿಸಿದೆ, ಬದಲಾಗಿ, ಇದು ರಾಜ್ಯ ಬೆಂಬಲಿತ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳನ್ನು (ಎಪಿಎಂಸಿ) ಕಿತ್ತುಹಾಕುವುದರ ಮೇಲೆಯೇ ಗಮನ ಕೇಂದ್ರೀಕರಿಸುತ್ತದೆ, ಇದರಿಂದಾಗಿ ಸಣ್ಣ ಮತ್ತು ಮಧ್ಯಮ ರೈತರನ್ನು ಖಾಸಗಿ ವ್ಯಾಪಾರೀ ದುಷ್ಟಕೂಟಗಳ ಶೋಷಣೆಗೆ ಗುರಿ ಮಾಡುತ್ತದೆ ಎಂಬ ಕಾರಣಗಳಿಗಾಗಿ ರೈತರು ತೀವ್ರ ಆಕ್ರೋಶವನ್ನು ವ್ಯಕ್ತಪಡಿಸುತ್ತಿದ್ದಾರೆ. ಈ ಸುಧಾರಣೆಗಳು ಎಂಬುದು ಕಾರ್ಪೊರೇಟ್-ಸ್ನೇಹೀ ಕ್ರಮಗಳು, ಇದರಿಂದ ಗಮನಾರ್ಹ ಪ್ರಯೋಜನವಾಗುವುದು ಈಗಾಗಲೇ ಮೂಲಸೌಕರ್ಯದಲ್ಲಿ ಭಾರೀ ಹೂಡಿಕೆ ಮಾಡಿರುವ ರಿಲಯನ್ಸ್ ಮತ್ತು ಅದಾನಿಯಂತಹ ದೊಡ್ಡ ಕಾರ್ಪೊರೇಟ್ ಕಂಪನಿಗಳಿಗೆ ಮಾತ್ರ ಎಂದು ರೈತ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸುತ್ತಿವೆ. ಆಹಾರ ಭದ್ರತೆಗೆ ಅಪಾಯ ರೈತರಿಗೆ ನ್ಯಾಯಯುತ ಪ್ರತಿಫಲವನ್ನು ಖಚಿತಪಡಿಸಲು ಕರಡಿನಲ್ಲಿ ನಿಯಂತ್ರಕ ಸುರಕ್ಷತಾ ಕ್ರಮಗಳ ಕೊರತೆಯಿದೆ ಇದರಿಂದಾಗಿ ಕಾರ್ಪೊರೇಟ್ ಶೋಷಣೆ ಹೆಚ್ಚುತ್ತದೆ ಮತ್ತು ರೈತರ ಸಾಲ ಮತ್ತು ಆತ್ಮಹತ್ಯೆಗಳ ಸಮಸ್ಯೆ ಮತ್ತಷ್ಟು ಹದಗೆಡುತ್ತದೆ. ಕೃಷಿಕ ಉತ್ಪಾದಕ ಸಂಸ್ಥೆಗಳ (ಎಫ್‌ಪಿಒಗಳ) ಮೂಲಕ ಕಾರ್ಪೊರೇಟೀಕರಣ ಮತ್ತು ಷೇರು ಮಾರುಕಟ್ಟೆಗಳಿಗೆ ಲಗತ್ತಿಸುವುದಕ್ಕೆ ಒತ್ತು ನೀಡುವುದರಿಂದ ಕಾರ್ಪೊರೇಟ್ ನಿಯಂತ್ರಣ ಮತ್ತಷ್ಟು ಬಲಗೊಳ್ಳುತ್ತದೆ, ಇದು ಆಹಾರ ಭದ್ರತೆಗೆ ಅಪಾಯವನ್ನುಂಟುಮಾಡುತ್ತದೆ ಎಂದೂ ರೈತ ಮುಖಂಡರು ಆತಂಕ ವ್ಯಕ್ತಪಡಿಸಿದರು. ಇದಲ್ಲದೆ, ಏಕರೂಪದ ಸುಧಾರಣೆಗಳನ್ನು ಜಾರಿಗೆ ತರಲು “ಸಬಲೀಕೃತ ಕೃಷಿ ಮಾರುಕಟ್ಟೆ ಸುಧಾರಣಾ ಸಮಿತಿ”ಯ ಹೆಸರಿನಲ್ಲಿ ಈ ಕರಡು ಅಧಿಕಾರದ ಕೇಂದ್ರೀಕರಣ ಮಾಡುತ್ತದೆ, ಇದು ರಾಜ್ಯಗಳ ಸ್ವಾಯತ್ತತೆಯನ್ನು ಮತ್ತು ಸಹಕಾರಿ ಒಕ್ಕೂಟ ತತ್ವವನ್ನು ದುರ್ಬಲಗೊಳಿಸುತ್ತದೆ ಎಂದೂ ಅವರು ಹೇಳಿದ್ದಾರೆ.…

‘ಭೂಮಿ ಬದ್ಧತೆಯ ಬಯ್ಯಾರೆಡ್ಡಿ’ – ಬರಗೂರು ರಾಮಚಂದ್ರಪ್ಪ

ನೈತಿಕ ನಿಷ್ಠಾವಂತ, ತಾತ್ವಿಕ ಹೃದಯವಂತ ಬೆಂಗಳೂರು : ಜಿ.ಸಿ.ಬಯ್ಯಾರೆಡ್ಡಿ ಭೂಮಿ ಬದ್ಧತೆಯ ಬಯ್ಯಾರೆಡ್ಡಿ ಎಂದು ಬರಗೂರು ರಾಮಚಂದ್ರಪ್ಪ ಶ್ಲಾಘಿಸಿದರು. ಸಿಪಿಐ(ಎಂ) ರಾಜ್ಯ…

ವಿಮಾನ ನಿಲ್ದಾಣದ ಒತ್ತುವರಿ ಕಾರ್ಯಚರಣೆಗೆ ಗ್ರಾಮಸ್ಥರ ವಿರೋಧ

ಪೊಲೀಸ್ ಬಂದೊಬಸ್ತ್ ಮೂಲಕ ತೆರವು ಕಾರ್ಯಚರಣೆ: ಗ್ರಾಮಸ್ಥರ ಪ್ರತಿಭಟನೆ ಹಾಸನ: ವಿಮಾನ ನಿಲ್ದಾಣ ಕಾಪೌಂಡ್ ಕಾಮಗಾರಿ ವಿರೋಧಿಸಿ ಸ್ಥಳೀಯ ಗ್ರಾಮಸ್ಥರು ಒಂದು…

ಮೈಕ್ರೋ ಫೈನಾನ್ಸ್ ಕಿರುಕುಳಕ್ಕೆ ಬ್ರೇಕ್; ಸುಗ್ರೀವಾಜ್ಞೆಗೆ ಸಚಿವ ಸಂಪುಟ ಅನಮೋದನೆ

ಬೆಂಗಳೂರು : ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿ ಮೀರಿದ್ದು, ಈ ಹಿನ್ನೆಲೆ ಮುಖ್ಯಮಂತ್ರಿ ಸಿದ್ಧರಾಮಯ್ಯ ನೇತೃತ್ವದ ಸಂಪುಟ ಮಹತ್ವದ ನಿರ್ಧಾರ ಕೈಗೊಳ್ಳಲಾಗಿದೆ.…

ಸುಣಕಲ್ಲಬಿದರಿ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಂದ ವಂಚನೆ: ಸೂಕ್ತ ಕ್ರಮಕ್ಕಾಗಿ ಎಸ್ಎಫ್ಐ ಆಗ್ರಹ

ರಾಣೆಬೇನ್ನೂರ: ತಾಲ್ಲೂಕಿನ ಸುಣ್ಣಕಲ್ಲಬಿದರಿ ಗ್ರಾಮದಲ್ಲಿರುವ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮೂಲಭೂತ ಸೌಕರ್ಯಗಳಿಂದ…

ಮೈಕ್ರೋ ಫೈನಾನ್ಸ್ ಗಳ ಹಾವಳಿಗಳಿಂದಾಗಿ ರೈತರ ಆತ್ಮಹತ್ಯೆಗೆ ಸರ್ಕಾರವೇ ನೇರ ಹೊಣೆ : ಮುಖ್ಯಮಂತ್ರಿ ಚಂದ್ರು

ಬೆಂಗಳೂರು : ರಾಜ್ಯದಲ್ಲಿ ಇತ್ತೀಚಿನ ಮೈಕ್ರೋ ಫೈನಾನ್ಸ್ ಗಳ ವಸೂಲಿ ದಂಧೆಗಳಿಗೆ ರಾಜ್ಯದ ರೈತರುಗಳು ಆತ್ಮಹತ್ಯೆ ಮಾರ್ಗವನ್ನು ಹಿಡಿದಿರುವುದಕ್ಕೆ ರಾಜ್ಯ ಸರ್ಕಾರವೇ…