ಛತ್ತೀಸ್ಗಢ : ನಕ್ಸಲ್ಪೀಡಿತ ಪ್ರದೇಶಗಳ ಭೂದೃಶ್ಯ ವೇಗವಾಗಿ ಬದಲಾಗುತ್ತಿದೆ. ಒಂದು ಕಾಲದಲ್ಲಿ ನಕ್ಸಲ್ಪೀಡಿತ ಪ್ರದೇಶಗಳಾದ ರಾಜ್ಯದ ಬಸ್ತಾರ್, ದಂತೇವಾಡದಲ್ಲಿ ಅಭಿವೃದ್ಧಿ ಮತ್ತು ಕೃಷಿಯನ್ನು ಕಲ್ಪಿಸಿಕೊಳ್ಳುವುದು ಕೂಡಾ ಕಷ್ಟಕರವೇ ಆಗಿತ್ತು. ಎಟಿಎಂ ಮಾದರಿ’ಯ ಕೃಷಿ ಚಟುವಟಿಕೆ!
ಇಲ್ಲಿನ ಹಲವು ರೈತರ ಜೀವನಮಟ್ಟ ಸುಧಾರಿಸಿದೆ. ಇದು ಕಡಿಮೆ ಅವಧಿಯಲ್ಲಿ ಹೆಚ್ಚು ಲಾಭ ತಂದು ಕೊಡುವ ಕೃಷಿ ವಿಧಾನ. ಒಬ್ಬರನ್ನು ಕಂಡು ಮತ್ತೊಬ್ಬರಂತೆ ಎಲ್ಲರೂ ಇದೇ ಮಾದರಿಯನ್ನು ಅಳವಡಿಸಿಕೊಳ್ಳುತ್ತಿದ್ದಾರೆ. ಇದರಿಂದಾಗಿ ದಂತೇವಾಡ ಜಿಲ್ಲೆ ‘ಸಾವಯವ ಜಿಲ್ಲೆ’ ಎಂದು ಹೆಸರುವಾಸಿಯಾಗಿದ್ದು, ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆ ಸಾವಯವ ಕೃಷಿ ಮತ್ತು ಸಾವಯವ ತರಕಾರಿಗಳನ್ನು ಉತ್ತೇಜಿಸುವ ಕೆಲಸ ಮಾಡುತ್ತಿದೆ.
ಇದನ್ನೂ ಓದಿ : ವಿಶ್ವಕಪ್ ಗೆದ್ದ ಭಾರತದ ಅಂಧ ಮಹಿಳಾ ಕ್ರಿಕೆಟ್ ತಂಡದ ಆಟಗಾರ್ತಿಯರಿಗೆ ಸರ್ಕಾರಿ ಉದ್ಯೋಗ!
ಪ್ರತಿ ಹಳ್ಳಿಗೆ ತೆರಳಿ ಜಾಗೃತಿ ಮತ್ತು ತರಬೇತಿ ಕಾರ್ಯಕ್ರಮಗಳನ್ನು ನಡೆಸುವ ಮೂಲಕ ರೈತರಲ್ಲಿ ಚೈತನ್ಯ ತುಂಬುತ್ತಿದೆ. ಪರೀಕ್ಷಾರ್ಥವಾಗಿ 30 ಸಾವಯವ ರೈತರನ್ನು ಗುರುತಿಸಲಾಗಿದ್ದು, ಅವರಿಗೆ ಎಟಿಎಂ ಮಾದರಿ ವಿಧಾನವನ್ನು ಬಳಸಿಕೊಂಡು ಕೃಷಿಯಲ್ಲಿ ತರಬೇತಿ ನೀಡಲಾಗಿದೆ. ಅತ್ಯಂತ ಕಡಿಮೆ ಅವಧಿಯಲ್ಲಿ, ಇರುವ ಚಿಕ್ಕ ಚಿಕ್ಕ ಭೂಮಿಯಲ್ಲಿಯೇ ಏಕಕಾಲದಲ್ಲಿ ಮೂರರಿಂದ ನಾಲ್ಕು ರೀತಿಯ ತರಕಾರಿಗಳನ್ನು ಬೆಳೆಸುವುದು, ಅದರ ಪಾಲನೆ-ಪೋಷಣೆ, ಮಾರಾಟ ಸೇರಿದಂತೆ ಇತರೆ ಮಾಹಿತಿಯನ್ನು ರೈತರಿಗೆ ತಲುಪಿಸುವ ಕೆಲಸ ನಿರಂತರವಾಗಿ ನಡೆಯುತ್ತಿದೆ.
ಜಿಲ್ಲಾಡಳಿತ ಮತ್ತು ಕೃಷಿ ಇಲಾಖೆಯ ಸಹಕಾರ ಮತ್ತು ಸಹಾಯದಿಂದ ರೈತರಲ್ಲಿ ಇತ್ತೀಚೆಗೆ ಸಕಾರಾತ್ಮಕ ಬದಲಾವಣೆಗಳಾಗಿವೆ. ‘ಎಟಿಎಂ ಮಾದರಿ’ಯ ಕೃಷಿ ವಿಧಾನವು ಜನರಲ್ಲಿ ಹೊಸ ಭರವಸೆಯ ಬೀಜ ಬಿತ್ತಿದೆ. ಹಾಗಾಗಿ, ಎಟಿಎಂ ಮಾದರಿಯ ಕೃಷಿ ವಿಧಾನ ಛತ್ತೀಸ್ಗಢದ ರೈತರ ಪರಿವರ್ತಕ ಎಂದರೂ ತಪ್ಪಾಗಲಾರದು.
ಈ ಮಾದರಿಯಿಂದ ಸಣ್ಣ ಜಮೀನಿನಲ್ಲಿಯೂ ಸಹ ಏಕಕಾಲದಲ್ಲಿ ಮೂರರಿಂದ ನಾಲ್ಕು ವಿಧದ ತರಕಾರಿಗಳನ್ನು ಬೆಳೆಯಬಹುದು. ಪ್ರತಿ 15ರಿಂದ 20 ದಿನಗಳಿಗೊಮ್ಮೆ ಕೊಯ್ಲು ಮಾಡಿದ ಬೆಳೆಯನ್ನು ಮಾರಾಟ ಮಾಡುವುದರಿಂದ ಗಣನೀಯ ಆದಾಯ ತೆಗೆಯಬಹುದು. ಪಾಲಕ್, ಮೆಂತ್ಯ, ಕೆಂಪು ಪಾಲಕ್, ಮೂಲಂಗಿ ಮತ್ತು ಕ್ಯಾರೆಟ್ಗಳನ್ನು ನಿರಂತರವಾಗಿ ಕೊಯ್ಲು ಮಾಡಲಾಗುತ್ತದೆ. ರೈತ, ವಿಜಮ್ ಗ್ರಾಮ.
ಎಟಿಎಂ ಮಾದರಿ ಕೃಷಿಯ ಪ್ರಯೋಜನಗಳೇನು?:
ಕಡಿಮೆ ಭೂಮಿಯಿಂದ ಹೆಚ್ಚಿನ ಇಳುವರಿ, ಕಡಿಮೆ ಅಪಾಯ, ಒಂದು ಬೆಳೆ ವಿಫಲವಾದರೆ ಇನ್ನೊಂದು ಬೆಳೆ ಸಿದ್ಧ, ಪುನರಾವರ್ತಿತ ಬಿತ್ತನೆಯ ಅಗತ್ಯವಿಲ್ಲ,ಬಹು-ಪದರದ ಮಣ್ಣು ಪೂರ್ಣ ಬಳಕೆಗೆ ಅನುವು ಮಾಡಿಕೊಡುತ್ತದೆ, ರಾಸಾಯನಿಕ ಮುಕ್ತ ಕೃಷಿಯನ್ನು ಉತ್ತೇಜಿಸುತ್ತದೆ, ವರ್ಷಪೂರ್ತಿ ಉದ್ಯೋಗ ಮತ್ತು ಆದಾಯ. ದಕ್ಷಿಣ ಭಾರತದ ಹಲವು ಪ್ರದೇಶಗಳಲ್ಲಿ ‘ಎಟಿಎಂ ಕೃಷಿ ವಿಧಾನ’ ಯಶಸ್ವಿಯಾಗಿದೆ. ಈಗ ದಂತೇವಾಡದಲ್ಲಿಯೂ ಇದನ್ನು ವೇಗವಾಗಿ ಅಳವಡಿಸಿಕೊಳ್ಳಲಾಗುತ್ತಿದೆ. ಪ್ರಸ್ತುತ, ವಿಜಮ್ ಗ್ರಾಮ ಸೇರಿದಂತೆ ಜಿಲ್ಲೆಯ ಹಲವಾರು ಪ್ರದೇಶಗಳಲ್ಲಿ ರೈತರಿಗೆ ತಾಂತ್ರಿಕ ತರಬೇತಿ, ಆವರ್ತಕ ಮಾರ್ಗದರ್ಶನ ಮತ್ತು ಸಾವಯವ ಕೃಷಿಗೆ ಬೆಂಬಲ ನೀಡಲಾಗುತ್ತಿದೆ- ಸೂರಜ್ ಪನ್ಸಾರಿ, ಕೃಷಿ ಅಧಿಕಾರಿ.
ಇದನ್ನೂ ನೋಡಿ : ‘ರೈತ, ಕಾರ್ಮಿಕ, ಜನ ವಿರೋಧಿ ಸರ್ಕಾರ ಉಳಿಯುವುದಿಲ್ಲ’ | ಕರಡು ದಹಿಸಿ ಆಕ್ರೋಶ Janashakthi Media
