ಆಂಧ್ರಪ್ರದೇಶ | 42 ದಿನಗಳ ಹೋರಾಟ ಗೆದ್ದ ಅಂಗನವಾಡಿ ಅಮ್ಮಂದಿರು; ಕೊನೆಗೂ ಮಂಡಿಯೂರಿದ ಜಗನ್ ಸರ್ಕಾರ

ಅಮರಾವತಿ: ಆಂಧ್ರಪ್ರದೇಶದ ಅಂಗನವಾಡಿ ಕಾರ್ಯಕರ್ತೆಯರು ಮತ್ತು ಸಹಾಯಕಿಯರು ನಡೆಸುತ್ತಿರುವ ಪ್ರತಿಭಟನೆಯನ್ನು ಮಂಗಳವಾರ ಕೊನೆಗೊಳಿಸಿದ್ದಾರೆ ಎಂದು ವರದಿಯಾಗಿದೆ. ಕಳೆದ 42 ದಿನಗಳಿಂದ ಹೋರಾಟ ನಡೆಸುತ್ತಿರುವ ನೌಕರರ ಬೇಡಿಕೆಯಾದ, ವೇತನ ಹೆಚ್ಚಳ ಮತ್ತು ವಿಮಾ ರಕ್ಷಣೆ ಸೇರಿದಂತೆ ಎಲ್ಲಾ ಬೇಡಿಕೆಯನ್ನು ರಾಜ್ಯ ಸರ್ಕಾರ ಒಪ್ಪಿಕೊಂಡಿದೆ ಎಂದು ವರದಿಯಾಗಿದೆ.

ಅಂಗನವಾಡಿ ಕಾರ್ಯಕರ್ತೆಯರ ಎಲ್ಲಾ 11 ಬೇಡಿಕೆಗಳನ್ನು ಪರಿಹರಿಸಲು ಸರ್ಕಾರ ಒಪ್ಪಿಕೊಂಡಿದ್ದು, ವೇತನ ಹೆಚ್ಚಳ ಮಾಡುವುದು ಪ್ರತಿಭಟನಾನಿರತರ ಪ್ರಮುಖ ಬೇಡಿಕೆಯಾಗಿತ್ತು ಎಂದು ಅಧಿಕೃತ ಸರ್ಕಾರಿ ಹೇಳಿಕೆ ತಿಳಿಸಿದೆ. ಕೇಂದ್ರ ಸರ್ಕಾರದ ಜತೆ ಚರ್ಚೆ ನಡೆಸಿ ವೇತನ ಹೆಚ್ಚಳಕ್ಕೆ ಸರ್ಕಾರ ಒಪ್ಪಿಗೆ ನೀಡಿದೆ. ಈ ವರ್ಷದ ಜುಲೈನಲ್ಲಿ ವೇತನ ಹೆಚ್ಚಳದ ಅನುಷ್ಠಾನವನ್ನು ನಿಗದಿಪಡಿಸಲಾಗಿದೆ ಎಂದು ವರದಿ ಹೇಳಿವೆ.

ಇದನ್ನೂ ಓದಿ: ಆಂಧ್ರ ಪ್ರದೇಶ | ಅಂಗನವಾಡಿ ಕಾರ್ಯಕರ್ತೆಯರ ಮೇಲೆ ದೌರ್ಜನ್ಯ; ಹೋರಾಟ ಹತ್ತಿಕ್ಕಿದ ಪೊಲೀಸರು

”ಕೇಂದ್ರ ಸರಕಾರದೊಂದಿಗೆ ಚರ್ಚೆ ನಡೆಸಲಾಗುವುದು ಮತ್ತು ಕಾರ್ಮಿಕರಿಗೆ ತೃಪ್ತಿದಾಯಕ ವೇತನ ಸಿಗಲಿದೆ ಎಂದು ಸರಕಾರ ಹೇಳಿದೆ. ಅಂಗನವಾಡಿಗಳು ರಾಜ್ಯ ಸರ್ಕಾರದ ಕಲ್ಯಾಣ ಕಾರ್ಯಕ್ರಮಗಳಿಗೆ ಅರ್ಹರಾಗಲು ಸಹ ನಿರ್ಧರಿಸಲಾಗಿದೆ” ಎಂದು ಸಿಪಿಐ(ಎಂ) ರಾಜ್ಯ ಪ್ರಧಾನ ಕಾರ್ಯದರ್ಶಿ ಬಾಬು ರಾವ್ ತಿಳಿಸಿದ್ದಾರೆ.

ಕಾರ್ಯಕರ್ತೆಯರು ಮತ್ತು ಸಹಾಯಕಿಯರಿಗೆ 2 ಲಕ್ಷ ಅಪಘಾತ ವಿಮಾ ಪಾಲಿಸಿ ಸೇರಿದಂತೆ ಜೀವ ವಿಮಾ ರಕ್ಷಣೆ ನೀಡಲು ರಾಜ್ಯ ಸರ್ಕಾರ ಒಪ್ಪಿಗೆ ನೀಡಿದೆ. ಇದಲ್ಲದೆ, ಕಾರ್ಯಕರ್ತೆಯರು ಮೃತಪಟ್ಟರೆ ಅವರ ಶವಸಂಸ್ಕಾರದ ಶುಲ್ಕವನ್ನು 20,000 ರೂ.ಗಳನ್ನು ರಾಜ್ಯ ಸರ್ಕಾರ ಭರಿಸಲಿದೆ.

ಸಹಾಯಕಿಯರನ್ನು ಕಾರ್ಯಕರ್ತೆಯರನ್ನಾಗಿ ಬಡ್ತಿ ನೀಡುವ ವಯೋಮಿತಿಯನ್ನು 45 ವರ್ಷದಿಂದ 50 ವರ್ಷಕ್ಕೆ ಹೆಚ್ಚಿಸಲಾಗಿದೆ. ಕಾರ್ಯಕರ್ತೆಯರು ಮತ್ತು ಸಹಾಯಕಿಯರ ಸೇವಾ ಮುಂದುವರೆಸಲು ಗರಿಷ್ಠ ವಯೋಮಿತಿಯನ್ನು 62 ವರ್ಷಕ್ಕೆ ನಿಗದಿಪಡಿಸಲಾಗಿದೆ. ಪ್ರಯಾಣ ಭತ್ಯೆ (ಟಿಎ) ಮತ್ತು ಆತ್ಮೀಯ ಭತ್ಯೆ (ಡಿಎ) ಕ್ರಮವಾಗಿ ಮಾಸಿಕ ಮತ್ತು ದ್ವೈಮಾಸಿಕ ಆಧಾರದ ಮೇಲೆ ನೀಡಲಾಗುವುದು ಎಂದು ಸರ್ಕಾರ ತಿಳಿಸಿದೆ.

ಇದನ್ನೂ ಓದಿ: ಅಸ್ಸಾಂ | ರಾಹುಲ್ ಗಾಂಧಿಗೆ ದೇವಸ್ಥಾನ ಪ್ರವೇಶ ನಿರಾಕರಣೆ; ಕಾಂಗ್ರೆಸ್ ಪ್ರತಿಭಟನೆ

ಮಿನಿ ಅಂಗನವಾಡಿ ಕೇಂದ್ರಗಳನ್ನು ಮುಖ್ಯ ಕೇಂದ್ರಗಳಾಗಿ ಬಡ್ತಿ ನೀಡುವ ಮತ್ತೊಂದು ಪ್ರಮುಖ ಬೇಡಿಕೆಯಾದ ಮಿನಿ ಕಾರ್ಯಕರ್ತರನ್ನು ಮುಖ್ಯ ಕಾರ್ಯಕರ್ತರನ್ನಾಗಿ ಬಡ್ತಿ ನೀಡಬೇಕು. ರಾಜ್ಯದಲ್ಲಿ 62 ವರ್ಷ ಪೂರೈಸಿದ ಅಂಗನವಾಡಿ ಕಾರ್ಯಕರ್ತೆಯರಿಗೆ 1.20 ಲಕ್ಷ ಹಾಗೂ ಸಹಾಯಕಿಯರಿಗೆ 60 ಸಾವಿರ ನೀಡುವ ಮೂಲಕ ಗ್ರಾಚ್ಯುಟಿಯನ್ನೂ ಜಾರಿಗೊಳಿಸಲಾಗುವುದು.

ಸುಮಾರು ಒಂದು ಲಕ್ಷ ಕಾರ್ಯಕರ್ತೆಯರು ಮತ್ತು ಸಹಾಯಕಿರು ಡಿಸೆಂಬರ್ 12 ರಿಂದ ಉತ್ತಮ ವೇತನ ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಮುಷ್ಕರ ನಡೆಸುತ್ತಿದ್ದಾರೆ. ಈ ನಡುವೆ ಸರ್ಕಾರವು ಅಗತ್ಯ ಸೇವೆಗಳ ನಿರ್ವಹಣೆ ಕಾಯಿದೆ (ಎಸ್ಮಾ) ಜಾರಿ ಮಾಡಿದ್ದು ಸೇರಿದಂತೆ, ಹೋರಾಟವನ್ನು ಹತ್ತಿಕ್ಕಲು ಬೇಕಾಗಿ ಹಲವಾರು ಬಾರಿ ಬಂಧಿಸಿದ ನಂತರವೂ ಪ್ರತಿಭಟನೆಗಳು ಮುಂದುವರೆದಿದ್ದವು. ಈ ಮಧ್ಯೆ ಸರ್ಕಾರವು ಅಂಗನವಾಡಿ ಕೇಂದ್ರಗಳಿಗೆ ಸುಮಾರು 80 ಕೋಟಿ ರೂ.ಗಳನ್ನು ಮಂಜೂರು ಮಾಡಿದ್ದು, ಗೋಡೆಗಳಿಗೆ ಬಣ್ಣ ಬಳಿಯುವುದು, ಸಣ್ಣ ದುರಸ್ತಿ ಸೇರಿದಂತೆ ಬಾಡಿಗೆ, ನಿರ್ವಹಣಾ ವೆಚ್ಚಗಳನ್ನು ಇದು ಭರಿಸಲಿದೆ.

ವಿಡಿಯೊ ನೋಡಿ: ದೇಶವೆಂದರೆ “ಅಂಕಿ – ಅಂಶಗಳ ಆಟವಲ್ಲ”, – ಎಸ್ ವರಲಕ್ಷ್ಮಿ Janashakthi Media

Donate Janashakthi Media

Leave a Reply

Your email address will not be published. Required fields are marked *