ಅಕಾಲಿ ದಳ (ಎಸ್‌ಎಡಿ)ಯ ಮುಖಂಡ ಸುರ್ಜಿತ್ ಸಿಂಗ್‌ಗೆ ಗುಂಡಿಕ್ಕಿ ಹತ್ಯೆ

ಹೋಶಿಯಾರ್ಪುರ : ಶಿರೋಮಣಿ ಅಕಾಲಿ ದಳ (ಎಸ್‌ಎಡಿ)ಯ ಮುಖಂಡ ಸುರ್ಜಿತ್ ಸಿಂಗ್ ಅವರನ್ನು ಇಬ್ಬರು ಅಪರಿಚಿತ ದುಷ್ಕರ್ಮಿಗಳು ಗುಂಡಿಕ್ಕಿ ಹತ್ಯೆ ಮಾಡಿದ್ದಾರೆ ಎಂದು ವರದಿಯಾಗಿದೆ. ಅಕಾಲಿ ದಳ

ಗುರುವಾರ ಸಂಜೆ ಈ ಘಟನೆ ನಡೆದಿದ್ದು, ಸುರ್ಜಿತ್ ಸಿಂಗ್ ಅವರು ಕಿರಾಣಿ ಅಂಗಡಿಯೊಂದರ ಹೊರಗೆ ಕುಳಿತಿದ್ದಾಗ ಈ ಕೃತ್ಯ ನಡೆದಿದೆ ಎಂದು  ಡಿಎಸ್‌ಪಿ ತಲ್ವಿಂದರ್ ಸಿಂಗ್ ತಿಳಿಸಿದ್ದಾರೆ.

“ರಾತ್ರಿ 7 ಗಂಟೆಯ ಸುಮಾರಿಗೆ ಸುರ್ಜಿತ್ ಸಿಂಗ್ ಅವರು ಸ್ಥಳೀಯ ದಿನಸಿ ಅಂಗಡಿಯೊಂದರ ಹೊರಗೆ ಕುಳಿತಿದ್ದರು. ಇಬ್ಬರು ವ್ಯಕ್ತಿಗಳು ಬೈಕ್‌ ನಲ್ಲಿ ಬಂದು ಸುರ್ಜಿತ್ ಸಿಂಗ್ ಕಡೆಗೆ ನಾಲ್ಕು ಸುತ್ತು ಗುಂಡು ಹಾರಿಸಿದರು. ಅವರನ್ನು ಸಿವಿಲ್ ಆಸ್ಪತ್ರೆಗೆ ಕರೆದೊಯ್ಯಲಾಯಿತು, ಅಲ್ಲಿ ಅವರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಯಿತು.” ಎಂದು ಸಿಂಗ್ ಹೇಳಿದ್ದಾರೆ.

ಇದನ್ನೂ ಓದಿ: ಪ್ರಗತಿಪರ ಸಾಹಿತಿಗಳಿಗೆ ಜೀವ ಬೆದರಿಕೆ ಪ್ರಕರಣ| ಹಿಂದುತ್ವ ಸಂಘಟನೆ ಕಾರ್ಯಕರ್ತ ಅರೆಸ್ಟ್..!

ಎಸ್‌ಎಡಿ ನಾಯಕ ಸುರ್ಜಿತ್‌ ಸಿಂಗ್‌ ಅವರು ಮೆಗೋವಾಲ್‌ ಗಂಜಿಯಾನ್‌ ಗ್ರಾಮದ ಮಾಜಿ ಸರಪಂಚ್‌ ಅಗಿದ್ದರು. ಪ್ರಸ್ತುತ ಅವರ ಪತ್ನಿ ಅದೇ ಹುದ್ದೆಯಲ್ಲಿದ್ದಾರೆ. ಹತ್ಯೆಯ ಹಿಂದಿನ ಕಾರಣ ತಿಳಿದು ಬಂದಿಲ್ಲ. ಅಪರಿಚಿತ ದುಷ್ಕರ್ಮಿಗಳಿಗಾಗಿ ಶೋಧ ಮುಂದುವರಿದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿಡಿಯೋ ನೋಡಿ: ಧರ್ಮಸ್ಥಳ ಪದ್ಮಲತಾ ಕೊಲೆಯಾದದ್ದು ಹೇಗೆ? ದೇವಾನಂದರಿಗೆ ಬೆದರಿಕೆ ಹಾಕಿದ್ದು ಯಾರು??

Donate Janashakthi Media

Leave a Reply

Your email address will not be published. Required fields are marked *