ಅಗ್ನಿ ದುರಂತ ಹತ್ತು ಮಕ್ಕಳು ಸಜೀವ ದಹನ

ಮಹಾರಾಷ್ಟ್ರದಲ್ಲಿ ನಡೆದ ಹೃದಯ ವಿದ್ರಾವಕ ಘಟನೆ

ಮಹಾರಾಷ್ಟ್ರ ಜ, 9 : ಶುಕ್ರವಾರ ತಡರಾತ್ರಿ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಹತ್ತು ಮಕ್ಕಳು ಸಜೀವ ದಹನವಾಗಿರುವ ಘಟನೆ ಮಹಾರಾಷ್ಟ್ರದ ನಾಗ್ಪುರ ಜಿಲ್ಲೆಯ ಭಂಡಾರದಲ್ಲಿರುವ ಸಾರ್ವಜನಿಕ ಆಸ್ಪತ್ರೆಯಲ್ಲಿ ನಡೆದಿದೆ.

ಮುಂಜಾನೆ 2 ಗಂಟೆಗೆ ಭಂಡಾರ ಜಿಲ್ಲಾ ಆಸ್ಪತ್ರೆಯ ಎಸ್‌ಎನ್‌ಸಿಯು ಘಟಕದಲ್ಲಿ ಈ ಅಪಘಡ ಸಂಭವಿಸಿದ್ದು, 1 ದಿನದಿಂದ 3 ತಿಂಗಳೊಳಗಿನ 10 ಮಕ್ಕಳು ಸಜೀವದಹನವಾಗಿದ್ದಾರೆ. ಐಸಿಯುನಲ್ಲಿದ್ದ 17 ಮಕ್ಕಳ ಪೈಕಿ 7 ಶಿಶುಗಳ ರಕ್ಷಣೆ ಮಾಡಲಾಗಿದೆ ಎಂದು ಆಸ್ಪತ್ರೆಯ ಸಿವಿಲ್ ಸರ್ಜನ್ ಪ್ರಮೋದ್ ಖಂಡೇಟ್ ಹೇಳಿದ್ದಾರೆ.

ಇಂತದ್ದೆ ಘಟನೆ ಬೆಂಗಳೂರಿನ ಲಕ್ಕಸಂದ್ರದ ಗೋದಾಮಿನಲ್ಲಿ ಸಂಭವಿಸಿದ್ದು, ಇಡೀ ಗೋಡಾನ್ ಗೆ ಬೆಂಕಿ ಬಿದ್ದಿದೆ.

ಬಾಪೂಜಿನಗರ ಹೊಸಗುಡ್ಡದಹಳ್ಳಿಯಲ್ಲಿ ನಡೆದ ಅಗ್ನಿ ಅವಘಡದ ಕಹಿ ಘಟನೆಯನ್ನು ಮರೆಯುವ ಮೊದಲೇ ಬೆಂಗಳೂರಿನಲ್ಲಿ ಮತ್ತೊಂದು ಅಗ್ನಿ ಅವಘಡ ಸಂಭವಿಸಿದೆ. ಲಕ್ಕಸಂದ್ರದಲ್ಲಿರುವ ಗೋದಾಮಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಭಾರೀ ಆತಂಕ ಸೃಷ್ಟಿಸಿದೆ.

ಈಗಾಗಲೇ ಐದು ಅಗ್ನಿಶಾಮಕ ವಾಹನಗಳು ಸ್ಥಳಕ್ಕೆ ಧಾವಿಸಿವೆ. ಇಡೀ ಗೊಡೌನ್​ಗೆ ಬೆಂಕಿಯ ಜ್ವಾಲೆ ವ್ಯಾಪಿಸಿದ್ದು, ಹೊತ್ತಿ ಉರಿತ್ತಿದೆ. ಇದು ಸ್ಥಳೀಯರಲ್ಲಿ ಸಾಕಷ್ಟು ಆತಂಕ ಸೃಷ್ಟಿಸಿದೆ ಬಾಪೂಜಿನಗರ ಹೊಸಗುಡ್ಡದಹಳ್ಳಿಯಲ್ಲಿ ನವೆಂಬರ್​ ತಿಂಗಳಲ್ಲಿ ಭಾರಿ ಬೆಂಕಿ ದುರಂತ ಸಂಭವಿಸಿತ್ತು. ಈ ವೇಳೆ ಸಾಕಷ್ಟು ಮನೆಗಳು ಬೆಂಕಿಗೆ ಆಹುತಿ ಆಗಿದ್ದವು.

Donate Janashakthi Media

Leave a Reply

Your email address will not be published. Required fields are marked *