ಇಂಧನ ಕೊರತೆ: ಮಹಾರಾಷ್ಟ್ರ ಸರ್ಕಾರದ ವಿರುದ್ಧ ಜಯಂತ್ ಪಾಟೀಲ್ ವಾಗ್ದಾಳಿ

ಮುಂಬೈ: ಮಹಾರಾಷ್ಟ್ರದ ಕೆಲವು ಭಾಗಗಳಲ್ಲಿ ಇಂಧನ ಕೊರತೆ ಉಂಟಾಗಿದೆ ಎಂಬ ವರದಿಗಳ ನಡುವೆ, ಎನ್‌ಸಿಪಿ (SP) ಶಾಸಕ ಜಯಂತ್ ಪಾಟೀಲ್ ಮೇ 20ರಂದು ರಾಜ್ಯ ಸರ್ಕಾರವನ್ನು ತೀವ್ರವಾಗಿ ಟೀಕಿಸಿ, “ಡಬಲ್ ಎಂಜಿನ್ ಸರ್ಕಾರದ ಎಂಜಿನ್‌ಗಳಲ್ಲೂ ಎಣ್ಣೆ ಖಾಲಿಯಾಗಿದೆಯೇ?” ಎಂದು ಪ್ರಶ್ನಿಸಿದ್ದಾರೆ. ಇಂಧನ 

ಸಾಮಾಜಿಕ ಜಾಲತಾಣ ‘ಎಕ್ಸ್’ನಲ್ಲಿ ಮಾಡಿದ ಪೋಸ್ಟ್‌ನಲ್ಲಿ, ಮಾಜಿ ಸಚಿವರಾದ ಪಾಟೀಲ್ ರಾಜ್ಯದ ವಿವಿಧ ಭಾಗಗಳಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಕೊರತೆಯ ಹಿನ್ನೆಲೆಯಲ್ಲಿ ನಡೆದ ಘಟನೆಗಳನ್ನು ಉಲ್ಲೇಖಿಸಿದರು.

“ಜಲ್ಗಾಂನಲ್ಲಿ, ಪೆಟ್ರೋಲ್ ಇಲ್ಲ ಎಂದು ತಿಳಿಸಿದ ಪೆಟ್ರೋಲ್ ಬಂಕ್ ನೌಕರನಿಗೆ ಕೆಲ ಅಪರಿಚಿತರು ಹೊಟ್ಟೆಗೆ ಚೂರಿಯಿಂದ ಇರಿದ ಘಟನೆ ನಡೆದಿದೆ. ಬುಲ್ಧಾನಾ ಜಿಲ್ಲೆಯಲ್ಲಿ ಜನರು ಪೆಟ್ರೋಲ್ ಪಡೆಯಲು 12 ಗಂಟೆಗಳ ಕಾಲ ಸಾಲಿನಲ್ಲಿ ನಿಂತಿದ್ದರು,” ಎಂದು ಅವರು ಹೇಳಿದರು.

ಇದನ್ನೂ ಓದಿ: ರಸಗೊಬ್ಬರ ಕೊರತೆ ಹಿನ್ನೆಲೆ | ಯೂರಿಯಾಗೆ ಪರ್ಯಾಯ ಸೂಚಿಸಿದ ಐಸಿಎಆರ್‌

ವಾಶಿಂ ನಾಕಾದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್‌ಗಾಗಿ ಜಗಳಗಳು ನಡೆದವು ಎಂದು ಅವರು ತಿಳಿಸಿದ್ದಾರೆ.

“ನಾಗ್ಪುರದಲ್ಲಿ, ಕಾಣೆಯಾದ ಬಾಲಕಿಯನ್ನು ಹುಡುಕಲು ಪೊಲೀಸರು ತಮ್ಮ ವಾಹನಗಳಿಗೆ ಡೀಸೆಲ್ ಇಲ್ಲದ ಪರಿಸ್ಥಿತಿ ಎದುರಿಸುತ್ತಿದ್ದಾರೆ,” ಎಂದು ಅವರು ಆರೋಪಿಸಿದರು.

“ಇದು ಏನು ನಡೆಯುತ್ತಿದೆ? ಡಬಲ್ ಎಂಜಿನ್ ಸರ್ಕಾರದ ಎಂಜಿನ್‌ಗಳಲ್ಲೂ ಎಣ್ಣೆ ಖಾಲಿಯಾಗಿದೆಯೇ?” ಎಂದು ಪಾಟೀಲ್ ಪ್ರಶ್ನಿಸಿದ್ದಾರೆ.

ಕೇಂದ್ರ ಮತ್ತು ರಾಜ್ಯದಲ್ಲಿ ಒಂದೇ ಪಕ್ಷ ಅಧಿಕಾರದಲ್ಲಿರುವ ಸ್ಥಿತಿಯನ್ನು ‘ಡಬಲ್ ಎಂಜಿನ್ ಸರ್ಕಾರ’ ಎಂದು ಸಾಮಾನ್ಯವಾಗಿ ಆಡಳಿತಾರೂಢ ಮೈತ್ರಿ ಬಳಸುತ್ತದೆ.

ಇದನ್ನೂ ನೋಡಿ: ಸಾರಿಗೆ ನೌಕರರ ಮುಷ್ಕರಕ್ಕೆ ಹೈಕೋರ್ಟ್‌ ಅಡ್ಡಿ – ನಾಯಕರು ಏನಂತಾರೆ? Janashakthi Media

Donate Janashakthi Media

Leave a Reply

Your email address will not be published. Required fields are marked *