ಬೆಸ್ಕಾಂ ಎಎಸ್​ಡಿ ಹೆಸರಲ್ಲಿ ಹಣ ವಸೂಲಿ; ಆಕ್ರೋಶ ವ್ಯಕ್ತಪಡಿಸುತ್ತಿರುವ ಜನರು

ಬೆಂಗಳೂರು: ಇಷ್ಟು ದಿನಗಳ ಕಾಲ ಮನೆ ಮಾಲೀಕರು ಗೃಹಜ್ಯೋತಿ ಯೋಜನೆಯಲ್ಲಿ ಉಚಿತವಾಗಿ ವಿದ್ಯುತ್ ಉಪಯೋಗಿಸುತ್ತಿದ್ದರು. ಆದರೆ ಇದೀಗ ಬೆಸ್ಕಾಂ ಎಎಸ್​ಡಿ ಹೆಸರಲ್ಲಿ ಹಣ ವಸೂಲಿ ಮಾಡಲು ಮುಂದಾಗಿದೆ ಎಂದು ಜನರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಬೆಸ್ಕಾಂ ಬಿಲ್ ಜೊತೆ ಬಂದ ಅಡಿಷನಲ್ ಚಾರ್ಜ್ ಕಂಡು ಮನೆ ಮಾಲೀಕರು ಶಾಕ್ ಆಗಿದ್ದಾರೆ. ವಸೂಲಿ

ಈಗಾಗಲೇ ಗೃಹಜ್ಯೋತಿ ಯೋಜನೆಯಡಿಯಲ್ಲಿ ರಾಜ್ಯ ಕಾಂಗ್ರೆಸ್ ಸರ್ಕಾರ 200 ಯೂನಿಟ್​ವರೆಗೆ ಉಚಿತವಾಗಿ ವಿದ್ಯುತ್ ನೀಡುತ್ತಿದೆ. ಆದರೆ, ಇಲ್ಲಿಯವರೆಗೆ ಉಚಿತವಾಗಿ ವಿದ್ಯುತ್ ಬಳಸುತ್ತಿದ್ದ ಮನೆಗಳಿಗೆ ಬೆಸ್ಕಾಂ ಎಎಸ್‌ಡಿ (ಅಡಿಷನಲ್ ಸೆಕ್ಯೂರಿಟೀ ಡೆಪಾಸಿಟಿ) ಹೆಸರಲ್ಲಿ ಸಾವಿರಾರು ರೂ. ಹಣ ಕಟ್ಟುವಂತೆ ಈ ತಿಂಗಳ ಬಿಲ್ ಜೊತೆಗೆ ನೀಡಿದೆ. ಇದಕ್ಕೆ ಬೆಸ್ಕಾಂ ವಿರುದ್ಧ ಮನೆ ಮಾಲೀಕರು, ಬಾಡಿಗೆಗೆದಾರರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ: ಸರ್ಕಾರಗಳನ್ನು ಉರುಳಿಸುವ ದುರಾಲೋಚನೆ ಬೇಡ – ನಾಡೋಜ ಹಂಪ ನಾಗರಾಜಯ್ಯ

ಬೆಸ್ಕಾಂ ಬಿಲ್ ಜೊತೆಗೆ ಡೆಪಾಸಿಟ್ ಚಾರ್ಜ್ ಎಂದು ಪ್ರತಿ ಮನೆಗೆ ಬಿಲ್ ನೀಡಲಾಗಿದೆ. ಇನ್ನು ಹೆಚ್ಚಿನ ಕರೆಂಟ್ ಬಳಸುತ್ತಿರುವ ಮನೆಗಳಿಗೆ ಬೆಸ್ಕಾಂ ಅಡಿಷನಲ್ ಸೆಕ್ಯುರಿಟಿ ಡೆಪಾಸಿಟ್ ಹೆಸರಲ್ಲಿ ಸಾವಿರಾರು ರೂ. ವಸೂಲಿ ಮಾಡಲು ಮುಂದಾಗಿದ್ದಾರೆ. ಆದರೆ ಈ ಹಣ ವಾಪಸ್ಸು ಬರೋದಿಲ್ಲ, ಮನೆ ಮಾಲೀಕರ ಅಕೌಂಟ್​ನಲ್ಲಿ ಈ ಹಣ ಜಮೆ ಆಗಿರುತ್ತದೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ.

ನಮ್ಮ ಅಕೌಂಟ್​ನಲ್ಲಿ ಜಮೆ ಆಗಿರುವಾಗ ನಾವು ಯಾಕೆ ಹಣ ಕಟ್ಟಬೇಕು. ಸೆಕ್ಯುರಿಟಿ ಡೆಪಾಸಿಟ್ ಕಟ್ಟಲ್ಲ, ಬಿಲ್ ಮಾತ್ರ ಕಟ್ಟುತ್ತೇವೆ ಎಂದು ಮನೆ ಮಾಲೀಕರು ಹೇಳುತ್ತಿದ್ದಾರೆ. ಆದರೆ ಈ ಬಾರಿ ಹಣ ಕಟ್ಟಿಲ್ಲ ಅಂದರೆ ಕನೆಕ್ಷನ್ ಕಟ್ ಮಾಡುತ್ತೇವೆ ಎಂದು ಬೆಸ್ಕಾಂ ಅಧಿಕಾರಿಗಳು ಹೇಳುತ್ತಿದ್ದಾರೆ.

ಈ ಬಗ್ಗೆ ಮಾತಾನಾಡಿದ ಬೆಸ್ಕಾಂ ಜನರಲ್ ಮ್ಯಾನೇಜರ್ (ಕಸ್ಟಮರ್ ರಿಲೇಷನ್) ಎಂಎಲ್. ರಾಜೋಜಿರಾವ್, ಬೆಸ್ಕಾಂ ಹಿತದೃಷ್ಟಿಯಿಂದ ಹೆಚ್ಚಿನ ವಿದ್ಯುತ್ ಬಳಸುವ ಮನೆ ಮಾಲೀಕರಿಗೆ ಮಾತ್ರ ಎಎಸ್ಡಿ ಬಿಲ್ ನೀಡಲಾಗಿದೆ. ಕಡಿಮೆ ವಿದ್ಯುತ್ ಬಳಸುವ ಮನೆ ಮಾಲೀಕರಿಗೆ ಎಎಸ್ಡಿ ಅಪ್ಲೈ ಆಗೋದಿಲ್ಲ. ಈ ಹಣವನ್ನು ಮನೆ ಮಾಲೀಕರ ಅಕೌಂಟ್​ನಲ್ಲಿ ಇರುತ್ತದೆ. ಆ ಹಣಕ್ಕೆ ನಾವು ಪ್ರತಿ ವರ್ಷ ಬಡ್ಡಿ ಕೊಡುತ್ತೇವೆ ಎಂದಿದ್ದಾರೆ. ಇಷ್ಟು ದಿನ ಉಚಿತವಾಗಿ ವಿದ್ಯುತ್ ಬಳಕೆ ಮಾಡುತ್ತಿದ್ದ ಮನೆ ಮಾಲೀಕರಿಗೆ, ಬೆಸ್ಕಾಂ ಅಧಿಕಾರಿಗಳ ಎಎಸ್ಡಿ ಬಿಲ್ ಶಾಕ್ ನೀಡುವುದಂತು ಸುಳ್ಳಲ್ಲ.

ಇದನ್ನೂ ನೋಡಿ: ಸೌಹಾರ್ದವಿಲ್ಲದೇ ಶಾಂತಿ ನೆಲೆಸದು. ಶಾಂತಿ ಇಲ್ಲದೇ ವಿಕಾಸ ಸಾಧ್ಯವಾಗದು – ಅಜಯ್ ಕುಮಾರ್ ಸಿಂಗ್Janashakthi Media

Donate Janashakthi Media

Leave a Reply

Your email address will not be published. Required fields are marked *