ವಿವಾಹ ನಿರಾಕರಿಸಿದ ಯುವತಿ ತಂದೆಯ 800 ಅಡಕೆ ಮರಗಳನ್ನು ತುಂಡರಿಸಿದ ಯುವಕ

ಹುಣಸೂರು: ಮದುವೆಗೆ ಒಪ್ಪಲಿಲ್ಲ ಎಂದು ಆಕ್ರೋಶಗೊಂಡ ಯುವಕ, ಯುವತಿ ಮನೆಗೆ ಸೇರಿದ ಅಡಕೆ ತೋಟ ಹಾಗೂ ಶುಂಠಿ ಬೆಳೆಯನ್ನೇ ನಾಶಪಡಿಸಿದ್ದಾನೆ. ಹುಣಸೂರು ತಾಲೂಕಿನ ಕಡೇಮನುಗನಹಳ್ಳಿ ಗ್ರಾಮದ ಅಶೋಕ್‌ ಈ ಕೃತ್ಯ ಎಸಗಿದ್ದಾನೆ ಎಂದು ಗ್ರಾಮಾಂತರ ಠಾಣೆ ಪೊಲೀಸರಿಗೆ ದೂರು ನೀಡಲಾಗಿದೆ.

”ತಮ್ಮ ಪುತ್ರಿಯನ್ನು ಅಶೋಕನಿಗೆ ಮದುವೆ ಮಾಡಿಕೊಡಲು ಮಾತುಕತೆ ಆಗಿತ್ತು. ಈ ನಡುವೆ ಆತನ ನಡವಳಿಕೆ ಯಿಂದ ಆತಂಕಗೊಂಡ ಮಗಳು ಮದುವೆಯಾಗಲು ನಿರಾಕರಿಸಿದಳು. ಇದರಿಂದ ಆಕ್ರೋಶಗೊಂಡ ಅಶೋಕ್‌, ಮೂರು ದಿನಗಳ ಹಿಂದೆ ನಮ್ಮ ಜಮೀನಿನಲ್ಲಿ ಬೆಳೆದಿದ್ದ ಅರ್ಧ ಎಕರೆ ಶುಂಠಿ ಬೆಳೆ ನಾಶಪಡಿಸಿದ್ದಾನೆ. ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ದೂರು ದಾಖಲಿಸಿದ್ದೆ. ಮತ್ತೆ ಮಂಗಳವಾರ ರಾತ್ರಿ ಐದು ವರ್ಷದ 800 ಅಡಕೆ ಮರಗಳನ್ನು ತುಂಡರಿಸಿ ನಾಶಪಡಿಸಿದ್ದಾನೆ. ಅಲ್ಲದೆ ಮನೆ ಬಳಿ ನಿಲ್ಲಿಸಿದ್ದ ಬೈಕಿಗೆ ಬೆಂಕಿ ಹಾಕಿ ಸುಟ್ಟಿದ್ದಾನೆ,” ಎಂದು ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ.

”ಪ್ರಕರಣಗಳಿಂದ ತಮ್ಮ ಕುಟುಂಬ ಆತಂಕದ ನಡುವೆ ಜೀವನ ಸಾಗಿಸುವಂತಾಗಿದ್ದು, ಆರೋಪಿ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು,” ಎಂದು ರೈತ ವೆಂಕಟೇಶ್‌ ಮನವಿ ಮಾಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿ ಪತ್ತೆಗೆ ಬಲೆ ಬೀಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *