ಪ್ರಚಾರಕ್ಕೆ ಬಂದ ಬಿಜೆಪಿ ಶಾಸಕರನ್ನು ಓಡಿಸಿದ ಸ್ಥಳೀಯರು

ಲಖನೌ : ವಿಧಾನಸಭಾ ಚುನಾವಣೆಗೆ ಸಜ್ಜಾದ ಉತ್ತರ ಪ್ರದೇಶದಲ್ಲಿ ಪ್ರಚಾರ ಕಾರ್ಯಕ್ಕೆ ತೆರಳಿದ್ದ ತಮ್ಮದೇ ಕ್ಷೇತ್ರದ ಬಿಜೆಪಿ ಶಾಸಕರೊಬ್ಬರನ್ನು ಗ್ರಾಮಸ್ಥರು  ಅಟ್ಟಾಡಿಸಿರುವ ಘಟನೆ ನಡೆದಿದೆ.

ಭಾರತೀಯ ಜನತಾ ಪಕ್ಷದ ಶಾಸಕ ವಿಕ್ರಮ್ ಸೈನಿ ಮುಜಾಫರ್‌ನಗರದ ಮುನ್ವರ್‌ಪುರ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಕಾರ್ಯಕ್ರಮವೊಂದರಲ್ಲಿ ಪಾಲ್ಗೊಳ್ಳಲು ಗ್ರಾಮಕ್ಕೆ ಆಗಮಿಸಿದ್ದ ಶಾಸಕರ ವಿರುದ್ಧ ಸ್ಥಳೀಯರು ಘೋಷಣೆ ಕೂಗಿದ್ದಾರೆ. ಕೃಷಿ ಕಾನೂನು ವಿಚಾರವಾಗಿ ಶಾಸಕರ ವಿರುದ್ಧ ಘೋಷಣೆ ಕೂಗಿದ ಗ್ರಾಮಸ್ಥರು ಬಳಿಕ ಅವರು ಕಾರಿನಿಂದ ಕೆಳಗಿಳಿಯಲೂ ಕೂಡ ಆಸ್ಪದ ನೀಡದೇ ಮುತ್ತಿಗೆ ಹಾಕಿದ್ದಾರೆ.

ಕೂಡಲೇ ಹಿಂತಿರುಗಿ ಸ್ಥಳದಿಂದ ಹೊರಹೋಗುವಂತೆ ಆಗ್ರಹಿಸಿದ್ದು, ಈ ವೇಳೆ ಆಕ್ರೋಶಿತರ ಆಗ್ರಹಕ್ಕೆ ಮಣಿದ ಶಾಸಕ ಬಂದ ಕಾರಿನಲ್ಲೇ ವಾಪಸ್ ಆಗಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಈ ವಿಡಿಯೋ ಇದೀಗ ವ್ಯಾಪಕ ವೈರಲ್ ಆಗುತ್ತಿದ್ದು, ವಿಡಿಯೋ ಕುರಿತು ಪ್ರತಿಕ್ರಿಯೆ ನೀಡಿರುವ ಶಾಸಕರು ತಮ್ಮ ಭೇಟಿಗೆ ವಿರೋಧ ವ್ಯಕ್ತಪಡಿಸಿದವರು ಮದ್ಯದ ಅಮಲಿನಲ್ಲಿದ್ದರು ಎಂದು ಹೇಳಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *