ಕೇಂದ್ರ ಸರಕಾರದಿಂದ ರೈತರ ಕಡಗಣೆನೆ : ಸಿಖ್ ಧರ್ಮಗುರು ಆತ್ಮಹತ್ಯೆ

ಹೊಸದಿಲ್ಲಿ:  ಕೃಷಿ ಮಸೂದೆ ವಿರೋಧಿಸಿ ದೆಹಲಿಯಲ್ಲಿ  ರೈತರು ನಡೆಸುತ್ತಿರುವ ಪ್ರತಿಭಟನೆ ತೀವ್ರ  ಸ್ವರೋಪ ಪಡೆದುಕೊಳ್ಳುತ್ತಿದೆ. ಆಘಾತಕಾರಿ ಬೆಳವಣಿಗೆಯೊಂದರಲ್ಲಿ ದೆಹಲಿಯ ಗಡಿಯಲ್ಲಿ ನಡೆಯುತ್ತಿರುವ ರೈತ ಪ್ರತಿಭಟನೆಯಲ್ಲಿ ಭಾಗವಹಿಸಿದ್ದ ಸಿಖ್ ಧರ್ಮಗುರುವೋರ್ವರು  ರೈತರ ಹೋರಾಟವನ್ನು ಬೆಂಬಲಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.  ಹರಿಯಾಣದ ಗುರುದ್ವಾರ ಧರ್ಮಗುರುವಾಗಿದ್ದ ಬಾಬಾ ರಾಮ್ ಸಿಂಗ್ ಆತ್ಮಹತ್ಯೆ ಮಾಡಿಕೊಂಡಿರುವ ವ್ಯಕ್ತಿ.
ಕೇಂದ್ರ ಸರ್ಕಾರ ರೈತರನ್ನು ನಡೆಸಿಕೊಳ್ಳುತ್ತಿರುವ ರೀತಿಯನ್ನು ಕಂಡು ತೀವ್ರವಾಗಿ ನೊಂದಿದ್ದು, ಈ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಬಾಬಾ ರಾಮ್ ಸಿಂಗ್ ಪತ್ರದಲ್ಲಿ ತಿಳಿಸಿದ್ದಾರೆ. ಬಾಬಾ ರಾಮ್ ಸಿಂಗ್ ನಿನ್ನೆ(ಡಿ.15-ಮಂಗಳವಾರ)ಯಷ್ಟೇ ರೈತ ಪ್ರತಿಭಟನೆಯಲ್ಲಿ ಭಾಗವಹಿಸಲು ದೆಹಲಿಗೆ ಗಡಿಗೆ ಬಂದು ತಲುಪಿದ್ದರು. ಬಾಬಾ ರಾಮ್ ಸಿಂಗ್ ಒಂದು ದಿನದ ಸಾಂಕೇತಿಕ ಧರಣಿಯಲ್ಲಿ ಪಾಲ್ಗೊಂಡಿದ್ದರು.
ಹೋರಾಟದಲ್ಲಿ ಭಾಗಿಯಾಗಿರುವ ರೈತರಲ್ಲಿ 10 ಕ್ಕೂ ಹೆಚ್ಚು ಜನ ರೈತರು ಈಗಾಗಲೇ ಸಾವನ್ನಿಪ್ಪಿದ್ದಾರೆ. ಸರಕಾರ ಬೇಡಿಕೆ ಈಡೇರುವ ಬದಲು ಸರಣಿ ಸಾವುಗಳ ಸಂಖ್ಯೆಯನ್ನು ಹೆಚ್ಚಿಸಲು ಮನಸ್ಸು ಮಾಡಿದಂತೆ ಕಾಣುತ್ತಿದೆ ಎಂದು ವಿರೋಧ ಪಕ್ಷಗಳ ಸರಕಾರವನ್ನು ಕಟುವಾಗಿ ಟೀಕಿಸಿವೆ. ಹೋರಾಟವನ್ನು ಇನ್ನಷ್ಟು ತೀವ್ರಗೊಳಿಸುವುದಾಗಿ ಎಐಕೆಎಸ್ಸಿಸಿ ತಿಳಿಸಿದೆ.
Donate Janashakthi Media

Leave a Reply

Your email address will not be published. Required fields are marked *