ಕೆಪಿಟಿಸಿಎಲ್ ನೇಮಕಾತಿ ಅಧಿಸೂಚನೆ ರದ್ದು : ಉದ್ಯೋಗಾಕಾಂಕ್ಷಿಗಳಿಂದ ಪ್ರತಿಭಟನೆ

ಕೆಪಿಟಿಸಿಎಲ್ ನ  ನೇಮಕಾತಿ ಆದೇಶವನ್ನು ರದ್ದುಗೊಳಿಸಿರುವ ಸರಕಾರದ  ಕ್ರಮವನ್ನು ಖಂಡಿಸಿ ಅಭ್ಯರ್ಥಿಗಳು  ಇಂದಿನಿಂದ ಫ್ರೀಡಂ ಪಾರ್ಕ್ ಬಳಿ ಅನಿರ್ಧಿಷ್ಟಾವಧಿ ಪ್ರತಿಭಟನೆ ನಡೆಸುತ್ತಿದ್ದಾರೆ.  ಕರ್ನಾಟಕ ಸರ್ಕಾರದ ಸೂಚನೆಯಂತೆ ಹಲವು ಇಲಾಖೆಗಳ ನೇಮಕಾತಿ ತಾತ್ಕಾಲಿಕವಾಗಿ ಸ್ಥಗಿತವಾಗಿದ್ದು,  ಕೆಲವು ನೇಮಕಾತಿಗಳನ್ನು  ರದ್ದು ಮಾಡಿದೆ ಎಂಬ ಅಂಶವು ಈಗ ಬೆಳಕಿಗೆ ಬಂದಿದೆ.  ಆ ಸಾಲಿಗೆ ಈಗ ಕೆಪಿಟಿಸಿಎಲ್ ನ  ನೇಮಕಾತಿ ಸೇರಿದೆ ಎಂದು ಪ್ರತಿಭಟನೆಕಾರರು ಆಕ್ರೋಶ ವ್ಯಕ್ತಪಡಿಸಿದರು.   2020 ರ ಫೆಭ್ರವರಿಯಲ್ಲಿ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್,  ಸಹಾಯಕ ಎಂಜಿನಿಯರ್,  ಕಿರಿಯ ಎಂಜಿನಿಯರ್,  ಕಿರಿಯ ಸಹಾಯಕ ಎಂಜಿನಿಯರ್  ನೇಮಕಾತಿ ಪ್ರಕ್ರೀಯೆಯ  ಆದೇಶವನ್ನು ಹೊರಡಿಸಿತ್ತು.

ಫ್ರೀಡಂಪಾರ್ಕ ಬಳಿ ನಡೆಯುತ್ತಿರುವ ಧರಣಿ
ಪ್ರತಿಭಟನೆಯನ್ನು ಉದ್ದೇಶಿಸಿ  ಉದ್ಯೋಗಾಂಕ್ಷಿಗಳ ಮುಂದಾಳು ಚಂದ್ರಿಕಾ ರವರು ಮಾತನಾಡುತ್ತಾ,   ಕೆಪಿಟಿಸಿಎಲ್  ಹಾಗೂ ರಾಜ್ಯದ ವಿದ್ಯುತ್ ವಿತರಣಾ ನಿಗಮದಲ್ಲಿನ  3,646 ಹುದ್ದೆಗಳ ನೇಮಕಾತಿಯನ್ನು ಏಕಾಏಕಿ ರದ್ದು ಮಾಡಿರುವುದು ಉದ್ಯೋಗಾಕಾಂಕ್ಷಿಗಳನ್ನು ಬದುಕನ್ನು ತಲ್ಲಣಗೊಳಿಸಿದೆ.  ಎಪ್ರಿಲ್ 2019 ರಲ್ಲಿ ನೇಮಕಾತಿ ಅಧಿಸೂಚನೆ ಹೊರಡಿಸಿತ್ತು, ಆದರೆ ಇಲ್ಲಿಯವರೆಗೆ ಪರೀಕ್ಷೆಗಳನ್ನು ನಡೆಸಿಲ್ಲ, ಎಂದು  ಆರೋಪಿಸಿದರು.
 ಇನ್ನೂರ್ವ ಮುಖಂಡ ರಘುವೀರ ಮಾತನಾಡಿ  “ಕಷ್ಟಪಟ್ಟು ಕೋರ್ಸ್ ಮಾಡಿದ್ದೇವೆ, ಸಾಲಾ ಮಾಡಿ ಕೋಚಿಂಗ್ ಹೋಗಿದ್ದೇವೆ,  ಅನೇಕರು ಖಾಸಗಿ ಕಂಪಿನಲ್ಲಿ ಕೆಲಸಕ್ಕೆ ರಾಜಿನಾಮೆ ನಿಡಿ ಪರೀಕ್ಷೆಗೆ ತಯಾರಿ ನಡೆಸಿದ್ದರು, ಆದರೆ ಸರಕಾರ ಈಗ ನೇಮಕಾತಿ ಆದೇಶ ರದ್ದು ಮಾಡಿ ನಮ್ಮ ಬದುಕಿಗೆ ಕೊಡಲಿಪೆಟ್ಟು ಹಾಕಿದೆ.” ಸರಕಾರದ ವಿರುದ್ಧ ಪ್ರಭಲವಾದ ಚಳುವಳಿ ರೂಪಿಸುವುದಾಗಿ  ತಿಳಿಸಿದರು.

ನೇಮಕಾತಿ ರದ್ದು ಮಾಡಿರುವ ಸರಕಾರ ಕ್ರಮವನ್ನು ಪ್ರಶ್ನಿಸುವಂತೆ ವಿಪಕ್ಷ ನಾಯಕರಿಗೆ ಮನವಿ ಮಾಡಿದ್ದೇವೆ. ಸಧನದಲ್ಲಿ ಮಾಜಿ ಮುಖ್ಯ ಮಂತ್ರಿಗಳಾದ ಸಿದ್ದರಾಮಯ್ಯ ಹಾಗೂ ಕುಮಾರಸ್ವಾಮಿಯವರು ಚರ್ಚೆ ನಡೆಸಬಹುದು ಎಂಬ ಭರವಸೆ ಇದೆ ಎಂದು ಪ್ರತಿಭಟನೆಕಾರರು ತಿಳಿಸಿದ್ದಾರೆ.  ಪ್ರತಿಭಟನೆಯಲ್ಲಿ ಪ್ರೇಮ್, ಸುನೀಲ್, ಪೂಜಾ, ಹರೀಶ್ ಸೇರಿದಂತೆ ನೂರಕ್ಕು ಹೆಚ್ಚು ಪ್ರತಿಭಟನೆಕಾರರು ಭಾಗವಹಿಸಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *