ಬೀದಿ ಬದಿ ವ್ಯಾಪಾರಿಗಳ ಸಂಘಟನಾ ಸಮಾವೇಶ

ಬೆಂಗಳೂರು : ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಸಮಾವೇಶವನ್ನು ಬಸವನಗುಡಿಯ ಸಿಐಟಿಯು ಕಚೇರಿಯ ಜ್ಯೋತಿ ಬಸು ಭವನದಲ್ಲಿ ನಡೆಯಿತು.

ಕನಾ೯ಟಕ ರಾಜ್ಯ ಬೀದಿ ಬದಿ ವ್ಯಾಪಾರಿಗಳ ಫೆಡರೇಷನ್ ರಾಜ್ಯಾಧ್ಯಕ್ಷರಾದ ಕೆ. ಎನ್. ಉಮೇಶ್ ಸಮಾವೇಶ ಉದ್ಘಾಟನೆ ಮಾಡಿ, ಕೊರೋನಾ ಮತ್ತು ಲಾಕ್‍ಡೌನ್‍ನಿಂದಾಗಿ ಬೀದಿ ಬದಿ ವ್ಯಾಪರಿಗಳು ಅನೇಕ ಕಷ್ಟಗಳನ್ನು ಎದುರಿಸುತ್ತಿದ್ದಾರೆ. ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿದ್ದಾರೆ. ಇವರ ಜೀವನಕ್ಕೆ ಸರ್ಕಾರ ಬೆಂಬಲವಾಗಿ ನಿಲ್ಲಬೇಕು ಒತ್ತಾಯಿಸಿದರು.

ಈ ಸಮಾವೇಶದಲ್ಲಿ ಪ್ರತಾಪ್ ಸಿಂಹ ಸಿಐಟಿಯು ಕಾರ್ಯದರ್ಶಿ ಬೆಂಗಳೂರು ಉತ್ತರ ಜಿಲ್ಲಾ ಸಮಿತಿ ಮತ್ತು ಬಿ.ಎನ್.ಮಂಜುನಾಥ್  ಸಿಐಟಿಯು ಕಾರ್ಯದರ್ಶಿ ಬೆಂಗಳೂರು ದಕ್ಷಿಣ ಜಿಲ್ಲಾ ಸಮಿತಿ ಸಮಾವೇಶ ಕುರಿತಾಗಿ ಮಾತನಾಡಿದರು.

ಈ ಸಮಾವೇಶದಲ್ಲಿ ಬೀದಿ ಬದಿ ವ್ಯಾಪಾರಿಗಳ ಜಿಲ್ಲಾ ಮುಖಂಡರಾದ  ಬಸಮ್ಮ, ವೀರಮಣಿ, ಬಿ.ಎನ್. ರಘು,ಹಾಗೂ ಬೀದಿ ಬದಿ ವ್ಯಾಪಾರಿಗಳ ಮುಖಂಡರು, ಪ್ರತಿನಿಧಿಗಳು ಭಾಗವಹಿಸಿದ್ದರು.

ಈ ಸಮಾವೇಶದಲ್ಲಿ ನೂತನವಾಗಿ ಡಿ.ಶ್ರೀನಿವಾಸ್ಯ ಅಧ್ಯಕ್ಷರಾಗಿ, ಬಸಮ್ಮ ಪ್ರಧಾನ ಕಾರ್ಯದರ್ಶಿಯಾಗಿ, ಜಿ.ಪಿ.ಸುನಿಲ್ ಖಜಾಂಚಿಯಾಗಿ ಆಯ್ಕೆ ಆಗಿದ್ದಾರೆ.

 

Donate Janashakthi Media

Leave a Reply

Your email address will not be published. Required fields are marked *