ಇಳಿಜಾರಿನಲ್ಲಿ ನಿಲ್ಲಿಸಿದ್ದ ಕ್ಯಾಂಟರ್ ಹರಿದು ಸೋದರರ ಸಾವು

ಇಳಿಜಾರು ಪ್ರದೇಶದಲ್ಲಿ ಹ್ಯಾಂಡ್‌ ಬ್ರೇಕ್‌ ಹಾಕದೆ ನಿಲ್ಲಿಸಿದ್ದ ಕ್ಯಾಂಟರ್‌ ವಾಹನ ಏಕಾಏಕಿ ಚಲಿಸಿದ ಪರಿಣಾಮ ಸ್ಕೂಟರ್‌ಗೆ ಡಿಕ್ಕಿ ಹೊಡೆದು ನಂತರ 7 ದ್ವಿಚಕ್ರ ವಾಹನಗಳಿಗೆ ಅಪ್ಪಳಿಸಿದ ಪರಿಣಾಮ ಸರಣಿ ಅಪಘಾತವಾಗಿ ಸಹೋದರರಿಬ್ಬರು ಮೃತಪಟ್ಟಿರುವ ಘಟನೆ ಬ್ಯಾಟರಾಯನಪುರ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಬನಾರಸ್‌‍ ಮೂಲದ ಶಾಹಿದ್‌ ರಾಜ್‌(21) ಮತ್ತು ರಿಯಾಜ್‌ರಾಜ್‌(14) ಮೃತಪಟ್ಟ ಸಹೋದರರು.ಗುಡದಹಳ್ಳಿಯ ಎಫ್‌ ಸ್ಟ್ರೀಟ್‌ನಲ್ಲಿ ಈ ಇಬ್ಬರು ಸಹೋದರರು ವಾಸವಾಗಿದ್ದುಕೊಂಡು ಸೀರೆ ನೇಯುವ ವೃತ್ತಿ ಮಾಡುತ್ತಿದ್ದರು.

ಗುಡದಹಳ್ಳಿಯ ಎಫ್‌ ಸ್ಟ್ರೀಟ್‌ನಲ್ಲಿ ಮನೆಯೊಂದನ್ನು ನಿರ್ಮಿಸುತ್ತಿದ್ದು, ಈ ಜಾಗಕ್ಕೆ ಇಂದು ಕ್ಯಾಂಟರ್‌ನಲ್ಲಿ ಹಾಲೋಬ್ರಿಕ್ಸ್ ತರಲಾಗಿತ್ತು. ಚಾಲಕ ಹ್ಯಾಂಡ್‌ ಬ್ರೇಕ್‌ ಹಾಕದೇ ತರಾತುರಿಯಲ್ಲಿ ವಾಹನ ನಿಲ್ಲಿಸಿ ತೆರಳಿದ್ದಾನೆ.

ಬೆಳಗ್ಗೆ 8.30ರಲ್ಲಿ ಈ ಇಬ್ಬರು ಸಹೋದರರು ಹಾಲು ತರಲು ಸ್ಕೂಟರ್‌ನಲ್ಲಿ ಹೋಗುತ್ತಿದ್ದಾಗ ಇಳಿಜಾರು ಪ್ರದೇಶದಲ್ಲಿ ನಿಲ್ಲಿಸಿದ್ದ ಕ್ಯಾಂಟರ್‌ ಏಕಾಏಕಿ ಮುಂದೆ ಸಾಗಿ ಸಹೋದರರ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಇವರಿಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *