ಅಶ್ಲೀಲ ಸಿಡಿ ಸ್ಪೋಟಿಸಿದ ದಿನೇಶ್‌ ಕಲ್ಲಳ್ಳಿ ವಿರುದ್ಧ ರಮೇಶ್‌ ಜಾರಕಿಹೊಳಿ ಬೆಂಬಲಿಗರ ಪ್ರತಿಭಟನೆ

ಗೋಕಾಕ್‌ : ರಮೇಶ್ ಜಾರಕಿಹೊಳೆ ಅಶ್ಲೀಲ ಸಿಡಿ ಬಿಡುಗಡೆ ಮಾಡಿದ ಸಾಮಾಜಿಕ ಕಾರ್ಯಕರ್ತ ದಿನೇಶ್ ಕಲ್ಲಳ್ಳಿ ವಿರುದ್ಧ ಕ್ರಮಕ್ಕೆ ಒತ್ತಾಯಿಸಿ ರಮೇಶ್ ಬೆಂಬಲಿಗರು ಇಂದು ಬೆಳಗಾವಿ ಜಿಲ್ಲೆಯ ಕೊಣ್ಣೂರಿನಿಂದ ಗೋಕಾಕ್‍ವರೆಗೆ 10 ಕಿ.ಮೀ ಪಾದಯಾತ್ರೆ ನಡೆಸಿ ಮಾದಿನ್ನಿ ಕ್ರಾಸ್ ನಲ್ಲಿ ಪ್ರತಿಭಟನೆ ನಡೆಸಿದರು.

ಗೋಕಾಕ್ ನಲ್ಲಿ ಏಕಾಏಕಿ ಸರ್ಕಾರಿ ಬಸ್ ಗಳು ಸ್ಥಗಿತಗೊಳಿಸಿ ರಮೇಶ್‌ ಬೆಂಗಲಿಗರು ಪ್ರತಿಭಟನೆ ನಡೆಸಿದ್ದರಿಂದ ಸಾರ್ವಜನರಿಕರಿಗೆ ಬಸ್‌ ಗಳಿಲ್ಲದೇ ತೊಂದರೆಗಳನ್ನು ಅನುಭವಿಸಿದ್ದು,  ಕಾಲುದಾರಿಯಲ್ಲೇ ಊರು ಸೇರಿದ್ದಾರೆ. ಶಾಲಾ ಕಾಲೇಜುಗಳಿಗೆ ತೆರಳಬೇಕಿದ್ದ ವಿದ್ಯಾರ್ಥಿಗಳು  ಬಸ್‌ ಗಳಿಲ್ಲದೆ ಪರದಾಡಿದರು.

ರಮೇಶ್ ಜಾರಕಿಹೊಳಿ ವಿರುದ್ಧ ಷಡ್ಯಂತ್ರ ಮಾಡಲಾಗಿದೆ. ಅವರ ವಿರುದ್ಧ ದೂರು ನೀಡಿದ ದಿನೇಶ್ ಕಲ್ಲಳ್ಳಿ ವಿರುದ್ಧ ಕ್ರಮ ಕೈಗೊಳ್ಳಬೇಕು ಎಂದು ಬೆಂಬಲಿಗರು ಒತ್ತಾಯಿಸಿದರು.

ಸ್ಥಳಗಳಲ್ಲಿ ಟೈರ್‌ ಗಳಿಗೆ ಬೆಂಕಿ ಹಚ್ಚಿ ಆಕ್ರೋಶ ಹೊರಹಾಕಿದ್ದಾರೆ. ಪ್ರತಿಭಟನಾ ವೇಳೆ ಬೆಂಬಲಿಗರು ತಮ್ಮ ಮೈಮೇಲೆ ಪೆಟ್ರೋಲ್‌ ಸುರಿದುಕೊಂಡು ಬೆಂಕಿ ಹಚ್ಚಿಕೊಳ್ಳಲು ಪ್ರಯತ್ನಿಸಿದ್ದರು. ಕೂಡಲೇ ಪೊಲೀಸರು ಅವರನ್ನು ತಡೆದು ಆಸ್ಪತ್ರೆಗೆ ರವಾನಿಸಿದ್ದಾರೆ.

Donate Janashakthi Media

Leave a Reply

Your email address will not be published. Required fields are marked *