ಯುಗಾದಿ ಹಬ್ಬಕ್ಕಾಗಿ ಆಹಾರ ಧಾನ್ಯ ಹಂಚಲು ದಾಸ್ತಾನು; ಶಾಸಕಿ ರೂಪಕಲಾ ಸೇರಿ ಮೂವರ ವಿರುದ್ಧ ಪ್ರಕರಣ ದಾಖಲು

ಕೋಲಾರ: ತಾಲ್ಲೂಕಿನ ಬ್ಯಾಲಹಳ್ಳಿಯ ತೋಟದ ಮನೆ ಮೇಲೆ ದಾಳಿ ನಡೆಸಿದ ಆಹಾರ ಇಲಾಖೆ ಅಧಿಕಾರಿಗಳು ಮತ್ತು ಜಿಲ್ಲಾ ಪೊಲೀಸ್‌ ಅಧಿಕಾರಿಗಳು ಕೆಜಿಎಫ್ ಶಾಸಕಿ ರೂಪಕಲಾ ಎಂ ಶಶಿಧರ್ ಅವರ ಭಾವಚಿತ್ರಗಳಿರುವ ಅಕ್ಕಿ, ಬೇಳೆ, ಬೆಲ್ಲ, ಮೈದಾ ಹಿಟ್ಟು ತುಂಬಿದ ಸಾವಿರಾರು ಚೀಲಗಳನ್ನು ವಶಪಡಿಸಿಕೊಂಡಿದ್ದಾರೆ.

ಇದನ್ನು ಓದಿ: ಪಕ್ಷಗಳ ಜೊತೆ ಗುರುತಿಸಿಕೊಳ್ಳದೆ ನ್ಯಾಯಸಮ್ಮತ ಚುನಾವಣೆಗೆ ಸಜ್ಜಾಗಿ : ರಾಜೀವ್‍ಕುಮಾರ್ ಸೂಚನೆ

ಸುಮಾರು 50 ಲಕ್ಷ ಮೌಲ್ಯದ ಆಹಾರ ಧಾನ್ಯಗಳ ಚೀಲಗಳು ಒಳಗೊಂಡಿದ್ದು, ಗ್ರಾಮದ ಶ್ರೀನಾಥ್ ಎಂಬುವವರ ತೋಟದಲ್ಲಿ ಈ ಚೀಲಗಳು ಪತ್ತೆಯಾಗಿದೆ. ಪ್ರತಿ ಚೀಲದಲ್ಲಿ 4 ಕೆ ಜಿ ಅಕ್ಕಿ, 1 ಕೆಜಿ ಬೆಲ್ಲ, 900 ಗ್ರಾಂ ತೊಗರಿಬೇಳೆ, 900 ಗ್ರಾಮ ಕಡಲೆಬೇಳೆ, 1 ಕೆ ಜಿ ಮೈದಾ ಹಿಟ್ಟು ಇಡಲಾಗಿತ್ತು. ಇಂತಹ 3,066 ಚೀಲಗಳನ್ನು ವಶಪಡಿಸಿಕೊಳ್ಳಲಾಗಿದೆ. ಈ ವಸ್ತುಗಳನ್ನು ಮನೆ, ಶೆಡ್, ಅಂಗಳದಲ್ಲಿ ಅಕ್ರಮವಾಗಿ ದಾಸ್ತಾನು ಇಡಲಾಗಿತ್ತು.

ಇದಲ್ಲದೆ 212 ಕ್ವಿಂಟಲ್ ತೊಗರಿಬೇಳೆ, 95.60 ಕ್ವಿಂಟಲ್ ಬೆಲ್ಲ, 151 ಕ್ವಿಂಟಲ್ ಮೈದಾ, 252 ಕ್ವಿಂಟಲ್ ಅಕ್ಕಿ ಚೀಲಗಳನ್ನು ಸಹ ವಶಕ್ಕೆ ಪಡೆಯಲಾಗಿದೆ. ಚೀಲದ ಮೇಲೆ ಯುಗಾದಿ ಹಬ್ಬದ ಶುಭಾಶಯಗಳು ಎಂದು ಬರೆಯಲಾಗಿದೆ. ಯುಗಾದಿ ಸಂದರ್ಭದಲ್ಲಿ ಜನರಿಗೆ ಹಂಚಲು ಸಿದ್ಧತೆ ಮಾಡಿಕೊಳ್ಳಲಾಯಿತು.

ಈ ಸಂಬಂಧ ಕೋಲಾರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಬ್ಯಾಲಹಳ್ಳಿ ಗ್ರಾಮದ ಶ್ರೀನಾಥ್, ಕೆಜಿಎಫ್ ಶಾಸಕಿ ರೂಪಕಲಾ ಎಂ.ಶಶಿಧರ್ ಹಾಗೂ ದಾಸ್ತಾನು ಇರಿಸಿದ್ದ ಮಾಲೀಕರ ವಿರುದ್ಧ ಅಗತ್ಯ ವಸ್ತುಗಳ ಕಾಯ್ದೆ ಪ್ರಕಾರ ಪ್ರಕರಣ ದಾಖಲಿಸಲಾಗಿದೆ.

ಇಲ್ಲಿ ಕ್ಲಿಕ್‌ ಮಾಡಿ : ಜನಶಕ್ತಿ ಮೀಡಿಯಾ ವಾಟ್ಸ್‌ಪ್‌ ಗುಂಪು ಸೇರಲು ಈ ಲಿಂಕ್‌ ಕ್ಲಿಕ್‌ ಮಾಡಿ

Donate Janashakthi Media

Leave a Reply

Your email address will not be published. Required fields are marked *