ʻಯಾವ ಜನ್ಮದ ಮೈತ್ರಿ?ʼ ಕೃತಿಯ ಕುರಿತು ಸಂವಾದ

ಬೆಂಗಳೂರು: ʻನವಕರ್ನಾಟಕ 60ರ ಸಂಭ್ರಮʼದ ಆಚರಣೆಯ ಅಂಗವಾಗಿ ಸಾಹಿತಿ ಕಲಾದವಿರ ಬಳಗದ ಸಹಯೋಗದೊಂದಿಗೆ ಡಾ. ಚಿರಂಜೀವಿ ಸಿಂಘ್ ಅವರ ಯಾವ ಜನ್ಮದ ಮೈತ್ರಿ? ಪುಸ್ತಕದ ಕುರಿತು ಸಂವಾದ ಕಾರ್ಯಕ್ರಮವನ್ನು ಹಮ್ಮಿಕೊಂಡಿದೆ.

ಅಕ್ಟೋಬರ್‌ 19, ಮಂಗಳರವಾರ ಬೆಳಿಗ್ಗೆ 10.30ಕ್ಕೆ ಆರಂಭವಾಗಲಿರುವ ಕಾರ್ಯಕ್ರಮವು ನಗರದ ಜೆ.ಸಿ.ರಸ್ತೆಯಲ್ಲಿರುವ ಕನ್ನಡ ಭವನ ಆವರಣದಲ್ಲಿರುವ ನಯನ ಸಭಾಂಗಣದಲ್ಲಿ ನಡೆಯಲಿದೆ.

ಸಂವಾದದಲ್ಲಿ ಹಿರಿಯ ಸಾಹಿತಿ ಡಾ.ಎಚ್‌.ಎಸ್.‌ ಶಿವಪ್ರಕಾಶ್‌, ಮಾಜಿ ಐಎಎಸ್‌ ಅಧಿಕಾರಿ ಐ ಎಂ ವಿಠ್ಠಲ್‌ ಮೂರ್ತಿ, ಹಿರಿಯ ಪತ್ರಕರ್ತ ಸುಗತ ಶ್ರೀನಿವಾಸರಾಜು ಭಾಗವಹಿಸಲಿದ್ದಾರೆ.

ಸಂವಾದ ಸಾರಥ್ಯವನ್ನು ಡಾ| ಅಜಯ್‌ ಕುಮಾರ್‌ ಸಿಂಘ್ ವಹಿಸಿಕೊಡಲಿದ್ದಾರೆ. ಶುಭ ಹಾರೈಕೆ ನಾಡೋಜ ಡಾ| ಹಂ.ಪ. ನಾಗರಾಜಯ್ಯ ಅವರಿಂದ ಹಾಗೂ ಡಾ|| ಚಿರಂಜೀವಿ ಸಿಂಘ್ ಉಪಸ್ಥಿತರಿರುವರು.

Donate Janashakthi Media

Leave a Reply

Your email address will not be published. Required fields are marked *