ಕೊಪ್ಪಳ: ಕಾನ್ಸ್ಟೇಬಲ್ ಒಬ್ಬರು ಜಿಲ್ಲಾ ಸಶಸ್ತ್ರ ಮೀಸಲು ಪಡೆಯ ಪೊಲೀಸ್ ಫೈರಿಂಗ್ ತರಬೇತಿ ವೇಳೆ ಹಾರಿಸಿದ್ದ ಗುಂಡು ಸಮೀಪದಲ್ಲಿ ಇದ್ದ ಕುರಿಗಾಹಿ ಮಹಿಳೆಯ ಕೈಗೆ ಬಿದ್ದಿದ್ದೂ, ಅದೃಷ್ಟವಶಾತ್ ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಕೊಪ್ಪಳ ಜಿಲ್ಲೆ ಗಂಗಾವತಿ ತಾಲೂಕಿನ ಜಂಬಲಗುಡ್ಡ ಗ್ರಾಮದ ಸಮೀಪದಲ್ಲಿರುವ ಕುಮ್ಮಟದುರ್ಗದಲ್ಲಿ ಪೊಲೀಸ್ ತರಬೇತಿ ಶಾಲೆ ಇದೆ.
ಇದನ್ನೂ ಓದಿ: ಲಖನೌ| ವಿಧಾನ ಸೌಧದಲ್ಲಿ ಪಾನ್ ಮಸಾಲ ಜಗಿದು ಉಗಿದ ಶಾಸಕ
ಮಂಗಳವಾರ ಡಿಎಆರ್ ಪೊಲೀಸ್ ಕಾನ್ಸ್ಟೇಬಲ್ ಗಳಿಗೆ ಫೈರಿಂಗ್ ತರಬೇತಿ ನಡೆಯುತ್ತಿತ್ತು. ರೇಣುಕಮ್ಮ ಎಂಬ ಮಹಿಳೆ ಕುರಿ ಕಾಯುತ್ತಾ ಅಲ್ಲಿಗೆ ಬಂದಿದ್ದಾರೆ. ಈ ವೇಳೆ ಕಾನ್ಸ್ಟೇಬಲ್ ಒಬ್ಬರು ಹಾರಿಸಿದ ಗುಂಡು ಗುರಿ ತಪ್ಪಿ ರೇಣುಕಮ್ಮನವರ ತೋಳಿಗೆ ಬಿದ್ದಿದೆ.
ಕೂಡಲೇ ಅವರನ್ನು ಮುನಿರಾಬಾದ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಹೇಳಲಾಗಿದೆ.
ಇದನ್ನೂ ನೋಡಿ: ಇಂಗ್ಲೀಷ್ ಕಲಿಯೋಣ | “Wh” ಪ್ರಶ್ನೆಗಳ ರಚನೆ ಹೇಗೆ? | ತೇಜಸ್ವಿನಿ |#whquestions| Spokenenglish |Janashakthi