ಎಲ್ಲಿ ನಿಂತು ತುಳಿಯಲಾಯಿತೋ ಅಲ್ಲೇ ಪುಟಿದು, ಸೆಟೆದು ನಿಲ್ಲಬೇಕು!!

ಅದೊಂದು ಜಿಜ್ಞಾಸೆ. ಜಗತ್ತಿನ ಬಗ್ಗೆ ತಿಳಿಯುವ ಕುತೂಹಲ. ಸಾಧನೆಯ ದೃಢ ನಿರ್ಧಾರ. ಆ ಆರನೇ ತರಗತಿಯ ಪುಟ್ಟ ಹುಡುಗ ಹೀಗೊಂದು ಕನಸ್ಸನ್ನು ಕಂಡಿದ್ದ. ತರಗತಿಯಲ್ಲಿ, ದೊಡ್ಡವಾರದ ಮೇಲೆ ನೀವೇನಾಗುತ್ತೀರಿ ಎನ್ನುವ ಘೋರ ಪ್ರಶ್ನೆಯದು. ಸಹಜವಾದ ಉತ್ತರ ತರಗತಿಯಿಂದ ತೇಲಿ ಬಂತು. ಆದರೆ ಒಬ್ಬನೇ ಹುಡುಗ, ಎಲ್ಲರ ಹೌಹಾರುವ ಉತ್ತರ ನೀಡಿದ್ದ. “I want to meet President Thabo Mbeki, I will shake hand with him”. ಇದಕ್ಕೆ ನಕ್ಕ ಎಲ್ಲರೂ ಆ ಹುಡುಗನ ಕನಸಿಗೆ ವ್ಯಂಗ್ಯವಾಡಿದ್ದರು. ಕೇಪ್ ಟೌನ್ ಜೂನಿಯರ್ ಸ್ಕೂಲ್ ಆತನ ಬಗ್ಗೆ ಕುಹಕವಾಡಿತ್ತು‌. ಆದರೆ ಆತನ ಮಾತುಗಳಲ್ಲಿ ಕನಸಿತ್ತು, ಬದ್ಧತೆಯಿತ್ತು, ಅದನ್ನು ಸಾಕಾರ ಮಾಡುವ ದೃಢ ನಿರ್ಧಾರವಿತ್ತು. ವರ್ಷಗಳು ಉರುಳಿದ್ವು. ಮೈ ಬಣ್ಣಕ್ಕೆ, ಆತನ ದೇಹಾಕರಕ್ಕೆ ನಕ್ಕ ಜನರು ಇಂದು ಆತನ ದೂರದೃಷ್ಟಿಯ ಮಾತುಗಳಿಗೆ ಚಪ್ಪಾಳೆಗಳ ಗೌರವ ನೀಡಿದ್ದಾರೆ. ಇಡೀ ಜಗತ್ತಿಗೆ ಟೆಸ್ಟ್ ಚಾಂಪಿಯನ್ ಆಗಿ ಆತನ ಕನಸನ್ನು ನನಸು ಮಾಡಿಕೊಂಡಿದ್ದಾನೆ. ಆತನ ಹೆಸರೇ The Lord Temba Bavuma. ನಿಂತು

-ಆಶಿಕ್ ಮುಲ್ಕಿ

18ನೇ ಶತಮಾನದಲ್ಲಿ ವೆಸ್ಟ್ ಇಂಡಿಯನ್ನರು ಕಪ್ಪು ಜನರ ಬದುಕಿಗೆ ಹೊತ್ತಿಸಿದ ಕಿಡಿ, ಇಂದು ಜಗತ್ತಿನಾದ್ಯಂತ ಇರುವ ಕಪ್ಪು ಜನರ ಬದುಕಲ್ಲಿ ಬೆಳಕಾಗುತ್ತಿದೆ. ವರ್ಣದ ಕಾರಣಕ್ಕೆ ನೊಂದ ಜನರ ಜೀವನಕ್ಕೆ ದಾರಿ ದೀಪವಾಗುತ್ತಿದೆ.‌ ಇಂಗ್ಲೀಷ್ ಜನರ ಬಣ್ಣ ತಾರತಮ್ಯದ ವಿರುದ್ಧ ಅಂದು ಕಬ್ಬಿನ ಗದ್ದೆಯಲ್ಲಿ ಸೆಟೆದು ನಿಂತ ‘ದೇವರ ಮಕ್ಕಳು’ ಗುಲಾಮಗಿರಿಗೆ ಕ್ರಿಕೆಟ್ ನಿಂದ ಬಿಡುಗಡೆ ಕಂಡುಕೊಂಡಿದ್ದರು. ತಮ್ಮ ಹಾಗೂ ತಮ್ಮವರ ಬದುಕಿನಲ್ಲಿ ತಿರುವು ಕಂಡುಕೊಂಡರು. ಅದೊಂದು ಇತಿಹಾಸ. ಕ್ರಿಕೆಟ್ ಜಗತ್ತು ಎಂದೂ ಮರೆಯದ ದಂತಕತೆ. ಅದರ ಮುಂದುವರೆದ ಭಾಗವೇ ದಕ್ಷಿಣ ಆಫ್ರಿಕಾದ ಕಪ್ಪು ಜನರು ತಮ್ಮ ನೆಲದಲ್ಲಿ ಪುಟಿದೆದ್ದ ವೃತ್ತಾಂತ. ಇಂದು ಟೆಂಬಾ ಬವುಮಾ ಎನ್ನುವ ಒಬ್ಬ ಕಪ್ಪು ಮನುಷ್ಯ ಆಡಿಕೊಂಡವರಿಂದ ಹಾಡಿಸಿಕೊಂಡಿದ್ದು ಕೇವಲ ಕಾಕತಾಳೀಯವಲ್ಲ. ಅದರ ಹಿಂದೆ ಶತ ಶತಮಾನದ ಕ್ರಾಂತಿಯ ನೋವಿದೆ. ನಿರೀಕ್ಷೆ ಇದೆ. ಸ್ಪೂರ್ತಿ‌ ಇದೆ. ನೆಲ್ಸನ್ ಮಂಡೇಲಾರಂಥವರ ಹೋರಾಟದ ಫಲವಿದೆ. ನಿಂತು

ದಕ್ಷಿಣ ಆಫ್ರಿಕಾ ಕಪ್ಪು ಜನರ ದೇಶ ಎನ್ನುವುದರಲ್ಲಿ ಅನುಮಾನ ಸಲ್ಲ. ಆದರೆ ಅವರದ್ದೇ ನೆಲದಲ್ಲಿ ಅವರಿಗಾದ ಅವಮಾನ, ಅಸ್ಪರ್ಶ್ಯತೆ ಅವರನ್ನು ಕುಗ್ಗಿಸಿದೆ. ಕಪ್ಪು ಎನ್ನುವ ಕಾರಣಕ್ಕೆ ಅವರು ಬದುಕಲು ಅಯೋಗ್ಯರು ಎನ್ನುವಷ್ಟರ ಮಟ್ಟಿಗೆ ಅವರನ್ನು ನರಳಿಸಿದೆ. ಅವೆಲ್ಲವನ್ನು ಮೆಟ್ಟಿನಿಂತು ಇಂದು ಆ ದೇಶ ಮೂಲಜನರ ಯಶಸ್ಸಿನ ಕತೆಗಳನ್ನು ಕೇಳುತ್ತಿದೆ, ಮಾತನಾಡುತ್ತಿದೆ.

ಇದನ್ನೂ ಓದಿ: ಜೂನ್‌ 14ರಿಂದ ರಾಜ್ಯದಲ್ಲಿ ಭಾರೀ ಮಳೆ: ಹವಮಾನ ಇಲಾಖೆ

ಕ್ರಿಕೆಟ್ ಕೇವಲ ಕ್ರೀಡೆಯಲ್ಲ ಎನ್ನುವುದು ಮತ್ತೆ ಸಾಬೀತಾಗಿದೆ. ಹತ್ತಾರು ವರ್ಷಗಳಿಂದ ಹಲವು ಮಾದರಿಗಳಲ್ಲಿ ಚಾಂಪಿಯನ್ ಆಗಲು ಕೊನೆಯ ಹಂತದಲ್ಲಿ ಏಡವಿ ಬೀಳುವ ಸೌತ್ ಆಫ್ರಿಕಾ ಮೂರು ದಶಕಗಳಲ್ಲಿ ಹತ್ತಾರು ಕರಾರುವಾಕ್ ಆಟಗಾರರನ್ನು ನೋಡಿದೆ. ತೀರಾ ಇತ್ತೇಚೆಗೆ ಗ್ರೇಮ್ ಸ್ಮಿತ್, ಬೌಚರ್, ಹಾಶಿಮ್ ಆಮ್ಲ, ಎಬಿಡಿ ವಿಲಿಯರ್ಸ್ ನಂಥಾ ಘಟಾನುಘಟಿಗಳೇ ಆ ಕನಸುಗಳನ್ನು ಈಡೇರಿಸಲು ಸೋತು ಹೋಗಿದ್ದಾರೆ. ಆದರೆ 27 ವರ್ಷಗಳ ನಂತರ ಆ ದೇಶಕ್ಕೆ ಗೌರವದ, ಆ ದೇಶ ಘನೆತೆಯ, ಅವರ ಕನಸಿನ ನೊಗ ಹೊತ್ತಿದ್ದು ಅಂದು ತುಳಿದ, ಗುಲಾಮಗಿರಿ ಮಾಡಿಸಿದ ಅದೇ ಕಪ್ಪು ಮೈ ಬಣ್ಣದ ಮನುಷ್ಯ.

ಕ್ರಿಕೆಟ್ ಲೋಕದಲ್ಲಿ ಅಂಕಿ ಸಂಖ್ಯೆಗಳು ಬಹಳ ಮುಖ್ಯ. ಆದರೆ ಟೆಂಬಾ ಬವುಮಾ ರನ್ ದಾಖಲೆಗಳಿಗೆಲ್ಲ ಇನ್ನು ಸ್ಥಾನವಿಲ್ಲ. ಆತನ ದೈರ್ಯವಂತಿಕೆ, ಅಪ್ರತಿಮ ನಾಯಕತ್ವ ಗುಣ, ಕಮಾಂಡಿಂಗ್ ಪವರ್, ಎದರುಳಿಗಾಳ ಜೊತೆ ಮೈಂಡ್ ಗೇಮ್ ಆಡುವ ತಾಕತ್ತು ಇವಿಷ್ಟು ಆತನನ್ನು ವಿಶಿಷ್ಟ ಎನಿಸುವಂತೆ ಮಾಡಿದೆ.

ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲೇ ಆತನಿಗೆ ಅಂಥದ್ದೊಂದು ಸಾಧನೆಯ ಶಿಖರವೇರಿ ನಿಲ್ಲಲು ಸಾಧ್ಯವಾಗಿದ್ದು ಕಾಲವೇ ನಿರ್ಧರಿಸಿರುವ ಕಾಕತಾಳೀಯಗಳು. ಎಲ್ಲಿ ನಿಂತು ತುಳಿಯಲಾಯಿತೋ ಅಲ್ಲೇ ಪುಟಿದು, ಸಟೆದು ನಿಲ್ಲವುದು ಕಪ್ಪು ಜನರ ಗುಣ. ಅಂಥದ್ದೊಂದು ಅವಿಸ್ಮರಣೀಯ ದಾಖಲೆಗೆ ಲಾರ್ಡ್ಸ್ ಸಾಕ್ಷಿಯಾಗಿದೆ. ಇದು ಕೇವಲ ಸೌತ್ ಆಫ್ರಿಕಾಕ್ಕೆ ಮಾತ್ರವಲ್ಲ, ಭಾರತ ಸೇರಿದೆ ಜಗತ್ತಿಗೆ ನೀಡಿದ ದಿಕ್ಸೂಚಿ. ಅರಿತರೆ ಇತಿಹಾಸ. ಸೋತರೆ ಗೆಲುವು.

ಇದನ್ನೂ ನೋಡಿ: ಚರ್ಚೆ | ತ್ಯಾಗದ ಹಬ್ಬ ಬಕ್ರೀದ್- ಆಹಾರ ರಾಜಕಾರಣ – ಸೈಯದ್ ಶಫಿವುಲ್ಲಾ‌ ಮತ್ತು ಕೆ ಎಸ್‌ ವಿಮಲಾ ಮಾತುಕತೆJanashakthi

Donate Janashakthi Media

Leave a Reply

Your email address will not be published. Required fields are marked *