ಪ್ರಧಾನಿ ಸ್ಥಾನಕ್ಕಾಗಿ ನಮಗೆ ಹಲವು ಆಯ್ಕೆಗಳಿವೆ, ಆದರೆ ಎನ್‌ಡಿಎಗೆ ಮೋದಿ ಬಿಟ್ಟರೆ ಬೇರೆ ಯಾರಿದ್ದಾರೆ: ಉದ್ಧವ್ ಠಾಕ್ರೆ ಪ್ರಶ್ನೆ

ಮುಂಬೈ: ಬಿಜೆಪಿ ನೇತೃತ್ವದ ಎನ್‌ಡಿಎ ಮೈತ್ರಿಕೂಟಕ್ಕೆ ಪ್ರಧಾನಿ ಮೋದಿಯನ್ನು ಹೊರತುಪಡಿಸಿ ಪ್ರಧಾನಿ ಸ್ಥಾನಕ್ಕೆಂದು ಬೇರೆ ಆಯ್ಕೆಗಳೆ ಇಲ್ಲ ಎಂದು ಮಹಾರಾಷ್ಟ್ರದ ಮಾಜಿ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ಅವರು ಬುಧವಾರ ಹೇಳಿದ್ದಾರೆ. ವಿರೋಧ ಪಕ್ಷಗಳ ಒಕ್ಕೂಟವಾದ ‘ಇಂಡಿಯಾ’ದ ಮೂರನೇ ಮಹತ್ವದ ಸಭೆ ಇಲ್ಲಿ ನಡೆಯಲಿದ್ದು, ಅದಕ್ಕೂ ಮುನ್ನ ಅವರು ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಎನ್‌ಸಿಪಿ ಮುಖ್ಯಸ್ಥ ಶರದ್ ಪವಾರ್ ಕೂಡ ಉಪಸ್ಥಿತರಿದ್ದರು.

‘ಇಂಡಿಯಾ’ ಮೈತ್ರಿಕೂಟದಲ್ಲಿರುವ ಪಕ್ಷಗಳು ವಿಭಿನ್ನ ಸಿದ್ಧಾಂತಗಳನ್ನು ಹೊಂದಿವೆ ಎಂಬ ಪ್ರಶ್ನೆಗೆ ಪ್ರತಿಕ್ರಿಯಿಸಿದ ಉದ್ಧವ್ ಠಾಕ್ರೆ, “ಪ್ರಧಾನಿ ಸ್ಥಾನಕ್ಕಾಗಿ ನಮಗೆ ಹಲವು ಆಯ್ಕೆಗಳಿವೆ, ಆದರೆ ಎನ್‌ಡಿಎಗೆ ಬೇರೆ ಯಾರಿದ್ದಾರೆ?” ಎಂದು ಅವರು ಕೇಳಿದ್ದಾರೆ. ಕರ್ನಾಟಕದಲ್ಲಿ ಏನಾಯಿತು ಎಂದು ನೀವು ನೋಡಿದ್ದೀರಿ. ಗೆಲುವಿಗಾಗಿ ಅವರು ಭಜರಂಗ ಬಲಿಯನ್ನು ಮುಂದೆ ತರಬೇಕಾಗಿ ಬಂತು. ಆದರೆ ದೇವರು ಅವರನ್ನು ಆಶೀರ್ವದಿಸಲಿಲ್ಲ” ಎಂದು ಅವರು ಹೇಳಿದ್ದಾರೆ.

ಇದನ್ನೂ ಓದಿ: ಚೀನಾ ವಿರುದ್ಧ ಸರ್ಜಿಕಲ್ ಸ್ಟ್ರೈಕ್ ಮಾಡುವ ಧೈರ್ಯವಿದೆಯೆ: ಪ್ರಧಾನಿಗೆ ಕುಟುಕಿದ ಸಂಜಯ್ ರಾವತ್

ಬಿಜೆಪಿಯ ಆಡಳಿತವನ್ನು ಬ್ರಿಟಿಷ್‌ ರಾಜ್‌ಗೆ ಹೋಲಿಸಿದ ಅವರು, ಬ್ರಿಟಿಷರೂ ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ, ಆದರೆ ನಾವು ಅವರನ್ನು ಪೂರ್ಣ ಬಲದಿಂದ ಓಡಿಸದಿದ್ದರೆ ನಾವು ಸ್ವಾತಂತ್ರ್ಯವನ್ನು ಸಾಧಿಸುವುದಿಲ್ಲ. ನಮಗೆ ಅಭಿವೃದ್ಧಿ ಬೇಕು, ಜೊತೆಗೆ ಸ್ವಾತಂತ್ರ್ಯ ಬೇಕು ಎಂದು ಅವರು ಹೇಳಿದ್ದಾರೆ.

ಎನ್‌ಸಿಪಿ ನಾಯಕರ ಭ್ರಷ್ಟಾಚಾರದ ಬಗ್ಗೆ ಪ್ರಧಾನಿ ಮೋದಿಯವರ ಹೇಳಿಕೆಯನ್ನು ಪತ್ರಿಕಾಗೋಷ್ಠಿಯಲ್ಲಿ ನೆನಪಿಸಿದ ಶರಾದ್ ಪವಾರ್, “ಪ್ರಧಾನಿ ಮೋದಿ ಅವರು ಪ್ರಸ್ತಾಪಿಸಿದ ನೀರಾವರಿ ಹಗರಣದ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ ಸತ್ಯವನ್ನು ಹೊರ ಹಾಕುವಂತೆ ನಾನು ವಿನಂತಿಸುತ್ತೇನೆ” ಎಂದು ಕೇಳಿಕೊಂಡಿದ್ದಾರೆ. ಗುರುವಾರ ನಡೆಯಲಿರುವ ಇಂಡಿಯಾ ಒಕ್ಕೂಟದ ಸಭೆಯ ಕುರಿತು ಮಾತನಾಡಿದ ಅವರು, ಮುಂಬೈನಲ್ಲಿ ಎರಡು ದಿನಗಳ ಕಾಲ ಸಭೆ ನಡೆಯಲಿದ್ದು 28 ರಾಜಕೀಯ ಪಕ್ಷಗಳ 63 ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಹೇಳಿದ್ದಾರೆ.

ವಿಡಿಯೊ ನೋಡಿ: ಚಲೋ ಬೆಳ್ತಂಗಡಿ:ಬೀಗ ಹಾಕಿದ್ದ ತಹಶಿಲ್ದಾರ್ ಕಚೇರಿ ಎದುರುಗಡೆ ಬಿಜೆಪಿಯ ಪ್ರತಿಭಟನೆ ಏನನ್ನೂ ಸೂಚಿಸುತ್ತದೆ? ವಸಂತ ಬಂಗೇರ

Donate Janashakthi Media

Leave a Reply

Your email address will not be published. Required fields are marked *