ವಿದ್ಯುತ್ ಕಂಬಕ್ಕೆ ಡಿಸೇಲ್ ತುಂಬಿದ ಲಾರಿ ಡಿಕ್ಕಿ; ತಪ್ಪಿದ ಭಾರಿ ಅನಾಹುತ

ಹರಪನಹಳ್ಳಿ (ವಿಜಯನಗರ): ಡಿಸೇಲ್ ತುಂಬಿದ ಲಾರಿಯೊಂದು ಇಂದು ಬೆಳ್ಳಂಬೆಳಗ್ಗೆ ವಿಜಯನಗರ ಜಿಲ್ಲೆಯ ಹರಪನಹಳ್ಳಿ ತಾಲೂಕಿನ ನಂದಿಬೇವೂರು ಗ್ರಾಮದಲ್ಲಿ ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದಿದ್ದು, ಚಾಲಕನಿಗೆ ಗಾಯವಾದ ಘಟನೆ ನಡೆದಿದೆ.

ಚಾಲಕನನ್ನು ಹರಪನಹಳ್ಳಿ ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ. ವಿದ್ಯುತ್ ಕಂಬಕ್ಕೆ ಲಾರಿ  ಡಿಕ್ಕಿ ಹೊಡೆದ ಕೂಡಲೇ  ಬೆಸ್ಕಾಂ ಸಿಬ್ಬಂದಿ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದಾರೆ. ಇದರಿಂದ ಭಾರಿ ಅನಾಹುತ ತಪ್ಪಿದೆ.

ಇನ್ನೂ ಲಾರಿಯಿಂದ ಡಿಸೇಲ್ ಸೋರಿಕೆಯಾಗುತ್ತಲೇ ಡಿಸೇಲ್ ತುಂಬಿಕೊಳ್ಳಲು ಜನ ನಾ ಮುಂದು, ತಾ ಮುಂದು ಎಂದು ಮುಗಿ ಬಿದ್ದಿದ್ದು ಕಂಡು ಬಂತು. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸ್ ಮತ್ತು ಅಗ್ನಿ ಶಾಮಕದಳ ಸಿಬ್ಬಂದಿಗಳು ತೆರವುಕಾರ್ಯವನ್ನು ಕೈಗೊಂಡರು.

Donate Janashakthi Media

Leave a Reply

Your email address will not be published. Required fields are marked *