ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ವಿಡೀಯೋ ವೈರಲ್

ತುಮಕೂರು: ಕಾಮಗಾರಿ ಮಾಡಿದರೂ ಕೂಡ ಇನ್ನು ಹಣ ಬಿಡುಗಡೆ ಮಾಡಿಲ್ಲ ಎಂದು ಆರೋಪಿಸಿ ಗುತ್ತಿಗೆದಾರ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿರುವ ಘಟನೆ ಪಾವಗಡ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ವಿಡೀಯೋ ವೈರಲ್ ಆಗಿದೆ.

ಕಾಮಗಾರಿ ಮುಗಿಸಿದರೂ ಸಹ ಹಣ ಬಿಡುಗಡೆ ಮಾಡದ ಆರೋಪ ಹಿನ್ನೆಲೆಯಲ್ಲಿ ವಿಶ್ವೇಶ್ವರಯ್ಯ ಜಲ ನಿಗಮ ಮಂಡಳಿ ಎಂ.ಡಿ.ಸಣ್ಣಚಿತ್ತಪ್ಪ ವಿರುದ್ಧ ಗುತ್ತಿಗೆದಾರ ಆರೋಪ ಮಾಡಿದ್ದಾರೆ.

ಇದನ್ನೂ ಓದಿ: ಕರ್ನಾಟಕ ಲೋಕಸಭೆ | ಬಿಜೆಪಿಗೆ ಆಘಾತ, ಕೈಗೆ ಹೊಡೆತ!

ಜಿನ್ನೆನಹಳ್ಳಿ ಗ್ರಾಮದ ಸುಜಿತ್ ವಿಡಿಯೋ ಮಾಡಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ ಪಾವಗಡದ ಗುತ್ತಿಗೆದಾರ ಎಂದು ತಿಳಿದುಬಂದಿದೆ. ಎಸ್‌ಸಿಪಿ ಅಡಿ ಕಾಮಗಾರಿ ಮಾಡಿದ್ದ ಗುತ್ತಿಗೆದಾರ ಸುಜೀತ್ ಕಾಮಗಾರಿ ಮಾಡಿದ್ದರು.

ಎಂ.ಡಿ ಸಣ್ಣಚಿತ್ತಯ್ಯ ಕಾಮಗಾರಿಯ ಬಿಲ್ ಕ್ಲಿಯರ್ ಮಾಡಲು ಮೀನಾಮೇಷ. ಎಂಜಿನಿಯರ್, ಎಇಇ ಎಲ್ಲಾ ಹಂತದ ಅಧಿಕಾರಿಗಳು ಸಹಿ ಮಾಡಿದ್ದರೂ ತನಿಖೆಯ ನೆಪವನ್ನು ಎಂ.ಡಿ.ಸಣ್ಣಚಿತ್ತಯ್ಯ ಹೇಳುತ್ತಿದ್ದಾರೆಂದು ದೂರಿದ್ದಾರೆ.

ಇನ್ನು ಕಾಮಗಾರಿ ಬಗ್ಗೆ ನಡೆಸಿದ ತನಿಖೆಯಲ್ಲೂ ಓಕೆ ಆಗಿದೆ. ಆದರೂ ಹಣ ಬಿಡುಗಡೆ ಮಾಡಿಲ್ಲ. ರಾಜಕೀಯ ದುರುದ್ದೇಶದಿಂದ ಹಣ ಬಿಡುಗಡೆ ಆಗಿಲ್ಲ. ಹೀಗಾಗಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಸುಜೀತ್ ವಿಡೀಯೋ ಮಾಡಿ ಆತ್ಮಹತ್ಯೆ ಬೆದರಿಕೆ ಹಾಕಿದ್ದಾರೆ.

ಇದನ್ನೂ ನೋಡಿ: ಇಂದಿನ ಬಂಡವಾಳಶಾಹಿಯನ್ನು ಅರ್ಥಮಾಡಿಕೊಳ್ಳಲು ಬಂಡವಾಳ ಪುಸ್ತಕವನ್ನು ಓದಲೇಬೇಕು -ಡಾ. ಜಿ.ರಾಮಕೃಷ್ಣ Janashakthi Media

Donate Janashakthi Media

Leave a Reply

Your email address will not be published. Required fields are marked *